Breaking News

Yearly Archives: 2026

ಕೇರಳ‌ ಸಿಎಂ ಪಿಣರಾಯಿ ವಿಜಯನ್ ರಾಜೀನಾಮೆ

ತಿರುವನಂತಪುರಂ: ಕೇರಳ ವಿಧಾನಸಭಾ ಚುನಾವಣೆಯಲ್ಲಿ ಎಲ್‌ಡಿಎಫ್  ಸರ್ಕಾರ ಸೋಲುಂಡ ಬೆನ್ನಲ್ಲೇ ಕೇರಳ  ಸಿಎಂ ಪಿಣರಾಯಿ ವಿಜಯನ್  ರಾಜೀನಾಮೆ  ಸಲ್ಲಿಸಿದ್ದಾರೆ. ಕೇರಳ ವಿಧಾನಸಭಾ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಭರ್ಜರಿ ಜಯ ದಾಖಲಿಸಿದೆ. ಪಿಣರಾಯಿ ವಿಜಯನ್ ನೇತೃತ್ವದ ಎಲ್‌ಡಿಎಫ್ ಆಡಳಿತಕ್ಕೆ ಅಂತ್ಯ ಹಾಡಿರುವ ಯುಡಿಎಫ್ 10 ವರ್ಷದ ಬಳಿಕ ಮತ್ತೆ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಈ ಹಿನ್ನೆಲೆ ಸಿಎಂ ಪಿಣರಾಯಿ ವಿಜಯನ್ ತಮ್ಮ ರಾಜೀನಾಮೆ …

Read More »

ಹಜ್ ಯಾತ್ರಿಕರು ರಾಜ್ಯದ ಒಳಿತಿಗಾಗಿಯೂ ಪ್ರಾರ್ಥಿಸಿ: ಸಿದ್ದರಾಮಯ್ಯ

ಬೆಂಗಳೂರು: ಹಜ್ ಯಾತ್ರಿಕರು  ಮಾಡುವ ಪ್ರಾರ್ಥನೆಯಲ್ಲಿ ರಾಜ್ಯದ ಒಳಿತನ್ನೂ ಬಯಸಿರಿ ಎಂದು ಕೋರುತ್ತಾ, ಹಜ್ ಯಾತ್ರೆಯು ಸುಖಕರವಾಗಿರಲೆಂದು ಪ್ರಾರ್ಥಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ  ತಿಳಿಸಿದರು. ಕರ್ನಾಟಕ ಹಜ್ ಸಮಿತಿ ವತಿಯಿಂದ ಹಜ್ -2026 ಹಜ್ ಯಾತ್ರಿಕರ ವಿಮಾನಯಾನ ಉಡಾವಣೆಗೆ ಚಾಲನೆ ನೀಡಿ ಮಾತನಾಡಿದ ಅವರು, ಇಸ್ಲಾಂ ಧರ್ಮದ ಪ್ರಮುಖ ಐದು ಆಧಾರ ಸ್ತಂಭಗಳಲ್ಲಿ ಹಜ್ ಆಚರಣೆಯೂ ಒಂದಾಗಿದ್ದು, ಪ್ರತಿಯೊಬ್ಬ ಮುಸಲ್ಮಾನನೂ ತನ್ನ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಹಜ್ ಯಾತ್ರೆಯನ್ನು ಕೈಗೊಳ್ಳಲೇಬೇಕಾಗಿದೆ. ಹಜ್ ಯಾತ್ರೆ …

Read More »

8 ಗ್ರಾಂ ಚಿನ್ನ, 6 ಸಿಲಿಂಡರ್‌ ಉಚಿತ, ಪದವೀಧರರಿಗೆ 4,000 ಭತ್ಯೆ – ʻವಿಜಯʼ ಭರವಸೆಯತ್ತ ಜನರ ಚಿತ್ತ!

