Breaking News

ಉಗ್ರ ಸಂಘಟನೆಯ ಸಂಪರ್ಕದಲ್ಲಿದ್ದ ಆರೋಪದ ಮೇಲೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಯುವಕನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಐಎ) ಅಧಿಕಾರಿಗಳು ಬಂಧಿಸಿದ್ದಾರೆ.

ಕಾರವಾರ: ಲಷ್ಕರ್-ಎ-ತೊಯ್ಬಾ (ಎಲ್‍ಇಟಿ) ಉಗ್ರ ಸಂಘಟನೆಯ ಸಂಪರ್ಕದಲ್ಲಿದ್ದ ಆರೋಪದ ಮೇಲೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಯುವಕನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಐಎ) ಅಧಿಕಾರಿಗಳು ಬಂಧಿಸಿದ್ದಾರೆ. 28 ವರ್ಷದ ಸೈಯದ್ ಇದ್ರಿಸ್ ನಬಿ ಸಾಬ್ ಬಂಧಿತ ಆರೋಪಿಯಾಗಿದ್ದಾನೆ. ಲಷ್ಕರ್-ಎ-ತೊಯ್ಬಾದ ಸಂಘಟನೆಯಲ್ಲಿ ಗುರುತಿಸಿಕೊಂಡು ಪಶ್ಚಿಮಬಂಗಾಳದಲ್ಲಿ ಬಂಧಿಯಾಗಿದ್ದ ತಾನಿಯಾ ಪರ್ವೀನ್ ಎನ್ನುವವನೊಂದಿಗೆ ಈತ ಸಂಪರ್ಕ ಹೊಂದಿದ್ದ ಆರೋಪದಲ್ಲಿ ಈತನನ್ನು ಬಂಧಿಸಲಾಗಿದೆ. ಮೊಬೈಲ್ ಫೋನ್ ಆಧಾರದ ಮೇಲೆ ಈತನನ್ನ ಬಂಧಿಸಲಾಗಿದೆ. ಎನ್‍ಐಎ ಪ್ರಾಥಮಿಕ ತನಿಖೆಯ …

Read More »

20 ದಿನಗಳಿಗೆ ಮೇಘನಾ ರಾಜ್ ಅವರ ಮುದ್ದು ಕಂದಮ್ಮನ ತೊಟ್ಟಿಲ ಶಾಸ್ತ್ರ

ಬೆಂಗಳೂರು: ಚಿರು ಸರ್ಜಾ ಅವರನ್ನು ಕಳೆದುಕೊಂಡು ದುಖಃದಲ್ಲಿರುವ ಕುಟುಂಬಕ್ಕೆ ಕಿರುನಗೆ ಬಂದಿರುವುದು ಚಿರುನ ಪುಟ್ಟ ಕಂದಮ್ಮನಿಂದ. ಮೇಘನಾ ಮತ್ತು ಚಿರುನ ಮುದ್ದು ಮಗುವಿನ ಜನನದಿಂದ ಕುಟುಂಬಸ್ಥರಲ್ಲಿ ಸಂತೋಷ ಮನೆ ಮಾಡಿದೆ. ಮೇಘನಾ ರಾಜ್ ಕಳೆದ ತಿಂಗಳ ಅಕ್ಟೋಬರ್ 22ರಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಇದೀಗ 20 ದಿನಗಳ ಬಳಿಕ ಮೇಘನಾ ಮನೆಯಲ್ಲಿ ತೊಟ್ಟಿಲ ಶಾಸ್ತ್ರದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ನಾಳೆ ನವೆಂಬರ್ 12ರಂದು ಬೆಂಗಳೂರಿನ ಜೆಪಿ ನಗರದ ನಿವಾಸದಲ್ಲಿ ಮೇಘನಾ …

Read More »

ರಿಪಬ್ಲಿಕ್‌ ಟಿವಿ ಸಂಪಾದಕ ಅರ್ನಬ್‌ ಗೋಸ್ವಾಮಿ ಅವರಿಗೆ ಸುಪ್ರೀಂ ಕೋರ್ಟ್‌ ಮಧ್ಯಂತರ  ಜಾಮೀನು ಮಂಜೂರು ಮಾಡಿದೆ

