ಬೆಳಗಾವಿ: ನಗರ ವ್ಯಾಪ್ತಿಯಲ್ಲಿ ಅಕ್ರಮ ಚಟುವಟಿಗಳಿಗೆ ಡಿಸಿಪಿ ಡಾ. ವಿಕ್ರಮ ಅಮಟೆ ಅವರು ಚುರುಕು ಮುಟ್ಟಿಸಿದ ಬೆನ್ನಲ್ಲೆ, ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಸಿಬ್ಬಂದಿಗೆ ಖಡಕ್ ಎಚ್ಚರಿಕೆ ನೀಡಿದ್ದು, ಅಕ್ರಮ ಚಟುವಟಿಕೆಯನ್ನು ತಡೆಗಟ್ಟುವಲ್ಲಿ ಪೊಲೀಸ್ ರು ಬೇಜವ್ದಾರಿ ತೋರಿದರೆ ಕೆಲಸದಿಂದ ಅಮಾನತುಗೊಳ್ಳಿಸಲಾಗುವುದು ಎಂದು ಸೂಚನೆ ನೀಡಿದ್ದಾರೆ.
ಈಗಾಗಲೇ ಅಕ್ರಮವಾಗಿ ಮದ್ಯ ಮಾರಾಟ, ಮಟಕಾ, ಜೂಜಾಟ ಹಾಗೂ ಮಾದಕ ವಸ್ತುಗಳ ಮಾರಾಟ ಮಾಡುವವರನ್ನು ಡಿಸಿಪಿ ಅವರು ಹೆಡೆಮುರಿಕಟ್ಟುತ್ತಿದ್ದಾರೆ. ಆರೋಪಿಗಳ ವಿರುದ್ಧ ದೂರು ದಾಖಲಾಗಿದೆ. ಇದಕ್ಕೆ ಬಗ್ಗದ ಕಿಡಿಗೇಡಿಗಳು ಹಳೆ ಚಾಳಿಯನ್ನು ಮುಂದುವರೆಸಿದ್ದು, ಮತ್ತೇ ಡಿಸಿಪಿ, ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಖಡಕ್ ಸಂದೇಶಯೊಂದನ್ನು ರವಾನಿಸಿದ್ದಾರೆ. ಬೇಜವ್ದಾರಿ ತೋರಿದ ಹಿನ್ನೆಲೆಯಲ್ಲಿ ಓರ್ವ ಪೇದೆಯನ್ನು ಅಮಾನತುಗೊಳಿಸುವುದು ಹಾಗೂ ಸ್ಥಳೀಯ ಪಿಎಸ್ಐ ಹಾಗೂ ಸಿಪಿಐಗೆ ನೋಟಿಸ್ ನೀಡಿದ್ದಾರೆ.
ಅಕ್ರಮ ಚಟುವಟಿಕೆಗಳು ನಡೆಯುವ ಮಾಹಿತಿ ಇದ್ದರೂ ” ಖಾಕಿ” ಕ್ರಮಕೈಗೊಳ್ಳದೆ ಪರೋಕ್ಷವಾಗಿ ಸಹಕಾರ ನೀಡುತ್ತಿರುದರಿಂದ ಪೊಲೀಸರ ಭಯ ಇಲ್ಲದಂತಾಗಿದೆ. ಅಕ್ರಮ ದಂಧೆಯ ಸ್ಥಳ ಬದಲಾವಣೆಗೆ ಸ್ಥಳೀಯ ಪೊಲೀಸರೇ ದಂಧೆಕೊರರಿಗೆ ಮಾಹಿತಿ ನೀಡುತ್ತಿದ್ದಾರೆ ಎಂದು ತಿಳಿದು ಬಂದಿದೆ. ಅದಕ್ಕಾಗಿ ಇದಕ್ಕೆ ಸಾಥ್ ನೀಡುವ ಪೊಲೀಸ್ ರಿಗೆ ಚುರುಕು ಮುಟ್ಟಿಸಲಾಗುವುದು ಎಂದು ತಿಳಿಸಿದ್ದಾರೆ.
