ಬೆಂಗಳೂರು : ನಮ್ಮದು ಬಡವರ, ಶೋಷಿತರ ಪರವಾದ ಸರ್ಕಾರ. ಈ ರೀತಿ ಧ್ವಂದ್ವ ಹೇಳಿಕೆಗಳನ್ನು ನೀಡಬಾರದು. ಉಮೇಶ್ ಕತ್ತಿಗೆ ಐಎಎಸ್ ಲಾಬಿಯೇ ಗೊತ್ತಿಲ್ಲ ಎಂಬುದಾಗಿ CM ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಹೇಳಿದ್ದಾರೆ.
ವಿಧಾನಸೌಧದಲ್ಲಿ ಪಡಿತರ ಕಾರ್ಡ್ ವಿಚಾರವಾಗಿ ಸಚಿವ ಉಮೇಶ್ ಕತ್ತಿ ಗೊಂದಲದ ಹೇಳಿಕೆ ಕುರಿತಂತೆ ಮಾತನಾಡಿದಂತ ಅವರು, ಉಮೇಶ ಕತ್ತಿ, IAS ಲಾಬಿಯೇ ಗೊತ್ತಿಲ್ಲ. ನಮ್ಮದು ಬಡವರ, ಶೋಷಿತರ ಪರವಾದ ಸರ್ಕಾರ. ಈ ರೀತಿಯ ದ್ವಂದ್ವ ಹೇಳಿಕೆಗಳನ್ನು ನೀಡಬಾರದು. ಮನೋರಂಜನೆಗಾಗಿ, ದೇಶದ ಪ್ರಸ್ತುತ ವಾತಾವರಣ, ಧಾರವಾಹಿಗಾಗಿ ಟಿವಿ ಉಪಯೋಗಿಸ್ತಾರೆ. ಟಿವಿ ಪಿಡ್ಜ್ ಬಡವರು ಇಡಬಾರ್ದಾ? ಉಮೇಶ್ ಕತ್ತಿ ಅರ್ಥ ಮಾಡ್ಕೋಬೇಕು. ಬಡವರ ಕಾರ್ಡ್ ರದ್ದು ಮಾಡಲು ಬಿಡಲ್ಲ. ನಕಲ ಪಡಿತರ ಕಾರ್ಡ್ ರದ್ದು ಮಾಡಲಿ ಎಂಬುದಾಗಿ ಹೇಳಿದರು.