ಬೆಳಗಾವಿಯ ನಡೆದಾಡುವ ಲೈಬ್ರರಿ ಎಂದೇ ಪ್ರಸಿದ್ಧರಾಗಿರುವ ಶ್ರೀ ಅಶೋಕ ಚಂದರಗಿ ಅವರಿಗೆ ಕನ್ನಡಪರ ಹೋರಾಟಗಳ ಬಗ್ಗೆ ಅಪಾರ ಜ್ಞಾನವಿದ್ದು, ಅದನ್ನಾ ಇಂದಿನ ಯುವಪೀಳಿಗೆಗೆ ಮುಟ್ಟಿಸುವ ಕೆಲಸ ನಾವು ಮಾಡುತ್ತಿದ್ದೇವೆ. ಇಂದಿನ ಯುವಕರು ಕನ್ನಡಪರ ಕೆಲಸಗಳಲ್ಲಿ ಅಪಾರ ಆಸಕ್ತಿ ತೋರತ್ತಿದ್ದು, ಇದರಲ್ಲಿ ಅನೇಕರಿಗೆ ಇತಿಹಾಸದ ಬಗ್ಗೆ ಕೊಂಚ ಮಾಹಿತಿ ಕಡಿಮೆಯಿದೆ. ನಾವು ಇತಿಹಾಸ ತಿಳಿದುಕೊಳ್ಳದೇ ಇತಿಹಾಸವನ್ನು ಸೃಷ್ಟಿ ಮಾಡಲು ಸಾಧ್ಯವಿಲ್ಲ. ಹೀಗಾಗಿ ನಾಳೆ ನಾವು Zoom App ಅಲ್ಲಿ ಒಂದು ಸಂವಾದ ಕಾರ್ಯಕ್ರಮ ಏರ್ಪಡಿಸಿದ್ದು, ಅದರಲ್ಲಿ ಕನ್ನಡಿಗರೆಲ್ಲಾ ಭಾಗವಹಿಸಿ. ಗಡಿಹೋರಾಟಗಳ ಬಗ್ಗೆ ನಿಮಗಿರುವ ಎಲ್ಲ ಗೊಂದಲಗಳನ್ನು ನಮ್ಮ ಅತಿಥಿ ಶ್ರೀ ಅಶೋಕ ಚಂದರಗಿ ಅವರು ಪರಿಹರಿಸಲಿದ್ದಾರೆ.
ಸೂಚನೆ :
– Zoom App ಲಿಂಕನ್ನು ನಾಳೆ ನಮ್ಮ ಪುಟದಲ್ಲಿ ಶೇರ್ ಮಾಡಲಾಗುವುದು.
– ಈ ಸಂವಾದ ಕಾರ್ಯಕ್ರಮ ಗಡಿಹೋರಾಗಳ ಕುರಿತಾಗಿದ್ದು, ಗಡಿನಾಡಿನ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಇದರ ಸದುಪಯೋಗ ಪಡೆದುಕೊಳ್ಳಿ.
ಇಂತಿ ನಿಮ್ಮ,
ಬೆಳಗಾವಿ ಜಿಲ್ಲಾ ಸಾಮಾಜಿಕ ಜಾಲತಾಣಗಳ ಒಕ್ಕೂಟ