Breaking News

ಮತ್ತೊಬ್ಬ ಯುವಕನ ಜತೆ ನಿಶ್ಚಿತಾರ್ಥವಾಗಿರುವ ಸುದ್ದಿ ತಿಳಿದು ಪ್ರೇಮಿಗಳಿಬ್ಬರು  ವಿಷ ಸೇವಿಸಿ   ಆತ್ಮಹತ್ಯೆ 

Spread the love

ರಾಯಚೂರು:  ಪ್ರೇಮಿಗಳಿಬ್ಬರು  ವಿಷ ಸೇವಿಸಿ   ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ  ಮಾನ್ವಿ ತಾಲೂಕಿನ  ಮಲ್ಲಟ ಗ್ರಾಮದಲ್ಲಿ  ಬುಧವಾರ  ನಡೆದಿದೆ.

ಮಲ್ಲಟ ಗ್ರಾಮದ ನಿವಾಸಿಗಳಾದ ಮಹೇಶ(21)  ಅಕ್ಷತಾ(19) ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು.  ಹಲವು ದಿನಗಳಿಂದ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಮಹೇಶ ಬೆಂಗಳೂರಿನಲ್ಲಿ  ಕೆಲಸ  ಮಾಡುತ್ತಿದ್.   ಇತ್ತ ಅಕ್ಷತಾಳಿಗೆ ಪೋಷಕರು ಮತ್ತೊಬ್ಬನ  ಜತೆ ನಿಶ್ಚಿತಾರ್ಥ ಮಾಡಿದ್ದರು.

ಅಕ್ಷತಾಳಿಗೆ ಮತ್ತೊಬ್ಬ ಯುವಕನ ಜತೆ ನಿಶ್ಚಿತಾರ್ಥವಾಗಿರುವ ಸುದ್ದಿ ತಿಳಿದು  ಮಹೇಶ ಸ್ವಗ್ರಾಮಕ್ಕೆ ವಾಪಸ್ ಆಗಿದ್ದ.   ಬಳಿಕ ಇಬ್ಬರು  ಗ್ರಾಮದ ಹೊರವಲಯದಲ್ಲಿ  ವಿಷ ಸೇವಿಸಿ  ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಕುರಿತು ಸಿರವಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.


Spread the love

About Laxminews 24x7

Check Also

5 ಲಕ್ಷ ಜನರಿಗೆ ಉದ್ಯೋಗ, 1.5 ಕೋಟಿ ಮಾನವ ದಿನ ಸೃಷ್ಟಿಗೆ ಅವಕಾಶ: ಈಶ್ವರ್‌ ಖಂಡ್ರೆ

Spread the loveಬೆಂಗಳೂರು: ಜುಲೈ 1ರಿಂದ ಜಾರಿಗೆ ತರಲಾಗಿರುವ ಮನ್ರೇಗಾದ  ಬದಲಾದ ರೂಪ ವಿಬಿಜಿ ರಾಮ್ ಜಿ ಅಡಿಯಲ್ಲಿ  ಪ್ರತಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