ಜನತಾ ದರ್ಶನ ನಡೆಸಿದ ಶಾಸಕ ಆಸೀಫ್ ಸೇಠ್…
ನಗರಸೇವಕರಿಂದ ಬಾಕಿ ಕಾಮಗಾರಿಗಳ ಮಾಹಿತಿ ಪಡೆದ ಶಾಸಕರು
ಬೆಳಗಾವಿ ಉತ್ತರ ಶಾಸಕ ಆಸೀಫ್ ಸೇಠ್ ಅವರು ಬೆಳಗಾವಿಯ ವೀರಭದ್ರ ನಗರದಲ್ಲಿ ಜನತಾ ದರ್ಶನ ನಡೆಸಿ ನಾಗರೀಕರ ಅಹವಾಲುಗಳನ್ನು ಸ್ವೀಕರಿಸಿದರು.
ಈ ವೇಳೆ ಸ್ಥಳೀಯರೊಂದಿಗೆ ಸಂವಾದ ನಡೆಸಿದ ಶಾಸಕರ ಮುಂದೆ ಸ್ಥಳೀಯರು ಮೂಲಭೂತ ಸೌಕರ್ಯಗಳು, ಸ್ವಚ್ಛತೆ, ನೀರು ಸರಬರಾಜು, ಸೇರಿದಂತೆ ವಿವಿಧ ಬೇಡಿಕೆಗಳನ್ನು ತೆರೆದಿಟ್ಟರು.
ನಂತರ ಶಾಸಕ ಆಸೀಫ್ ಸೇಠ್ ಮತ್ತು ಅಮಾನ್ ಸೇಠ್ ಅವರು ನಗರಸೇವಕರೊಂದಿಗೆ ನಗರ ಪ್ರದಕ್ಷಿಣೆ ನಡೆಸಿ ಬಾಕಿಯಿರುವ ಕಾಮಗಾರಿಗಳ ಮಾಹಿತಿಯನ್ನು ಪಡೆದುಕೊಂಡರು.
ಶಾಶ್ವತ ಅಭಿವೃದ್ಧಿಗೆ ಆದ್ಯತೆ ನೀಡುತ್ತಾ, ಯೋಜನಾ ವಿವರಗಳು ಹಾಗೂ ರಚನಾತ್ಮಕ ಮಾಹಿತಿಗಳನ್ನು ನಿಯಮಿತವಾಗಿ ನೀಡುವಂತೆ ನಗರಸೇವಕರಿಗೆ ಸೂಚಿಸಿದರು.
ತ್ವರಿತ ಕಾರ್ಯಾಚರಣೆಗಾಗಿ ತಾತ್ಕಾಲಿಕವಾಗಿ ತುರ್ತು ಕೆಲಸಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವಂತೆ ಸೂಚಿಸಿದರು. ಶಾಸಕರ ಈ ನಡೆ ಸ್ಥಳೀಯರ ಮೆಚ್ಚುಗೆಗೆ ಪಾತ್ರವಾಯಿತು.
Laxmi News 24×7