ಬೀದಿ ಬದಿಯಲ್ಲಿ ಹಣ್ಣಿನ ವ್ಯಾಪಾರ ಮಾಡುವ ವಿಚಾರಕ್ಕೆ ಗಲಾಟೆ ನಡೆದು, ಸಂಬಂಧಿಕನ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ ಘಟನೆ ರಾಯಚೂರು ನಗರದ ನೇತಾಜಿ ಸರ್ಕಲ್ ಬಳಿ ಘಟನೆ ನಡೆದಿದೆ.
ಶಬೀರ್ ಹಾಗೂ ಮಹಬೂಬ್ ಎಂಬುವವರು ಜಹೀರ್ ಮೇಲೆ ತೆಂಗಿನಕಾಯಿ ಕಡಿಯುವ ಮಚ್ಚಿನಿಂದ ಹಲ್ಲೆ ಮಾಡಲಾಗಿದ್ದು, ಗಾಯಗೊಂಡಿರುವ ಜಹೀರ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಜಹೀರ್ ಹಾಗೂ ಮಹಬೂಬ್ ಇಬ್ಬರೂ ಸಂಬಂಧಿಕರಾಗಿದ್ದು, ಪಾಟರ್ನರ್ ಆಗಿ ಹಣ್ಣಿನ ವ್ಯಾಪಾರ ಮಾಡಿಕೊಂಡಿದ್ದರು. ವ್ಯಾಪಾರದಲ್ಲಿ ವ್ಯತ್ಯಾಸವಾಗಿ ಬೇರೆ ಬೇರೆಯಾಗುವ ಮೂಲಕ ಪ್ರತ್ಯೇಕ ವ್ಯಾಪಾರ ಮಾಡುತ್ತಿದ್ದರು.
ನೇತಾಜಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.