ಚೆನ್ನೈ: ತಮಿಳುನಾಡಿನ ರಾಜಕೀಯದಲ್ಲಿ ದಳಪತಿ ವಿಜಯ್ ದರ್ಬಾರ್ ಶುರುವಾಗಿದೆ. ರಾಜಕೀಯಕ್ಕೆ ಧುಮುಕಿದ ಮೊದಲ ಯತ್ನದಲ್ಲೇ ಬ್ಲಾಕ್‌ಬಸ್ಟರ್ ಶೋ ಕಂಡಿದ್ದು, ಪೊಲಿಟಿಕಲ್ ಸೂಪರ್‌ಸ್ಟಾರ್ ಆಗಿ ವಿಜಯ್ ದಳಪತಿ ಹೊರಹೊಮ್ಮಿದ್ದಾರೆ. ವಿಜಯ್ `ಮಾಸ್ಟರ್’ ಸ್ಟ್ರೋಕ್‌ಗೆ ಆಡಳಿತರೂಢ ಸ್ಟಾಲಿನ್ ನೇತೃತ್ವದ ಡಿಎಂಕೆ ಗಿರಗಿಟ್ಲೆ ಹೊಡೆದಿದೆ. ಅಲ್ಲದೇ 3ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಮೊದಲ ಬಾರಿಗೇ ರಾಜಕೀಯ ಅಗ್ನಿಪರೀಕ್ಷೆಯಲ್ಲಿ ವಿಜಯ್ ಡಿಸ್ಟಿಂಕ್ಷನ್‌ನಲ್ಲಿ ಪಾಸ್ ಆಗಿದ್ದಾರೆ. ಯುವ ಮತದಾರರು. ಸಿನಿಮಾ ಕ್ರೇಜ್.. ಕರೂರು ಕಾಲ್ತುಳಿತ ಪ್ರಕರಣದ ಅನುಕಂಪವೂ ವಿಜಯ್‌ಗೆ …

Read More »

ಆಡಳಿತಕ್ಕೆ ವೇಗ: ‘ಕರ್ನಾಟಕ ಪ್ರಗತಿ ಪೋರ್ಟಲ್’ ಲೋಕಾರ್ಪಣೆ ಮಾಡಿದ ಸಿಎಂ ಸಿದ್ದರಾಮಯ್ಯ

ರಾಜ್ಯದ ಅಭಿವೃದ್ಧಿ ಯೋಜನೆಗಳಿಗೆ ಇನ್ಮುಂದೆ ಸಿಗಲಿದೆ ಡಿಜಿಟಲ್ ವೇಗ. ವಿಧಾನಸೌಧದಲ್ಲಿಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹತ್ವದ ‘ಕರ್ನಾಟಕ ಪ್ರಗತಿ ಪೋರ್ಟಲ್’ ಬಿಡುಗಡೆ ಮಾಡುವ ಮೂಲಕ ಆಡಳಿತದಲ್ಲಿ ಹೊಸ ಕ್ರಾಂತಿಗೆ ನಾಂದಿ ಹಾಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ರಾಜ್ಯದ ಎಲ್ಲಾ ಇಲಾಖೆಗಳ ಮಾಹಿತಿ ತಂತ್ರಜ್ಞಾನ ಯೋಜನೆಗಳ ಪರಿಶೀಲನೆ ಹಾಗೂ ಸಮನ್ವಯಕ್ಕಾಗಿ ನೂತನ ‘ಕರ್ನಾಟಕ ಪ್ರಗತಿ ಪೋರ್ಟಲ್’ ಮತ್ತು ಮಾರ್ಗದರ್ಶಿ ‘ಕೈಪಿಡಿ’ಯನ್ನು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಸರ್ಕಾರದ …

Read More »

