ಬೆಳಗಾವಿ: ಅನಾರೋಗ್ಯದಿಂದ ಸಾವನ್ನಪ್ಪಿದ್ದ ಯೋಧನ ಪಾರ್ಥೀವ ಶರೀರವನ್ನ ವಿಶೇಷ ವಿಮಾನದ ಮೂಲಕ ಬೆಳಗಾವಿಗೆ ತರಲಾಗಿದೆ. ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಮೋಟಗಿ ಬೆನ್ನೂರು ಗ್ರಾಮದ, ಹುತಾತ್ಮ ಯೋಧ ಸುರೇಶ್ ಕರ್ತವ್ಯದಲ್ಲಿದ್ದಾಗ ಅನಾರೋಗ್ಯದಿಂದ ಸಾವನ್ನಪ್ಪಿದ್ದು, ಅವರ ಪಾರ್ಥೀವ ಶರೀರವನ್ನ ವಿಮಾನ ನಿಲ್ದಾಣದಿಂದ ಅವರ ಹುಟ್ಟೂರಿಗೆ ತೆಗೆದುಕೊಂಡು ಹೋಗಲಾಯಿತು.
ಸಿಆರ್ಪಿಎಫ್ 71 ಬೆಟಾಲಿಯನ್ನಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧ ಸುರೇಶ್ ಪಾರ್ಥೀವ ಶರೀರವನ್ನು ಅಗರ್ತಲಾದಿಂದ ವಿಶೇಷ ವಿಮಾನ ಮೂಲಕ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ತರಲಾಗಿತ್ತು. ಇನ್ನು ವಿಮಾನ ನಿಲ್ದಾಣದಲ್ಲಿ ಸೇನಾ ಅಧಿಕಾರಿಗಳು ಸರ್ಕಾರಿ ಗೌರವ ಸಲ್ಲಿಸಿದ್ರು. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಹುತಾತ್ಮ ಯೋಧನಿಗೆ ಸೇನಾ ಅಧಿಕಾರಿಗಳು ಸರ್ಕಾರಿ ಗೌರವ ಸಲ್ಲಿಸಿದ್ರು.