Breaking News
Home / ಜಿಲ್ಲೆ / ಬೆಳಗಾವಿ / ಪ್ರೇಮಕವಿ ಕೆ.ಕಲ್ಯಾಣ ಅವರ ಪತ್ನಿ ಅಶ್ವಿನಿ ವಿಚ್ಛೇದನ ಅರ್ಜಿ ಪಾಪಾಸ್ ಕೌಟುಂಬಿಕ ಕಲಹದ ಬಿರುಗಾಳಿ ಅಂತ್

ಪ್ರೇಮಕವಿ ಕೆ.ಕಲ್ಯಾಣ ಅವರ ಪತ್ನಿ ಅಶ್ವಿನಿ ವಿಚ್ಛೇದನ ಅರ್ಜಿ ಪಾಪಾಸ್ ಕೌಟುಂಬಿಕ ಕಲಹದ ಬಿರುಗಾಳಿ ಅಂತ್

Spread the love

ಬೆಳಗಾವಿ : ಪ್ರೇಮಕವಿ ಕೆ.ಕಲ್ಯಾಣ ಅವರ ಪತ್ನಿ ಅಶ್ವಿನಿ ವಿಚ್ಛೇದನ ಅರ್ಜಿಯನ್ನು ಪಾಪಾಸ್ ಪಡೆದಿದ್ದು, ಸಾಹಿತಿ ಕುಟುಂಬದಲ್ಲಿ ಎದಿದ್ದ ಕೌಟುಂಬಿಕ ಕಲಹದ ಬಿರುಗಾಳಿ ಅಂತ್ಯಕಂಡಿದೆ.

ಅ. 3 ರಂದು ಕೆ.ಕಲ್ಯಾಣ್​ ಪತ್ನಿ, ತಮ್ಮ ಪತಿ ವಿರುದ್ಧ ಆರೋಪಿ ಮಾಳಮಾರುತಿ ಪೊಲೀಸ್​ಠಾಣೆ ಮೆಟ್ಟಿಲೇರಿದ್ದರು. ಬಳಿಕ ಅವರಿಗೆ ವಿಚ್ಫೇದನ ನೀಡುವ ಸಲುವಾಗಿ ಬೆಳಗಾವಿಯ ಕೌಟುಂಬಿಕ ನ್ಯಾಯಾಲಕ್ಕೆ ಅರ್ಜಿ ಸಹ ಸಲ್ಲಿಸಿದ್ದರು.

ಆದರೆ ಕಲ್ಯಾಣ್​ ಇದರಲ್ಲಿ ತಮ್ಮ ಪತ್ನಿಯದ್ದು, ಯಾವುದೇ ತಪ್ಪಿಲ್ಲ. ಬೇರೆಯವರು ಅವರ ದಾರಿ ತಪ್ಪಿಸುತ್ತಿದ್ದಾರೆ ಎಂದಿದ್ದರು. ಅಷ್ಟೇ ಅಲ್ಲದೇ ಅವರ ಮನೆ ಕೆಲಸದಾಕೆ ಗಂಗಾ ಎಂಬುವವರ ವಿರುದ್ಧ ಕಂಪ್ಲೇಂಟ್​ ದಾಖಲಿಸಿದ್ದರು. ಪೊಲೀಸರು ಆ ಬಗ್ಗೆ ತನಿಖೆ ಕೈಗೊಂಡಾಗ ಅಸಲಿ ಸತ್ಯ ಬಹಿರಂಗವಾಗಿತ್ತು.

ಮನೆ ಕೆಲಸದ ಗಂಗಾ ಮತ್ತು ಶಿವಾನಂದ ವಾಲಿ ಎಂಬುವವರು ಮಾಟದಿಂದ ಅವರ ತಲೆ ಕೆಡಿಸಿ, ವಂಚಿಸಿದ್ದರು. ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಾನಂದ್​ವಾಲಿಯನ್ನು ಬಂಧಿಸಲಾಯಿತು.ಆದರೆ ಮತ್ತೊಬ್ಬ ಆರೋಪಿ ಗಂಗಾ ತಲೆ ಮರೆಸಿಕೊಂಡಿದ್ದಾರೆ.

ಇದರ ನಡುವೆ ಅಕ್ಟೋಬರ್​ 17 ರಂದು ಕಲ್ಯಾಣ್​ ದಂಪತಿಗಳ ಅರ್ಜಿ ವಿಚಾರಣೆ ನಡೆದಿದ್ದು, ಈ ವೇಳೆ ಅವರ ಪತ್ನಿ ಅಶ್ವಿನಿ ತಾವು ನೀಡಿದ್ದ ಅರ್ಜಿ ವಾಪಸ್​ ಪಡೆದಿದ್ದಾರೆ.


Spread the love

About Laxminews 24x7

Check Also

ಅಥಣಿಯ ಇಬ್ಬರು ವಿದ್ಯಾರ್ಥಿನಿಯರಿಗೆ ತೃತೀಯ ರ್‍ಯಾಂಕ್‌

Spread the love ಬೆಳಗಾವಿ: ಜಿಲ್ಲೆಯ ಅಥಣಿಯ ಬಣಜವಾಡ ವಸತಿ ಪದವಿಪೂರ್ವ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