ರೌಡಿ ಶೀಟರ್ ‘ಜ್ಯಾಕ್’ ಆರು ತಿಂಗಳು ಗಡಿಪಾರು; ಅಜ್ಜಂಪುರಕ್ಕೆ ಶಿಫ್ಟ್ ಮಾಡಿದ ಪೊಲೀಸ್

ಕಾರವಾರ:ಜಿಲ್ಲೆಯಲ್ಲಿ ಸತತವಾಗಿ ಕ್ರಿಮಿನಲ್ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸಾರ್ವಜನಿಕ ಶಾಂತಿಗೆ ಭಂಗ ತರುತ್ತಿದ್ದ ರೌಡಿ ಅಸಾಮಿಯೊಬ್ಬನನ್ನು ಉತ್ತರ ಕನ್ನಡ ಜಿಲ್ಲೆಯಿಂದ ಆರು ತಿಂಗಳ ಅವಧಿಗೆ ಗಡಿಪಾರು ಮಾಡಿ ಆದೇಶ ಹೊರಡಿಸಲಾಗಿದೆ. ಕಾರವಾರ ನಗರದ ಕಳಸವಾಡ (ಬಾಡ) ನಿವಾಸಿ ಸೂರ್ಯಕಾಂತ ಕಳಸ ಅಲಿಯಾಸ್ ಜ್ಯಾಕ್ (27) ಎಂಬಾತನೇ ಗಡಿಪಾರಾದ ವ್ಯಕ್ತಿ. ಈತನ ಮೇಲೆ ಕಾರವಾರ ನಗರ ಮತ್ತು ಗ್ರಾಮೀಣ ಪೊಲೀಸ್ ಠಾಣೆಗಳಲ್ಲಿ ಕೊ. ಲೆ ಯತ್ನ, ಹ., ಲ್ಲೆ, ಬೆದರಿಕೆ, ಜೂಜಾಟ ಹಾಗೂ …

Read More »

ಗದಗ ಪೊಲೀಸರ ಭರ್ಜರಿ ಕಾರ್ಯಾಚರಣೆ: 11 ಅಂತರರಾಜ್ಯ ಕಳ್ಳರ ಬಂಧನ, 1.26 ಕೋಟಿ ಮೌಲ್ಯದ ಚಿನ್ನಾಭರಣ ವಶ!

ಗದಗ ಜಿಲ್ಲೆಯಲ್ಲಿ ಸರಣಿ ಕಳ್ಳತನದ ಮೂಲಕ ಜನರಲ್ಲಿ ನಡುಕ ಹುಟ್ಟಿಸಿದ್ದ ಅಂತರರಾಜ್ಯ ಕಳ್ಳರ ಗ್ಯಾಂಗ್‌ ಅನ್ನು ಬೆಟಗೇರಿ ವೃತ್ತದ ಪೊಲೀಸರು ಸಿನಿಮೀಯ ರೀತಿಯಲ್ಲಿ ಬಂಧಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ನೇತೃತ್ವದ ತಂಡ ನಡೆಸಿದ ಈ ಬೃಹತ್ ಕಾರ್ಯಾಚರಣೆಯಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಗದಗ ಜಿಲ್ಲೆಯಲ್ಲಿ ಸರಣಿ ಕಳ್ಳತನ ನಡೆಸುತ್ತಿದ್ದ ಅಂತರರಾಜ್ಯ ತಂಡವನ್ನು ಬೆಟಗೇರಿ ವೃತ್ತದ ಪೊಲೀಸರು ಭರ್ಜರಿ ಕಾರ್ಯಾಚರಣೆಯ ಮೂಲಕ ಮಟ್ಟಹಾಕಿದ್ದಾರೆ. ಜಿಲ್ಲಾ ಪೊಲೀಸ್ …

Read More »

ಧರ್ಮದ ರಕ್ಷಣೆ ನಾವು ಮಾಡಿದರೆ ಮಾತ್ರ ನಮ್ಮನ್ನು ಧರ್ಮ ರಕ್ಷಣೆ ಮಾಡುತ್ತೆ ಡಾ. ಅಭಿನವ ಸ್ವಾಮೀಜಿ ಅಭಿಮತ

