ಬೆಂಗಳೂರು: ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಹಗರಣ ಸಂಬಂಧ ಬಂಧಿತರಾಗಿರುವ ಪತ್ರಕರ್ತರಲ್ಲಿ ಒಬ್ಬನಾದ ತುಮಕೂರಿನ ಶಿರಾ ಮೂಲದ ಕಿಂಗ್ಪಿನ್ ಸಿಡಿ ಡೀಲ್ ದುಡ್ಡಲ್ಲಿ ಎರಡು ಐಶಾರಾಮಿ ಕಾರು ಖರೀದಿಸಲು ಮುಂದಾಗಿದ್ದ ಎಂದು ತಿಳಿದುಬಂದಿದೆ.
ಮಹೀಂದ್ರಾ ಎಕ್ಸ್ಯುವಿ-500 ಹಾಗೂ ಥಾರ್ ಜೀಪ್ ಖರೀದಸಲು ಆತ ಮುಂದಾಗಿದ್ದ ಎಂದು ಎಸ್ಐಟಿ ತನಿಖೆಗಳಿಂದ ತಿಳಿದುಬಂದಿದೆ.
ಮಹೀಂದ್ರಾ ಕಾರು ಖರೀದಿಗೆ ಒಂದೂವರೆ ಲಕ್ಷ ಹಾಗೂ ಥಾರ್ ಜೀಪ್ಗಾಗಿ 25 ಸಾವಿರ ರೂ. ಅಡ್ವಾನ್ಸ್ ನೀಡಿದ್ದ ಎಂದು ಹೇಳಲಾಗುತ್ತಿದೆ.
ಆದರೆ ಈತ ಸಂಪೂರ್ಣ ಹಣವನ್ನು ನಗದು ರೂಪದಲ್ಲೇ ನೀಡುವುದಾಗಿ ಹೇಳಿದ್ದರಿಂದ ಅನುಮಾನಗೊಂಡ ಷೋರೂಂ ಸಿಬ್ಬಂದಿ ಒಂದೆರಡು ದಿನ ಕಾಯಿರಿ ಸರ್ ಎಂದು ಹೇಳಿ ಆತನನ್ನು ಸಾಗಹಾಕಿದ್ದರು ಎಂದು ಮೂಲಗಳು ಹೇಳಿವೆ.
ಫೆಬ್ರವರಿ 16ರಂದು ತನ್ನ ನಿರ್ಧಾರ ಬದಲಿಸಿದ್ದ ಆತ ಶೂರೂಂ ಮ್ಯಾನೇಜರ್ಗೆ ಇಮೇಲ್ ಮಾಡಿ ತನ್ನ ಹಣ ಮತ್ತು ಎಕ್ಸ್ಚೇಂಜ್ ಮಾಡಲು ನೀಡಲಾಗಿದ್ದ ಹಳೇ ಕಾರನ್ನು ನೀಡಿ ಎಂದು ಕೇಳಿದ್ದ. ಅದೇ ದುಡ್ಡಲ್ಲಿ ಕೊಡಗಿನಲ್ಲಿ ಕಾಫಿ ತೋಟ ಖರೀದಿಸಬೇಕೆಂದು ಯೋಜಿಸಿದ್ದ ಎನ್ನಲಾಗುತ್ತಿದೆ.