ರಾಮನಗರ: ಕರ್ನಾಟಕ ಅಂದ್ರೆನೇ ಭಾವೈಕತೆಯ ತವರೂರು. ಹಿಂದೂ-ಮುಸ್ಲಿಂ ಬಾಂಧವರು ಸಾಮರಸ್ಯದಿಂದ ಬದುಕುತ್ತಿದ್ದಾರೆ. ಅದೇ ರೀತಿ ನಗರದ ಮುಸ್ಲಿಂ ಮುಖಂಡರೊಬ್ಬರು ಹಿಂದೂ ದೇಗುಲ ನಿರ್ಮಿಸಿ ಭಾವೈಕ್ಯತೆ ಮಂತ್ರ ಸಾರಿದ್ದಾರೆ.
ಚನ್ನಪಟ್ಟಣ ಕ್ಷೇತ್ರದ ಸೈಯದ್ ಸಾದತ್ ಉಲ್ಲಾ ಸಕಾಫ್ ಎಂಬುವವರು ಹಿಂದೂ ದೇವಾಲಯಗಳನ್ನು ಕಟ್ಟಿಸಿ ಭಾವೈಕ್ಯತೆ ಸಾರಿದ್ದಾರೆ. ಲಾಕ್ ಡೌನ್ ಸಮಯದಲ್ಲೂ ಫುಡ್ ಕಿಟ್ ವಿತರಿಸುವ ಮೂಲಕ ನೆರವಾಗಿದ್ದ ಸಕಾಫ್, ಇದೀಗ ತಮ್ಮ ಸ್ವಂತ ಖರ್ಚಿನಲ್ಲಿ ದೇಗುಲ ನಿರ್ಮಾಣಕ್ಕೆ ಮುಂದಾಗಿದ್ದಾರೆ.
ದೇವಾಲಯದ ಕಾಂಪೌಡ್ನಲ್ಲೇ ಮಸೀದಿಯನ್ನು ಕೂಡ ನಿರ್ಮಿಸಿ ಎರಡು ಧರ್ಮಗಳ ನಡುವೆ ಸೌಹಾರ್ದತೆ ಬೆಳೆಸಲು ಶ್ರಮಿಸುತ್ತಿದ್ದಾರೆ ಸಕಾಫ್. ಇನ್ನು ಸಕಾಫ್ ಅವರ ಈ ಕಾರ್ಯಕ್ಕೆ ನಗರದಾದ್ಯಂತ ಭಾರೀ ಮೆಚ್ಚುಗೆ ವ್ಯಕ್ತವಾಗಿದ್ದು ಜಾತಿ-ಧರ್ಮಗಳ ಕಿತ್ತಾಟದ ಈ ಹೊತ್ತಲ್ಲಿ ಈ ಕಾರ್ಯದ ಮೂಲಕ ಮಾದರಿಯಾಗಿದ್ದಾರೆ.