Breaking News

ಸನ್ನಡತೆ ಮೇರೆಗೆ 74 ಅಪರಾಧಿಗಳಿಗೆ ರೌಡಿಶೀಟರ್​ಗಳ ಪಟ್ಟಿಯಿಂದ ಬಿಡುಗಡೆ

Spread the love

ತುಮಕೂರು: ಸನ್ನಡತೆ ಆಧಾರದ ಮೇಲೆ 74 ರೌಡಿಶೀಟರ್​ಗಳನ್ನು ರೌಡಿಶೀಟರ್​​ ಪಟ್ಟಿಯಿಂದ ಬಿಡುಗಡೆ ಮಾಡಲಾಗಿದೆ. ಮಂಗಳವಾರ ತುಮಕೂರು ಎಸ್​ಪಿ ಕಚೇರಿ ಬಳಿಯಿರುವ ಡಿಆರ್​​ ಗ್ರೌಂಡ್​ನಲ್ಲಿ ರೌಡಿಶೀಟರ್​ಗಳ​ ಸಭೆ ಕರೆಯಲಾಗಿತ್ತು. ಈ ವೇಳೆ, ಎಸ್​ಪಿ ಅಶೋಕ್ ಕೆ.ವಿ. ರೌಡಿಶೀಟರ್​ಗಳಿಗೆ ಗುಡ್​ನ್ಯೂಸ್​ ನೀಡಿದ್ದಾರೆ.

ಈ ಆಧಾರದ ಮೇಲೆ ರೌಡಿಶೀಟರ್​ ಪಟ್ಟಿಯಿಂದ ಕೈ ಬಿಡಲಾಗುತ್ತಿದೆ; ತುಮಕೂರು ಜಿಲ್ಲೆಯಲ್ಲಿ ಒಟ್ಟು 901 ಜನ ರೌಡಿಶೀಟರ್​ಗಳಿದ್ದಾರೆ. ಅವರನ್ನು ಪರಿಶೀಲನೆ ಮಾಡಿದಾಗ ಕೆಲ ರೌಡಿಶೀಟರ್​ಗಳು ಕಳೆದ 10 ವರ್ಷಗಳಿಂದ ಯಾವುದೇ ಕೇಸ್​ಗಳಲ್ಲಿ ಭಾಗಿಯಾಗಿರಲಿಲ್ಲ. ಜತೆಗೆ ಅವರ ಮೇಲಿದ್ದ ಕೇಸ್​ಗಳು ಕೋರ್ಟ್​ನಲ್ಲಿ ಖುಲಾಸೆಯಾಗಿವೆ. ಯಾವುದೇ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗದೇ ತಮ್ಮ ಪಾಡಿಗೆ ಕೆಲಸ ಮಾಡಿಕೊಂಡಿದ್ದ ಹಿನ್ನೆಲೆ ಅಂತವರ ಬಗ್ಗೆ ರಿಪೊರ್ಟ್ ಪಡೆದು ಅವರ ಮೇಲಿದ್ದ ರೌಡಿಶೀಟರ್​ನ್ನು ಕ್ಲೋಸ್​ ಮಾಡಲಾಗಿದೆ.

ಇದೇ ಪುನರಾವರ್ತನೆ ಆದರೆ ಮತ್ತೆ ಓಪನ್​ ಮಾಡ್ತೇವೆ: ಎಚ್ಚರಿಕೆ ನೀಡಿದ ಎಸ್​ಪಿ;

“ಒಟ್ಟು 74 ಜನ ಅಪರಾಧಿಗಳನ್ನು ರೌಡಿಶೀಟರ್​ ಪಟ್ಟಿಯಿಂದ ಮುಕ್ತಾಯ ಮಾಡಲು ತಿರ್ಮಾನ ಮಾಡಲಾಗಿದೆ. ಹೆದರಿಸೋದು, ಬೆದರಿಸೋದು, ಕ್ರೈಂ ಕೇಸ್​ನಲ್ಲಿ ಭಾಗಿಯಾಗೋದು, ಗ್ಯಾಮ್ಲಿಂಗ್, ಲಿಕ್ಕರ್ ಈ ತರಹದ ಪ್ರಕರಣಗಳಲ್ಲಿ ಭಾಗಿಯಾದವರ ಮೇಲೆ ರೌಡಿಶೀಟರ್ ಓಪನ್ ಮಾಡುತ್ತೇವೆ. ಅಪರಾಧಿಗಳನ್ನು ರೌಡಿಶೀಟರ್ ಪಟ್ಟಿಗೆ ಸೇರಿಸಲು ಕಾರಣವಿರುತ್ತದೆ. ಅಂತಹವರನ್ನು ಚುನಾವಣೆ ಹಾಗೂ ಗಲಭೆ ಸಮಯದಲ್ಲಿ ಗಡಿಪಾರು ಮಾಡುತ್ತೇವೆ”.


Spread the love

About Laxminews 24x7

Check Also

ಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ!

Spread the loveಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ! …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