ಗೋಕಾಕ: ಗೋಕಾಕ ನಗರದ ಜನತೆಯ ಮಧ್ಯೆ ಶ್ರೀ ಸಂತೋಷ್ ಜಾರಕಿಹೊಳಿ ಅವರು ಬೆರೆಯಲು ಪ್ರಾರಂಭ ಮಾಡಿದ್ದಾರೆ, ಇಷ್ಟು ದಿನ ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಕೆಲಸದಲ್ಲಿ ಬ್ಯೂಸಿ ಇದ್ದ ಸಾಹುಕಾರರು ಪ್ರತಿದಿನ ತಮ್ಮ ವ್ಯಾಪ್ತಿಯಲ್ಲಿ ಬರುವ ಕಾರ್ಯಕ್ರಮ ಗಳಿಗೆ ಹಾಜರ ಆಗಿ, ಜನರ ಜೊತೆ ಜನ ಸಾಮಾನ್ಯರಂತೆ ಬೆರೆತು ಎಲ್ಲ ಕಾರ್ಯಕ್ರಮ ಗಳಿಗೆ ಭೇಟಿ ನೀಡುತ್ತಿದ್ದಾರೆ.
ಇಂದು ಗೋಕಾಕ ತಾಲೂಕಿನ ಮಮದಾಪೂರ ಗ್ರಾಮದ ಶಿವ ಶಕ್ತಿ ನಗರದಲ್ಲಿ ಶ್ರೀ ಸಿದ್ದಾರೂಢ ಮಹೋತ್ಸವ ದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಹೌದು ಸಂತೋಷ್ ಜಾರಕಿಹೊಳಿ ಅವರಿಗೆ ಆದರದಿಂದ ಬರಮಾಡಿಕೊಂಡ ಗ್ರಾಮಸ್ಥರು, ಹಾಗೂ ಕಾರ್ಯಕ್ರಮದ ಉದ್ಘಾಟನೆ ಯನ್ನಾ ಜ್ಯೋತಿ ಬೆಳಗಿಸುವ ಕಾರ್ಯವನ್ನ ಹಿರಿಯ ಸ್ವಾಮೀಜಿ ಅವರೊಂದಿಗೆ ನೆರವೇರಿಸಿದರು.
ಇನ್ನು ಈ ಇಂದು ಕಾರ್ಯಕ್ರಮದಲ್ಲಿ ಭಾಗದ ಗ್ರಾಮಸ್ಥರು, ಡಾ: ಶಿವಾನಂದ ಭಾರತಿ ಮಹಾಸ್ವಾಮಿಗಳು,( ಇಂಚಲ)
ಶ್ರೀ ನಿಜಗುಣ ಮಹಾಸ್ವಾಮಿಗಳು ಹರಳಿಕಟ್ಟಿ,
ಶ್ರೀ ಚರಮರ್ತೇಶ್ವರ ಮಹಾ ಸ್ವಾಮಿಗಳು ಮಮದಾಪೂರ,
ಹಾಗೂ ನೃಪನಂದ ಮಹಾಸ್ವಾಮಿಗಳು ಈ ಒಂದು ಉದ್ಧಾಟನೆಗೆ ಸಂತೋಷ್ ಜಾರಕಿಹೊಳಿ ಅವರ ಜೊತೆಗೆ ಸಾಥ್ ನೀಡಿದರು.
ಇನ್ನು ಈ ಭಾಗದ ಪಂಚಾಯತಿ ಅಧ್ಯಕ್ಷರು
ಮಾಜಿ ಅಧ್ಯಕ್ಷರು ಹಾಗೂ ಗ್ರಾಮದ ಜನತೆ ಭಾಗವಹಿಸಿದ್ದರು