Breaking News
Home / Uncategorized / ಹಲಗಲಿಯಲ್ಲಿ ಈಗ ನಿರಂತರ ಕುಡಿವ ನೀರು

ಹಲಗಲಿಯಲ್ಲಿ ಈಗ ನಿರಂತರ ಕುಡಿವ ನೀರು

Spread the love

ಮುಧೋಳ: ಜನಪ್ರತಿನಿ ಧಿಗಳು ಹಾಗೂ ಅಧಿ ಕಾರಿಗಳು·ಮನಸ್ಸು ಮಾಡಿದರೆ ಏನೆಲ್ಲ ಅಭಿವೃದ್ಧಿ ಸಾಧಿ ಸಬಹುದುಎಂಬುದಕ್ಕೆ ಹಲಗಲಿ ಗ್ರಾಮವೇ ಸಾಕ್ಷಿಯೆಂಬಂತಿದೆ.ತಾಲೂಕಿನ ಗಡಿಗ್ರಾಮ ಹಲಗಲಿ ಗ್ರಾಮ ಒಂದುಕಾಲಕ್ಕೆ ಕುಗ್ರಾಮವೆಂಬಂತ್ತಿತ್ತು. ಆದರೆ ಅದೇ ಗ್ರಾಮಇಂದು ಕುಡಿಯುವ ನೀರಿನ ವಿಷಯದಲ್ಲಿ ತಾಲೂಕಿನಎಲ್ಲ ಹಳ್ಳಿಗಳಿಗೂ ಮಾದರಿಯಾಗಿದೆ.

ಹೌದು. ಐತಿಹಾಸಿಕ ಹಿನ್ನೆಲೆಯುಳ್ಳ ಹಲಗಲಿಗ್ರಾಮದಲ್ಲಿ ದಶಕಗಳ ಹಿಂದೆ ಒಂದೇ ಒಂದು ಕೊಡನೀರು ತರಬೇಕೆಂದರೂ ಕನಿಷ್ಠ ಒಂದು ಕಿ.ಮೀ. ದೂರನಡೆಯಬೇಕಿತ್ತು. ಮನೆಯಲ್ಲಿ ಒಬ್ಬರು ನೀರು ತರಲುಇರುವಂತಾಗಿತ್ತು. ಈ ಸಮಸ್ಯೆಯನ್ನರಿತ ಇಂದಿನ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ 2017ರಲ್ಲಿಮಾಚಕನೂರ ಬಹುಹಳ್ಳಿ ಕುಡಿಯುವ ಏತ ನೀರಾವರಿಯೋಜನೆ ಮೂಲಕ ಅಂದಾಜು ಒಂದೂವರೆಕೋಟಿ ರೂ. ವೆಚ್ಚದಲ್ಲಿ ಗ್ರಾಮಕ್ಕೆ ಕುಡಿಯುವನೀರು ಪೂರೈಸಲು ಕ್ರಮ ಕೈಗೊಂಡಿದ್ದಾರೆ. ಆರ್‌ಡಬುಎಸ್‌ ಇಲಾಖೆಯಿಂದ ಗ್ರಾಮದ ಪ್ರತಿ ಮನೆಗೂ
ನಳದ ವ್ಯವಸ್ಥೆ ಕಲ್ಪಿಸಿ ನಿರಂತರ ನೀರು ಪೂರೈಕೆಗೆಕ್ರಮ ಕೈಗೊಂಡಿದ್ದಾರೆ. ಪ್ರತಿ ನಳಗಳಿಗೆ ಮೀಟರ್‌ಅಳವಡಿಸಿ ಸ್ಥಳೀಯ ಪಂಚಾಯಿತಿ ವತಿಯಿಂದ ಬಿಲ್‌ಪಾವತಿಗೆ ಕ್ರಮ ಕೈಗೊಂಡಿದ್ದಾರೆ. ಇದರಿಂದ ನೀರಿನಉಳಿತಾಯದೊಂದಿಗೆ ಪಂಚಾಯಿತಿಗೂ ಆದಾಯಹರಿದು ಬರಲು ಆರಂಭಿಸಿದೆ. ಹೀಗಾಗಿ ಹಲಗಲಿಯಲ್ಲಿಒಂದೇ ಒಂದು ದಿನ ನೀರಿನ ಸಮಸ್ಯೆ ಉದ್ಬವವಾಗಿಲ್ಲ.ನೀರಿನ ಬಳಕೆ ಗಣನೀಯ ಇಳಿಕೆ : ಗ್ರಾಮದಲ್ಲಿ ನಿರಂತರನೀರು ಪೂರೈಕೆ ಯೋಜನೆ ಕೈಗೊಳ್ಳುವ ಮುನ್ನ ಪ್ರತಿನಿತ್ಯ13 ಲಕ್ಷ ಲೀಟರ್‌ಗೂ ಹೆಚ್ಚು ನೀರು ಬಳಕೆಯಾಗುತ್ತಿತ್ತು.ಗ್ರಾಮದಲ್ಲಿ ಒಟ್ಟು 525000 ಸಾಮರ್ಥ್ಯದ ನಾಲ್ಕುನೀರಿನ ಟ್ಯಾಂಕ್‌ಗಳು ಖಾಲಿಯಾಗಿ ಮತ್ತೆ ಬೋರ್‌ವೆಲ್‌ ಮೂಲಕ ನೀರು ಸರಬರಾಜು ಮಾಡುವ
ಪರಿಸ್ಥಿತಿ ಇತ್ತು. ಆದರೆ, ನಿರಂತರ ನೀರು ಯೋಜನೆಕಾರ್ಯರೂಪಕ್ಕೆ ಬಂದ ಮೇಲೆ ದಿನಯೊಂದಕ್ಕೆ500000 ಲಕ್ಷ ಲೀ.ನೀರು ಮಾತ್ರ ಬಳಕೆಯಾಗುತ್ತಿದೆ.ಇದರಿಂದ ದಿನಕ್ಕೆ ಅಂದಾಜು 80000 ಲಕ್ಷ ಲೀ.ಉಳಿತಾಯವಾಗುತ್ತಿದೆ.