ಅಲ್ಲದೇ ಹಿರೇಬಾಗೇವಾಡಿಯಲ್ಲಿ ಮಟಕಾ ಬುಕ್ಕಿ ಹಿಂದೆ ಓರ್ವ ಪೊಲೀಸ್ ಪೇದೆ ಸಹಕಾರ ಇರುವ ಬಗ್ಗೆ ಗ್ರಾಮಸ್ಥರೇ ದಾಳಿ ನಡೆಸುವ ಮುಂಚೆಯೇ ಪೊಲೀಸ್ ಠಾಣೆಗೆ ಬಂದು ಮಾಹಿತಿ ನೀಡಿದ್ದರು. ಆದರೂ ಇದುವರೆಗೆ ಗ್ರಾಮಸ್ಥರ ದೂರಿನಂತೆ ಇದುವರೆಗೆ ಪೊಲೀಸ್ ಪೇದೆ ಹಾಗೂ ಅಧಿಕಾರಿ ವಿರುದ್ಧ ಕ್ರಮಕೈಗೊಳ್ಳು ಹಿರಿಯ ಪೊಲೀಸ ಅಧಿಕಾರಿಗಳು ಹಿಂದೇಟು ಹಾಕುತ್ತಿರುವುದು ಹಿರೇಬಾಗೇವಾಡಿ ಜನರಲ್ಲಿ ಹಲವು ಅನುಮಾನುಗಳನ್ನು ಹುಟ್ಟುಹಾಕಿದೆ.
ನಗರ ಪೊಲೀಸರ ಕಾರ್ಯವೈಖರಿಗೆ ಭಿನ್ನವಾಗಿರುವ ಜಿಲ್ಲಾ ಪೊಲೀಸರು, ಅಕ್ರಮ ಚಟುವಟಿಕೆಗೆ ಕಡಿವಾಣ ಹಾಕುವಲ್ಲಿ ಬೇಜವಾಬ್ದಾರಿ ತೋರಿಸಿರುವ ಮೂಡಲಗಿ ಠಾಣೆಯ ಪೇದೆ ಡಿ.ಜಿ.ಕೊಣ್ಣೂರ ಎಂಬುವರನ್ನು ಅಮಾನತಗೊಳಿಸುವುದು ಹಾಗೂ ಮೂಡಲಗಿ ಪಿಎಸ್ಐ ಹಾಗೂ ಸಿಪಿಐಗೆ ನೋಟಿಸ್ ಜಾರಿಗೊಳಿಸುವಂತೆ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅವರು ಸೂಚಿಸುವ ಮೂಲಕ ಅಕ್ರಮ ದಂಧೆ ವಿರುದ್ಧ ಕ್ರಮಕೈಗೊಳ್ಳದ ಸಿಬ್ಬಂದಿಗೆ ಬಿಸಿ ಮುಟ್ಟಿಸುವ ಕಾರ್ಯ ಮಾಡಿದ್ದಾರೆ.
ಅಲ್ಲದೇ ಅಕ್ರಮ ಚಟುವಟಿಕೆ ವಿರುದ್ಧ ಕ್ರಮಕೈಗೊಳ್ಳಲು ಹಿಂದೇಟು ಹಾಕಿರುವ ಪೇದೆ ಕೊಣ್ಣೂರ ಅವರನ್ನು ಅಮಾನತುಗೊಳಿಸಲು ಹಾಗೂ ಪಿಎಸ್ಐ, ಸಿಪಿಐಗೆ ನೋಟಿಸ್ ನೀಡಲು ಎಸ್ಪಿ ಲಕ್ಷ್ಮಣ ನಿಂಬಗರಿ ಅವರು ಆದೇಶ ಹೊರಡಿಸಿದ್ದಾರೆ.