ಸಚಿವ ಜಮೀರ ಅಹ್ಮದ ಮೇಲೆ ಗರಂ ಆದ ಶಾಸಕ ಅಶೋಕ ಮನಗೂಳಿ
ಆಶ್ರಯ ಯೋಜನೆಯಲ್ಲಿ ಮನೆಯ ವಿತರಣೆ ವಿಷಯಕ್ಕೆ ಸಂಬಂಧಿಸಿದಂತೆ ಸಚಿವ ಜಮೀರ ಅಹ್ಮದ ಮೇಲೆ ಶಾಸಕರೊರ್ವರು ಕೋಪಗೊಂಡ ವಿಡಿಯೋ ವೈರಲ್ ಆಗಿದೆ. ವಿಜಯಪುರ ಜಿಲ್ಲೆಯ ಸಿಂದಗಿ ಕಾಂಗ್ರೆಸ್ ಪಕ್ಷದ ಶಾಸಕ ಅಶೋಕ ಮನಗೂಳಿ ಕೋಪಗೊಂಡಿದ್ದಾರೆ.
23 ಗ್ರಾಮ ಪಂಚಾಯತಿಗೆ ಮನೆ ಹೇಗೆ ಹಂಚಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಗ ಸಚಿವ ಜಮೀರ ಅಹ್ಮದ ಚೀಟಿ ಮೇಲೆ ಏನೊ ಬರೆದುಕೊಟ್ಟಿದ್ದಾರೆ. ಆಗ ಇನ್ನಷ್ಟು ಮನೆ ಆದೇಶ ಮಾಡಲು ಒತ್ತಾಯಿಸಿ 1 ಸಾವಿರ ಮನೆಯಾದ್ರೂ ಕೊಡಿ ಎಂದು ಅಂಗಲಾಚಿದ್ದಾರೆ. ಆಗ ಸಚಿವ ಜಮೀರ ಅಹ್ಮದ ಇದು ತಗೊ ಎಂದು ಗದರಿಸಿದ್ದಾರೆ.
ಆಯತು ತಗೊರಿ ಎಂದು ಶಾಸಕ ಅಶೋಕ ಮನಗೂಳಿ ಹೊರಟಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Laxmi News 24×7