ನವದೆಹಲಿ: ರಿಪಬ್ಲಿಕ್‌ ಟಿವಿ ಸಂಪಾದಕ ಅರ್ನಬ್‌ ಗೋಸ್ವಾಮಿ ಅವರಿಗೆ ಸುಪ್ರೀಂ ಕೋರ್ಟ್‌ ಮಧ್ಯಂತರ  ಜಾಮೀನು ಮಂಜೂರು ಮಾಡಿದೆ ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ಮತ್ತು ಇಂದಿರಾ ಬ್ಯಾನರ್ಜಿ ಅವರನ್ನೊಳಗೊಂಡ ನ್ಯಾಯಪೀಠ ಇಂದು ವಿಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಿ ಜಾಮೀನು ಮಂಜೂರು ಮಾಡಿದೆ.  ಈ ವೇಳೆ ಕೋರ್ಟ್‌ 50 ಸಾವಿರ ಶ್ಯೂರಿಟಿ ವಿಧಿಸಿದೆ. ಮೇ 2018 ರಲ್ಲಿ ಅಲಿಬಾಗ್‌ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದ ಇಂಟೀರಿಯರ್ ಡಿಸೈನರ್ ಅನ್ವಯ್ ನಾಯಕ್ ಅವರ ಆತ್ಮಹತ್ಯೆಗೆ …

Read More »

ಮತ್ತೊಬ್ಬ ಯುವಕನ ಜತೆ ನಿಶ್ಚಿತಾರ್ಥವಾಗಿರುವ ಸುದ್ದಿ ತಿಳಿದು ಪ್ರೇಮಿಗಳಿಬ್ಬರು  ವಿಷ ಸೇವಿಸಿ   ಆತ್ಮಹತ್ಯೆ 

ರಾಯಚೂರು:  ಪ್ರೇಮಿಗಳಿಬ್ಬರು  ವಿಷ ಸೇವಿಸಿ   ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ  ಮಾನ್ವಿ ತಾಲೂಕಿನ  ಮಲ್ಲಟ ಗ್ರಾಮದಲ್ಲಿ  ಬುಧವಾರ  ನಡೆದಿದೆ. ಮಲ್ಲಟ ಗ್ರಾಮದ ನಿವಾಸಿಗಳಾದ ಮಹೇಶ(21)  ಅಕ್ಷತಾ(19) ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು.  ಹಲವು ದಿನಗಳಿಂದ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಮಹೇಶ ಬೆಂಗಳೂರಿನಲ್ಲಿ  ಕೆಲಸ  ಮಾಡುತ್ತಿದ್.   ಇತ್ತ ಅಕ್ಷತಾಳಿಗೆ ಪೋಷಕರು ಮತ್ತೊಬ್ಬನ  ಜತೆ ನಿಶ್ಚಿತಾರ್ಥ ಮಾಡಿದ್ದರು. ಅಕ್ಷತಾಳಿಗೆ ಮತ್ತೊಬ್ಬ ಯುವಕನ ಜತೆ ನಿಶ್ಚಿತಾರ್ಥವಾಗಿರುವ ಸುದ್ದಿ ತಿಳಿದು  ಮಹೇಶ ಸ್ವಗ್ರಾಮಕ್ಕೆ ವಾಪಸ್ …

Read More »

ಜವಾಬ್ದಾರಿಯುತ ಸ್ಥಾನದಲ್ಲಿರುವವರುಅಸಭ್ಯವಾಗಿ ನಡೆದುಕೊಳ್ಳುವುದನ್ನು ನಾವು ಖಂಡಿಸುತ್ತೇವೆ.: ಸತೀಶ್ ಜಾರಕಿಹೊಳಿ

ಗೋಕಾಕ: ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿಯ ಮಹಾಲಿಂಗಪುರ ಪುರಸಭೆಗೆ ಸಂಬಂಧಿಸಿದಂತೆ ನಡೆದ ಘಟನೆಯು ಒಂದು ಕೆಟ್ಟ ಸಂಪ್ರದಾಯವಾಗಿದೆ. ಅಧ್ಯಕ್ಷೆ ಆಕಾಂಕ್ಷಿಯಾಗಿರುವ ಮಹಿಳೆಯನ್ನು ಎಳೆದಾಡಿ ಬಿಜೆಪಿ ಶಾಸಕ ಸಿದ್ದು ಸವದಿ ಸೇರಿದಂತೆ ಇತರರು ಅಸಭ್ಯ ವರ್ತನೆ ತೋರಿರುವುದು ಒಂದು ಕೆಟ್ಟ ಸಂಪ್ರದಾಯಾವಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.     ನಗರದ ಅವರ ಹೀಲ್ ಗಾರ್ಡನ್ ಕಛೇರಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜವಾಬ್ದಾರಿಯುತ ಸ್ಥಾನದಲ್ಲಿರುವವರು ಈ ರೀತಿ …