ಗಡಿ ರಕ್ಷಣೆ ಮಾಡುವ ಸೈನಿಕರು ಧರ್ಮರಕ್ಷಣೆ ಮಾಡಬಹುದು ಎಂಬರಕ್ಕೆ ಉದಾಹರಣೆ ಅಂದರೆ ಸೈನಿಕರು ಕಾಗವಾಡದಲ್ಲಿ ಕಟ್ಟಿಸಿದ ವಿಠ್ಠಲ- ರುಕ್ಮಿಣಿ ಮಂದಿರ ಸಾಕ್ಷಿಯಾಗಿದೆ. ಇದರಿಂದ ನಾವು ಎಲ್ಲರೂ ಧರ್ಮದ ರಕ್ಷಣೆ ಮಾಡಿದರೆ ಮಾತ್ರ ನಮ್ಮನ್ನು ಧರ್ಮ ರಕ್ಷಣೆ ಮಾಡಲಿದೆ, ಧರ್ಮೋ ಧರ್ಮ ರಕ್ಷಿತಾ ಎಂದು ಪರಮಾನಂದವಾಡಿ ಅಭಿನವ ಮಠದ ಡಾಕ್ಟರ್ ಅಭಿನವ ಸ್ವಾಮೀಜಿ ಕಾಗವಾಡದಲ್ಲಿ ಹೇಳಿದರು. ಶನಿವಾರ ರಂದು ಕಾಗವಾಡದ ಸಾವಿರಾರು ಭಕ್ತರ ಶ್ರದ್ಧಾ ಸ್ಥಾನವಾಗಿರುವ ಶ್ರೀ ಅಂಬಾಬಾಯಿ ಮಂದಿರದಲ್ಲಿ ವಿಠಲ …

Read More »

ಧಾರವಾಡದಲ್ಲಿ ನಿವೃತ್ತಿಯದ ಸೈನಿಕನಿಗೆ ಅದ್ದೂರಿ ಸ್ವಾಗತ… ಸ್ವಗ್ರಾಮದಲ್ಲಿ ಯೋಧನಿಗೆ ಗ್ರಾಮಸ್ಥರಿಂದ ಅದ್ಧೂರಿ ಸ್ವಾಗತ

ಭಾರತೀಯ ಸೇನೆಯಲ್ಲಿ ಸುದೀರ್ಘ 24 ವರ್ಷಗಳ ಕಾಲ ಸೇವೆ ಸಲ್ಲಿಸಿ ಮರಳಿ ಸ್ವಗ್ರಾಮಕ್ಕೆ ಬಂದ ಯೋಧನಿಗೆ ಧಾರವಾಡದ ಕಲ್ಲೂರು ಗ್ರಾಮಸ್ಥರು ಅದ್ಧೂರಿ ಸ್ವಾಗತ ಕೋರಿದರು. ಧಾರವಾಡ ತಾಲೂಕಿನ ಕಲ್ಲೂರು ಗ್ರಾಮದ ಮಹ್ಮದ್‌ಸಾದಿಕ್ ಹಂಚಿಮನಿ ಊರ್ಫ್ ಸೈಯದ್‌ನವರ ಯೋಧ ಭಾರತೀಯ ಸೇನೆಯಲ್ಲಿ ಸುದೀರ್ಘ 24 ವರ್ಷ ಸೇವೆ ಸಲ್ಲಿಸಿ ಮರಳಿ ಸ್ವಗ್ರಾಮಕ್ಕೆ ಬಂದಿದ್ದಾರೆ. ಮರಾಠಾ ಲೈಫ್ ಇನ್‌ಫೆಂಟರಿ ರೆಜೆಂಟ್ ಮೂಲಕ ಭಾರತೀಯ ಸೇನೆ ಸೇರಿದ ಮಹ್ಮದ್‌ಸಾದಿಕ್ ಅವರು ಮಣಿಪುರ, ಸೌತ್‌ಸುಡಾನ್, ಅಸ್ಸಾಂ, …

Read More »

ನಮ್ಮ ‘ಮಸಾಲ ದೋಸೆ’ ಈಗ ವಿಶ್ವ ವಿಜೇತ! ಕನ್ನಡಿಗರ ನೆಚ್ಚಿನ ತಿಂಡಿಗೆ ಜಾಗತಿಕ ಮನ್ನಣೆ! 

