Breaking News
Home / ರಾಜಕೀಯ / ಸಂಭ್ರಮದಲ್ಲಿದ್ದ ಈ ಗ್ರಾಮದಲ್ಲೀಗ ಸೂತಕ.. ಎತ್ತು ಹಿಡಿಯಲು ಹೋಗಿ ಪ್ರಾಣ ಕಳ್ಕೊಂಡ ಯುವಕ

ಸಂಭ್ರಮದಲ್ಲಿದ್ದ ಈ ಗ್ರಾಮದಲ್ಲೀಗ ಸೂತಕ.. ಎತ್ತು ಹಿಡಿಯಲು ಹೋಗಿ ಪ್ರಾಣ ಕಳ್ಕೊಂಡ ಯುವಕ

Spread the love

ಗದಗ: ಕಾರಹುಣ್ಣಿಮೆ ಸಂಭ್ರಮದ ವೇಳೆ ರಾಸು ಹಾಯ್ದು ಯುವಕನೊಬ್ಬ ಮೃತಪಟ್ಟ ಘಟನೆ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ಸಂಭವಿಸಿದೆ..

 

ಕಿರಣಕುಮಾರ್ ನರ್ತಿ ಮೃತ ದುದೈವಿ. ಉತ್ತರ ಕರ್ನಾಟಕ ಭಾಗದಲ್ಲಿ ಗುರುವಾರ ಕಾರಹುಣ್ಣಿಮೆ ಸಡಗರ ಕಳೆಗಟ್ಟಿತ್ತು. ಗದಗ ಜಿಲ್ಲೆಯ ಸೂರಣಗಿ ಗ್ರಾಮದಲ್ಲೂ ಕಾರಹುಣ್ಣಿಮೆ ಪ್ರಯುಕ್ತ ಆಯೋಜಿಸಿದ್ದ ಕರಿ ಹರಿಯುವ ಕಾರ್ಯಕ್ರಮದಲ್ಲಿ ರಾಸುಗಳನ್ನು ಓಡಿಸುವಾಗ ಯುವಕ ಕಿರಣಕುಮಾರ್​ಗೆ ರಾಸು ಡಿಕ್ಕಿ ಹೊಡೆದಿತ್ತು. ಡಿಕ್ಕಿಯಾದ ರಭಸಕ್ಕೆ ನೆಲಕ್ಕುರುಳಿದ್ದ ಕಿರಣಕುಮಾರ್​ ಗಂಭೀರ ಗಾಯಗೊಂಡಿದ್ದ. ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಕೊನೆಯುಸಿರೆಳೆದಿದ್ದಾನೆ. ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

About Laxminews 24x7

Check Also

ಬಹುಭಾಷಾ ನಟ ಪ್ರಕಾಶ್ ರೈ ಮತ ಚಲಾಯಿಸಿದ್ದು ಯಾರಿಗೆ ಗೊತ್ತಾ?

Spread the love ಲೋಕಸಭೆ ಚುನಾವಣೆ 2024 ರ ಎರಡನೇ ಹಂತದಲ್ಲಿ ಇಂದು ಶುಕ್ರವಾರ (ಏಪ್ರಿಲ್ 26) ಆರಂಭವಾಗಿದೆ. 13 …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