Read More »

ಎಲ್ಲರಿಗೂ  ಮಂತ್ರಿ ಸ್ಥಾನ ಸಿಗತ್ತೆ ಎಂದು ಹೇಳೋಕೆ ಆಗಲ್ಲ :ರಮೇಶ ಜಾರಕಿಹೊಳಿ ಹೊಸ ಬಾಂಬ್

ಬೆಂಗಳೂರು: ಎಲ್ಲರಿಗೂ  ಮಂತ್ರಿ ಸ್ಥಾನ ಸಿಗತ್ತೆ ಎಂದು ಹೇಳೋಕೆ ಆಗಲ್ಲ  ಅಂತಾ ಸಚಿವ ರಮೇಶ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದ್ದಾರೆ. ನಗರದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು,  ಸಂಪುಟ ವಿಸ್ತರಣೆ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು  ನಿರ್ಧಾರ ತಗೆದುಕೊಳ್ಳುತ್ತಾರೆ. ಮಂತ್ರಿ ಸ್ಥಾನ ನೀಡುವ ಬಗ್ಗೆ ನಾವು ಮೊದಲು  ಮಾತನಾಡಿದಂತೆಯೇ ನಡೆಯಲಿದೆ. .  ಎಲ್ಲರಿಗೂ ಮಂತ್ರಿ ಸ್ಥಾನ ಸಿಗುತ್ತದೆ ಎನ್ನುವುದು  ಸುಳ್ಳು.   ನನ್ನ ಮೂಲಕ ಪ್ರಭಾವ ಬೀರಿದರೆ ಏನು ಆಗದು.  …

Read More »

ಸಚಿವನಾಗಲು ಯಾರ ಕಾಲಿಗೂ ಬೀಳುವುದಿಲ್ಲನವೆಂಬರ್ 25 ರವರೆಗೆ ಕಾದು ನೋಡಿ

ವಿಜಯಪುರ: ತಾನು ಸಚಿವನಾಗಲು ಯಾರ ಕಾಲಿಗೂ ಬೀಳುವುದಿಲ್ಲ. ಈ ದೀಪಾವಳಿ, ಸಿಹಿ ನೀಡುತ್ತದೆಯೋ, ಕಹಿ ನೀಡುತ್ತದೆಯೋ ಎಂದು ನವೆಂಬರ್ 25 ರವರೆಗೆ ಕಾದು ನೋಡಿ ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ರಾಜಕೀಯವಾಗಿ ಮತ್ತೊಂದು ಕುತೂಹಲದ ಬಾಂಬ್ ಎಸೆದಿದ್ದಾರೆ. ನಗರದಲ್ಲಿ ನಡೆದ ವಸತಿ ಯೋಜನೆ ಸಮುಚ್ಛಯ ಕಾಮಗಾರಿಗೆ ವಸತಿ ಸಚಿವ ವಿ.ಸೋಮಣ್ಣ ಅವರೊಂದಿಗೆ ಚಾಲನೆ ನೀಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಭೀಮಾ ನದಿ …

Read More »

ಸಚಿವ ರಮೇಶ ಜಾರಕಿಹೊಳಿ  ಕೆಲ ಶಾಸಕರು ಮಹತ್ವ ಸಭೆಸೋತವರಿಗೆ ಮಣೆ ಹಾಕದಂತೆ ಒತ್ತಡ:

ಬೆಂಗಳೂರು: ಉಪ ಚುನಾವಣೆಯ ಎರಡು ಕ್ಷೇತ್ರದಲ್ಲಿ  ಅಭ್ಯರ್ಥಿಗಳು  ಜಯಗಳಿಸುತ್ತಿದ್ದಂತೆ ಆಡಳಿತ ಬಿಜೆಪಿ ಪಕ್ಷದಲ್ಲಿ ರಾಜಕೀಯ  ಚಟುವಟಿಕೆ ಗರಿಗೆದರಿದ್ದು,   ಸಚಿವ ರಮೇಶ ಜಾರಕಿಹೊಳಿ  ಕೆಲ ಶಾಸಕರು ಮಹತ್ವ ಸಭೆ ನಡೆಸಿದ್ದಾರೆ. ನಾಳೆ ಸಚಿವ ಸಂಪುಟ ಸಭೆ ಹಿನ್ನಲೆಯಲ್ಲಿ ಇಂದು  ಸಚಿವ ರಮೇಶ ಜಾರಕಿಹೊಳಿ ಅವರ ಬೆಂಗಳೂರು ನಿವಾಸದಲ್ಲಿ  ಸಚಿವ ಸ್ಥಾನದ ಆಕಾಂಕ್ಷಿಗಳಾಗಿರುವ ಸಿಎಂ ರಾಜಕೀಯ  ಕಾರ್ಯದರ್ಶಿ ರೇಣುಕಾಚಾರ್ಯ, ಮುರುಗೇಶ್ ನಿರಾಣಿ,  ಬೆಳ್ಳಿ ಪ್ರಕಾಶ,  ರಾಜುಗೌಡ ನಾಯಕ, ಶಂಕರ ಪಾಟೀಲ್ ಸೇರಿದಂತೆ ಮುಂತಾದ  …

Read More »

ಪೊಲೀಸರ ವೇಷ ಧರಿಸಿ ಸುಲಿಗೆ ಮಾಡುತ್ತಿದ್ದ ನಾಲ್ವರು ಸೆರೆ

ನವದೆಹಲಿ, ನ.11- ಪೊಲೀಸರ ವೇಷ ಧರಿಸಿ ಜನರನ್ನು ಸುಲಿಗೆ ಮಾಡುತ್ತಿದ್ದ ನಾಲ್ವರು ಕುಖ್ಯಾತ ಸುಲಿಗೆಕೋರರನ್ನು ದೆಹಲಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ರಾಕಿ (40) , ರಾಹುಲ್ ಕುಮಾರ್ (29), ಅಲೀಕ್ ಅಬ್ರಹಾಂ (37) ಮತ್ತು ರಾಹುಲ್ (27) ಬಂಧಿತ ಸುಲಿಗೆಕೋರರು. ಹೆದ್ದಾರಿಗಳಲ್ಲಿ ಹಾಗೂ ಬಸ್ ನಿಲ್ದಾಣಗಳಲ್ಲಿ ವಾಹನಗಳಿಗೆ ಕಾಯುವಂತಹ ಪ್ರಯಾಣಿಕರನ್ನು ಟಾರ್ಗೆಟ್ ಮಾಡಿ ಸುಲಿಗೆ ಮಾಡುತ್ತಿದ್ದ ಈ ತಂಡ ರಾಷ್ಟ್ರ ರಾಜಧಾನಿ ಜನರಿಗೆ ಆತಂಕಕಾರಿಯಾಗಿ ಪರಿಣಮಿಸಿತ್ತು. ಪೊಲೀಸ್ ಅಧಿಕಾರಿಗಳು ಇಲ್ಲವೆ …

Read More »

ಯುಪಿ, ಬಂಗಾಳ ಚುನಾವಣೆ ಮೇಲೆ ಒವೈಸಿ ಕಣ್ಣು

ಹೈದರಾಬಾದ್, ನ.11- ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಐದು ಕ್ಷೇತ್ರಗಳಲ್ಲಿ ಗೆದ್ದು ಬೀಗಿರುವ ಅಸಾದುದ್ದೀನ್ ಒವೈಸಿ ನೇತೃತ್ವದ ಎಐಎಂಐಎಂ ಪಕ್ಷ ಇತರ ರಾಜ್ಯಗಳ ಚುನಾವಣಾ ಅಖಾಡಕ್ಕಿಳಿಯಲು ತೀರ್ಮಾನಿಸಿದೆ. ಮುಂಬರುವ ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಆ ಎರಡು ರಾಜ್ಯಗಳ ಹಲವು ಕ್ಷೇತ್ರಗಳಲ್ಲಿ ಎಐಎಂಐಎಂ ಸ್ಪರ್ಧಿಸಲಿದೆ ಎಂದು ಅಸಾದುದ್ದೀನ್ ಒವೈಸಿ ತಿಳಿಸಿದ್ದಾರೆ. ಬಿಜೆಪಿ ವಿರೋಧಿ ಮತಗಳನ್ನು ತಮ್ಮ ಪಕ್ಷ ಪಡೆದುಕೊಳ್ಳುತ್ತಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಲು ನಿರಾಕರಿಸಿರುವ ಒವೈಸಿ …

Read More »