ದೋಸೆ ಪ್ರಿಯರೇ, ಸಂಭ್ರಮಿಸಲು ಇಲ್ಲಿದೆ ಒಂದು ಅದ್ಭುತ ಸುದ್ದಿ! ವಿಶ್ವದ ‘ಟಾಪ್ 50 ಅತ್ಯುತ್ತಮ ಪ್ಯಾನ್‌ಕೇಕ್‌ಗಳ’ ಪಟ್ಟಿಯಲ್ಲಿ ನಮ್ಮ ಹೆಮ್ಮೆಯ ಮಸಾಲ ದೋಸೆ ಮತ್ತು ಪೇಪರ್ ದೋಸೆ ಭರ್ಜರಿಯಾಗಿ ಸ್ಥಾನ ಪಡೆದಿವೆ! ಏನಿದು ವಿಶೇಷ? ಖ್ಯಾತ ಆಹಾರ ವಿಶ್ಲೇಷಣಾ ಸಂಸ್ಥೆ ‘ಟೇಸ್ಟ್ ಅಟ್ಲಾಸ್’ (TasteAtlas) ಬಿಡುಗಡೆ ಮಾಡಿರುವ ವಿಶ್ವದ ಅತ್ಯುತ್ತಮ ಪ್ಯಾನ್‌ಕೇಕ್‌ಗಳ ಪಟ್ಟಿಯಲ್ಲಿ ಭಾರತದ ದೋಸೆಗಳು ಜಗತ್ತಿನ ದಿಗ್ಗಜ ಆಹಾರ ಪದಾರ್ಥಗಳಿಗೆ ಫೈಟ್ ನೀಡಿ ಟಾಪ್ ಲಿಸ್ಟ್ ಸೇರಿವೆ. ಪಟ್ಟಿಯಲ್ಲಿ …

Read More »

ಮದುವೆ ಎಂಬ ನಂಬಿಕೆಯ ಹೆಸರಲ್ಲಿ ವಂಚನೆ: ಟೆಕ್ಕಿಯೊಬ್ಬನ ಬಲಿ ಪಡೆದ ವಿಧಿ!

ಹೈದರಾಬಾದ್‌ನಲ್ಲಿ ನಡೆದ ಈ ಘಟನೆ ನಿಜಕ್ಕೂ ಬೆಚ್ಚಿಬೀಳಿಸುವಂತಿದೆ. ತನ್ನ ಜೀವನ ಸಂಗಾತಿಯೇ ತನ್ನನ್ನು ನಡುನೀರಲ್ಲಿ ಕೈಬಿಟ್ಟಾಗ, ಮನನೊಂದ ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಏನಿದು ಘಟನೆ? ಹೈದರಾಬಾದ್‌ನ ಟೆಕ್ಕಿಯೊಬ್ಬರು ತನ್ನ ಪತ್ನಿಯ ನಡವಳಿಕೆಯಿಂದ ಬೇಸತ್ತು ಸಾವಿನ ಹಾದಿ ಹಿಡಿದಿದ್ದಾರೆ. ಸಾಯುವ ಮುನ್ನ ಬರೆದ ಡೆತ್‌ನೋಟ್‌ನಲ್ಲಿ ಅವರು ಹೇಳಿರುವ ಮಾತುಗಳು ಕರುಳು ಹಿಂಡುವಂತಿವೆ. ನಂಬಿಕೆಯ ದ್ರೋಹ: ತನ್ನ ಪತ್ನಿ ಅನೇಕ ಪುರುಷರೊಂದಿಗೆ ಸಂಬಂಧ ಹೊಂದಿದ್ದಾಳೆ ಎಂದು ಆರೋಪಿಸಿರುವ ಅವರು, ಇದರಿಂದ …

Read More »