ಸರಕಾರಿ ಹಿರಿಯ ಪ್ರಾಥಮಿಕ ಉರ್ದು ಶಾಲೆಯ ನೂತನ ಎಸ್ ಡಿ ಎಮ್ ಸಿ ಸಮಿತಿ ವತಿಯಿಂದ ಶಾಸಕ ರಮೇಶ ಜಾರಕಿಹೊಳಿ ಅವರಿಗೆ ಸತ್ಕಾರ
ಘಟಪ್ರಭಾ:ಘಟಪ್ರಭಾ ಪುರಸಭೆ ವ್ಯಾಪ್ತಿಯ ಮೂಡಲಗಿ ವಲಯದ ಸರಕಾರಿ ಹಿರಿಯ ಪ್ರಾಥಮಿಕ ಉರ್ದು ಶಾಲೆಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ(ಎಸ್ ಡಿ ಎಮ್ ಸಿ)ಯನ್ನು ಗೋಕಾಕ ಮತಕ್ಷೇತ್ರದ ಶಾಸಕರಾದ ರಮೇಶ ಜಾರಕಿಹೊಳಿ ಅವರ ಆದೇಶ ಮೆರೆಗೆ ಹಾಗೂ ಕಾರ್ಮಿಕ ಮುಖಂಡರಾದ ಅಂಬಿರಾವ ಪಾಟೀಲರವರ ಮಾರ್ಗದರ್ಶನದಂತೆ ನೂತನವಾಗಿ ಎಸ್ ಡಿ ಎಮ್ ಸಿ ಸಮಿತಿಯು ರಚನೆಗೊಂಡ ಹಿನ್ನಲೆಯಲ್ಲಿ ಇಂದು ಎಸ್ ಡಿ ಎಮ್ ಸಿ ಸಮಿತಿಯ ನೂತನ ಅಧ್ಯಕ್ಷ,

ಉಪಾಧ್ಯಕ್ಷ,ಸರ್ವ ಸದಸ್ಯರು ಹಾಗೂ ಹಿರಿಯ ಮುಖಂಡರು ಸೇರಿ ಸಾಹುಕಾರ್ ಗೃಹ ಕಚೇರಿಗೆ ಭೇಟಿ ನೀಡಿ ಶಾಸಕರಾದ ರಮೇಶ ಜಾರಕಿಹೊಳಿರವರಿಗೆ ಶನಿವಾರದಂದು ಸತ್ಕರಸಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಸಾಹುಕಾರ್ ಆಪ್ತ ಸಹಾಯಕ ಸುರೇಶ ಸನದಿ,ನೂತನ ಎಸ್ ಡಿ ಎಮ್ ಸಿ ಅಧ್ಯಕ್ಷ ನಿಯಾಜ ಬಾಗವಾನ,ಮುರ್ತುಜಾ ಮಕಾನದಾರ,ನೂರಅಹ್ಮದ ಪೀರಜಾದೆ,ಸಲೀಂ ಕಬ್ಬೂರ,ಅಪ್ಪಾಸಾಬ ಮುಲ್ಲಾ,ಇಮ್ರಾನ ಬಟಕುರ್ಕಿ,ಶಬ್ಬೀರ ಜಮಖಂಡಿ,ಮಲಿಕ್ ಬಾಗವಾನ,ರಿಯಾಜ ಬಾಡಕರ,ಜುಬೇರ ಮಂಗಸೂಳಿ,ಇಮ್ತಿಯಾಜ ಕಡಲಗಿ,ಅಸ್ಲಾಂ ದೇಸಾಯಿ,ಇನ್ನೂ ಅನೇಕರು ಉಪಸ್ಥಿತರಿದ್ದರು.
Laxmi News 24×7