ಬೆಳಗಾವಿ: ಕವಲೆದುರ್ಗ ಕೆಳದಿ ರಾಜಗುರು ಮಹಾಮಹತ್ತಿನ ಭುವನಗಿರಿ ಸಂಸ್ಥಾನ ಮಠದ ಷ ಬ್ರ ಡಾ.ಸಿದ್ಧಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಕೊರೊನಾ ಸೊಂಕಿಗೆ ತುತ್ತಾಗಿದ್ದು, ಇಹಲೋಕತ್ಯಜಿಸಿದ್ದಾರೆ. ಸ್ವಾಮಿಜಿ ನಿಧನಕ್ಕೆ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಜಿ ಸಂತಾಪ ವ್ಯಕ್ತಪಡಿಸಿದ್ದಾರೆ.
ಭಾರತೀಯ ಆಧ್ಯಾತ್ಮ ಪರಂಪರೆ ಜಗತ್ತಿನಲ್ಲಿಯೇ ಅನನ್ಯವಾದದ್ದು. ಮಠ-ಮಂದಿರಗಳು, ಸ್ವಾಮಿಗಳು ಈ ನಾಡಿನ ಜೀವ-ಜೀವಾಳ. ಅದರಲ್ಲೂ ವಿದ್ಯದ ಸ್ವಾಮಿಗಳು ಅಂದರೆ ಕವಲೆದುರ್ಗ ಕೆಳದಿ ರಾಜಗುರು ಮಹಾಮಹತ್ತಿನ ಭುವನಗಿರಿ ಸಂಸ್ಥಾನ ಮಠದ ಷ ಬ್ರ ಡಾ. ಸಿದ್ಧಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು. ಈ ನಾಡು ಕಂಡಂತಹ ಅಪರೂಪದ ಸ್ವಾಮಿಗಳು.ಇದೀಗ ಕೊವೀಡ್ ದಿಂದ ಲಿಂಗೈಕ್ಯರಾದದ್ದು ತಿಳಿದು ಬೇಸರ, ನೋವು ತರಿಸಿತು. ನಮ್ಮ ನಡುವಿನ ವಿದ್ಯಾವಿಶಾರದೆ ಅಂತೆ ಇದ್ದರು. ಸರ್ವಜನಾಂಗ ಮತ್ತು ಸರ್ವಧರ್ಮವನ್ನು ಪ್ರೀತಿ ಮಾಡುವಂತಹ ಮಾಡಿದ ವಿಶಾಲ ಹೃದಯ ವಂತರಾಗಿದ್ದರು.