Breaking News

ಬೀದಿ ವ್ಯಾಪಾರಿಗಳ ಭೂಬಾಡಿಗೆ ಜಿಲ್ಲಾಧಿಖಾರಿ ಕಚೇರಿ ಎದುರು ಪ್ರತಿಭಟನೆ

Spread the love

ಬೆಳಗಾವಿ : ಗ್ರಾಪಂದಿಂದ ಬೀದಿ ವ್ಯಾಪಾರಿಗಳ ದಿನಿನಿತ್ಯದ ಭೂಬಾಡಿಗೆಯನ್ನು ಏಕಾಏಕಿಯಾಗಿ ಹೆಚ್ಚುವರಿ ಮಾಡುವುದರ ಜತೆಗೆ, ಕಟ್ಟುವ ಬಾಡಿಗೆಗೆ ರಸೀದಿಯನ್ನೂ ನೀಡುತ್ತಿಲ್ಲ ಎಂದು ಆರೋಪಿಸಿ ಗಣೇಶಪುರ ಪೈಪ್‌ಲೈನ್ ರಸ್ತೆಯ ಬೀದಿ ಬದಿ ವ್ಯಾಪಾರಿಗಳು ಸೋಮವಾರ ಪ್ರತಿಭಟಿಸಿದರು.
ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿದ ವ್ಯಾಪಾರಿಗಳು, ತಮಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್‌ರಿಗೆ ಮನವಿ ಪತ್ರ ಸಲ್ಲಿಸಿದರು.
ಗ್ರಾಪಂ ಸಿಬ್ಬಂದಿ ಯೋಗೇಶ ಎಂಬಾತ ನಿತ್ಯವೂ ಬೀದಿ ವ್ಯಾಪಾರಿಗಳಿಂದ 10ರೂ. ಭೂ ಬಾಡಿಗೆ ವಸೂಲಿ ಮಾಡುತ್ತಿದ್ದು, ರಸೀದಿ ಮಾತ್ರ ಕೊಡುವುದಿಲ್ಲ. ಈಗ ಏಕಾಏಕಿಯಾಗಿ 50ರೂ.ಗೆ ಏರಿಸಿದ್ದಾರೆ. 50ರೂ. ಕೊಡದಿದ್ದಲ್ಲಿ ಗ್ರಾಪಂದಿಂದ ನೋಟಿಸ್ ನೀಡುವುದಾಗಿ ಹೆದರಿಸುತ್ತಿದ್ದಾರೆ. ನಿತ್ಯ ಸಂಜೆ ಹೊತ್ತು ಮಾತ್ರ ವ್ಯಾಪಾರ ಮಾಡುವ ನಮಗೆ 50ರೂ. ಹೊರೆಯಾಗುತ್ತದೆ. ಆದ್ದರಿಂದ ಮೊದಲಿನಂದ 10ರೂ. ಮಾತ್ರ ಆಕರಣೆ ಮಾಡುವಂತೆ ಸೂಚಿಸಬೇಕು ಎಂದು ಒತ್ತಾಯಿಸಿದರು.
ಜ್ಯೋತಿ ಕೊಲ್ಲಾಪುರೆ, ಅಮಿತ ರತನ್, ಗಂಗವ್ವ, ಪ್ರಗತಿ ಪಾಟೀಲ, ಸುಗುಣಾ ಮೇಘವಾಲ್, ಮೋಹನ ಮಾಸೆಕರ, ರೋಹಿತ ಗಣತಡೆ ಇತರರಿದ್ದರು.

Spread the love

About Laxminews 24x7

Check Also

ಕನಿಷ್ಠ ವೇತನ ಹೆಚ್ಚುವರಿ ಆದೇಶ ವಾಪಸ್ಸು ಪಡೆಯಲು ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ

Spread the loveಬೆಳಗಾವಿ : ರಾಜ್ಯ ಸರ್ಕಾರದ ಕನಿಷ್ಠ ವೇತನ ಹೆಚ್ಚಳದ ತಿದ್ದುಪಡಿ ಆದೇಶವನ್ನು ವಿರೋಧಿಸಿ ನಗರದಲ್ಲಿ  ವಿವಿಧ ವ್ಯಾಪಾರ ಮತ್ತು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