ಪ್ರತಿ ಮನೆಗೂ ಉಚಿತ ನಳ: ನಿರಂತರ ನೀರು ಪೂರೈಕೆಯೋಜನೆ ಕೈಗೊಂಡಾಗ ಗ್ರಾಮದ 1450 ಮನೆಗಳಿಗೆಉಚಿತವಾಗಿ ನಳ-ಮೀಟರ್‌ ಅಳವಡಿಸಲಾಗಿದೆ.ಅದಾದ ಬಳಿಕ ಸರ್ಕಾರ ನಿಗದಿಪಡಿಸಿರುವಶುಲ್ಕದೊಂದಿಗೆ ಹೊಸ ನಳ ಜೋಡಿಸಲಾಗುತ್ತಿದೆ.ಗ್ರಾಮದಲ್ಲಿ ಸದ್ಯ 1465 ಮನೆಗಳಿಗೆ ನಳಜೋಡಿಸಲಾಗಿದೆ.

ಬಡವರಿಗೆ ವರದಾನ: ನಳಗಳಿಗೆ ಮೀಟರ್‌ಅಳವಡಿಸಿರುವುದರಿಂದ ಬಡವರು ಹಾಗೂ ವಿಭಕ್ತಕುಟುಂಬಕ್ಕೆ ಹೆಚ್ಚು ಅನುಕೂಲವಾಗಿದೆ. ಜನರು ಇರುವಮನೆಗಳಲ್ಲಿ ನೀರಿನ ಬಳಕೆ ಮಿತವ್ಯಯವಾಗಿದ್ದು,820 ಮನೆಗಳು ತಿಂಗಳಿಗೆ 50 ರೂ.ನೀರಿನ ಬಿಲ್‌
ಪಾವತಿಸುತ್ತಿವೆ.ಪಂಚಾಯಿತಿಗೂ ಉಳಿತಾಯ: ಗ್ರಾಮದಲ್ಲಿಮಿತವ್ಯಯ ನೀರಿನ ಬಳಕೆಯಿಂದ ಹೆಚ್ಚುವರಿಮೋಟರ್‌ಗಳ ಬಳಕೆ ನಿಲ್ಲಿಸಲಾಗಿದೆ. ಯೋಜನೆಆರಂಭಕ್ಕೂ ಮುನ್ನ 5-6 ಮೋಟರ್‌ಗಳನ್ನು ಬಳಸಿನೀರು ಪೂರೈಸಲಾಗುತ್ತಿತ್ತು. ಇದರಿಂದ ಪ್ರತಿ ತಿಂಗಳುಪಂಚಾಯಿತಿಗೆ ಹೆಚ್ಚಿನ ಪ್ರಮಾಣದ ಬಿಲ್‌ ಬರುತ್ತಿತ್ತು.ಆದರೆ, ಯೋಜನೆ ಕಾರ್ಯರೂಪಕ್ಕೆ ಬಂದಾಗಿನಿಂದನೀರನ್ನು ಲಿಫ್ಟ್‌ ಮಾಡುವ ಉದ್ದೇಶದಿಂದ ಒಂದೇ
ಮೋಟರ್‌ ಬಳಕೆ ಮಾಡಲಾಗುತ್ತಿದೆ. ಇದರಿಂದಪಂಚಾಯಿತಿಗೆ ಲಕ್ಷಾಂತರ ರೂ. ವಿದ್ಯುತ್‌ ಬಿಲ್‌ಉಳಿತಾಯವಾಗುತ್ತಿದೆ.

