ಕಾರ ಹುಣ್ಣಿಮೆ ಎನ್ನುವುದು ಉತ್ತರ ಕರ್ನಾಟಕದ ರೈತರಿಗೆ ವಿಷೇಶ ಹಬ್ಬವಾಗಿದೆ. ಈ ಹಬ್ಬದಂದು ರೈತರು ತಾವು ಸಾಕಿರುವ ಎತ್ತುಗಳನ್ನು ವಿಶೇಷ ರೀತಿಯಲ್ಲಿ ಬಣ್ಣಗಳಿಂದ ಅಲಂಕಾರ ಮಾಡಿ ಮೆರವಣಿಗೆ ಮಾಡುವುದು ವಿಶೇಷವಾಗಿದೆ.
ಇಂದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಶಮನೇವಾಡಿಯಲ್ಲಿ ಕಾರು ಹುಣ್ಣಿಮೆ ನಿಮಿತ್ಯ ಗ್ರಾಮದ ಯುವಕ ಪ್ರದೀಪ್ ಖೋತ ಇವರ ಎತ್ತುಗಳ ಮೇಲೆ ದಿವಂಗತ ಪುನೀತ್ ರಾಜಕುಮಾರ್ ಇವರ ಭಾವಚಿತ್ರ ಬಿಡಿಸುವ ಮೂಲಕ ವಿಶೇಷವಾಗಿ ಆಚರಣೆ ಮಾಡಿದ್ದಾರೆ.
ಪುನೀತ್ ರಾಜಕುಮಾರ ಅವರು ನಮ್ಮನ್ನೆಲ್ಲ ಆಗಲಿ ಸುಮಾರು ದಿನಗಳು ಕಳೆದರು ಕೂಡ ಅವರ ನೆನಪು ಮಾತ್ರ ಎಲ್ಲರ ಮನಸ್ಸಿನಲ್ಲಿ ಇನ್ನು ಜೀವಂತವಾಗಿದೆ ಈ ಕಲೆಯನ್ನು ಬಾಹುಬಲಿ ಕೊಗನೊಳೆ,ಹಾಗೂ ಸ್ನೇಹಿತರಾದ ನಾಗರಾಜ್ ಮಾಲಗತ್ತೆ, ಅಭಿಷೇಕ ಮಡಿವಾಳ ಹೀಗೆ ಹಲವಾರು ಜನರು ಸೇರಿ ಕಾರು ಹುಣ್ಣಿಮೆ ದಿನ ಪುನೀತ್ ರಾಜಕುಮಾರ ಅವರ ಚಿತ್ರ ಬಿಡಿಸುವ ಮೂಲಕ ದಿವಂಗತ ಪುನೀತ್ ಅವರನ್ನು ಸ್ಮರಿಸಿಕೊಂಡಿದ್ದಾರೆ