ದೆಹಲಿ ತಂಡ ಭೇಟಿ: ಗ್ರಾಮದಲ್ಲಿನ ನೀರಿನ ವ್ಯವಸ್ಥೆಅಧ್ಯಯನ ನಡೆಸಲು ದೆಹಲಿಯಿಂದ ವಿಶೇಷ ತಂಡಗ್ರಾಮಕ್ಕೆ ಆಗಮಿಸಿ ಗ್ರಾಮದಲ್ಲಿ ವ್ಯವಸ್ಥೆ ಮೆಚ್ಚುಗೆವ್ಯಕ್ತಪಡಿಸಿದೆ.41 ಹಳ್ಳಿಗಳಿಗೆ ವಿಸ್ತರಣೆ: ಸದ್ಯ ಹಲಗಲಿ ಗ್ರಾಮದಲ್ಲಿಪ್ರಯೋಗಾತ್ಮಕವಾಗಿ ಕೈಗೊಂಡಿದ್ದ ನೀರಿನ ಯೋಜನೆಯಶಸ್ವಿಯಾಗಿದೆ. ಇದೇ ಮಾದರಿಯಲ್ಲಿ ತಾಲೂಕಿನ41 ಹಳ್ಳಿಗಳಿಗೆ ಕೇಂದ್ರ ಸರ್ಕಾರದ ಜೀವ ಜಲ ಮಿಷನ್‌ಯೋಜನೆಯಡಿ ಕೋಟ್ಯಂತರ ರೂ. ವೆಚ್ಚದಲ್ಲಿಗ್ರಾಮಗಳಿಗೆ ನಿರಂತರ ನೀರು ಯೋಜನೆ ಜಾರಿಗೆತರಲಾಗುತ್ತಿದೆ.

ಹಲಗಲಿ ಗ್ರಾಮದಲ್ಲಿನ 24×7ನೀರಿನ ಪೂರೈಕೆಯಿಂದಗ್ರಾಮದ ಜನರಿಗೆ ಹೆಚ್ಚುಅನುಕೂಲವಾಗಿದೆ. ಅದೇಮಾದರಿಯಲ್ಲಿ ಜೀವ ಜಲಮಿಷನ್‌ ಯೋಜನೆಯಡಿತಾಲೂಕಿನ 41 ಗ್ರಾಮ ಪಂಚಾಯಿತಿಗಳಿಗೆ ನೀರಿನವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಸಾರ್ವಜನಿಕರಿಗೆನಿರಂತರ ನೀರೊದಗಿಸುವುದೇ ನಮ್ಮ ಮುಖ್ಯಉದ್ದೇಶ.ಗೋವಿಂದ ಕಾರಜೋಳ, ಉಪಮುಖ್ಯಮಂತ್ರಿ

 


Spread the love

About Laxminews 24x7

Check Also

ಚುನಾವಣೆ ಚೆಕಿಂಗ್; ದಾಖಲೆ ಇಲ್ಲದ 20 ಲಕ್ಷಕ್ಕೂ ಅಧಿಕ ವಶ.!

Spread the love ಚಿತ್ರದುರ್ಗ; ಚಿತ್ರದುರ್ಗದಲ್ಲಿ ವಾಹನ ಒಂದರಲ್ಲಿ ವ್ಯಕ್ತಿಯೊಬ್ಬರು ದಾಖಲೆ ಇಲ್ಲದೆ ಸುಮಾರು 20 ಲಕ್ಷಕ್ಕೂ ಅಧಿಕ ಹಣವನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