ಗೋಕಾಕ : ಎಲ್ಲ ದಾನಗಳಲ್ಲಿ ಶ್ರೇಷ್ಠವಾದ ರಕ್ತದಾನ ಮಾಡುವ ಮೂಲಕ ಜೀವ ಉಳಿಸುವಂತೆ ಪುಣ್ಯ ಕಾರ್ಯದಲ್ಲಿ ಪಾಲ್ಗೊಂಡು ಅರ್ಥಪೂರ್ಣವಾದ ಸಾಮಾಜಿಕ ಕಳಿಕಳಿಯ ಮಾರ್ಗದಲ್ಲಿ ಜೀವನ ಸಾಗಿಸೋಣವೆಂದು ಇಲ್ಲಿಯ ಜಿಎನ್ಎಸ್ ಶಾಲೆಯ 1998-99 ಸಾಲಿನ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಅಶೋಕ ಕೌಜಲಗಿ ಹೇಳಿದರು.
ರವಿವಾರದಂದು ಇಲ್ಲಿಯ ರೋಟರಿ ರಕ್ತ ಭಂಡಾರದಲ್ಲಿ ಜಿಎನ್ಎಸ್ ಶಾಲೆಯ 1998-99 ಸಾಲಿನ ಹಳೆಯ ವಿದ್ಯಾರ್ಥಿಗಳ ಸಂಘದ ಆಶ್ರಯದಲ್ಲಿ ರವಿವಾರ ದಿ. 21 ರಂದು ಇಲ್ಲಿಯ ಶುಭ ಗಾರ್ಡನ್ನಲ್ಲಿ ನಡೆಯಲಿರುವ ಗುರುಸ್ಮøತಿ ಹಾಗೂ ಅಪೂರ್ವ ಸ್ನೇಹ ಸಂಗಮದ ಕಾರ್ಯಕ್ರಮದ ನಿಮಿತ್ಯವಾಗಿ ಹಮ್ಮಿಕೊಂಡ ಬೃಹತ್ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ರಕ್ತವನ್ನು ಉತ್ಪಾದಿಸಲು ಸಾಧ್ಯವಿಲ್ಲ, ಅದನ್ನು ದಾನಿಗಳಿಂದಲೇ ಪಡೆಯಬೇಕು. ಒಂದು ಜೀವಿಯ ಅವಘಡ ಸಂದರ್ಭದಲ್ಲಿ ನಾವಿಂದು ಮಾಡಿದ ರಕ್ತದಾನ ಅವರ ಜೀವವನ್ನು ಉಳಿಸುವ ಕಾರ್ಯವನ್ನು ಮಾಡುತ್ತದೆ. ಶಿಕ್ಷಣದೊಂದಿಗೆ ಮಾನವೀಯ ಮೌಲ್ಯಗಳನ್ನು ನಮಗೆ ನೀಡಿದ ಶಿಕ್ಷಕರ ಆಶಯದಂತೆ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ನಾವೆಲ್ಲ ಪಾಲ್ಗೊಳೋಣ. ಮಾನವರೆಲ್ಲ ಒಂದೇ ಎಂಬ ಭಾವನೆಯಿಂದ ಬದುಕಿ ಸಮಾನತೆಯ ಸಮಾಜ ನಿರ್ಮಿಸಲು ಶ್ರಮಿಸುವುದರೊಂದಿಗೆ ನಾವು ಕಲಿತ ಶಾಲೆ ಹಾಗೂ ಶಿಕ್ಷಕರ ಮತ್ತು ನಮ್ಮ ತಂದೆ-ತಾಯಿಯವರ ಹೆಸರುಗಳನ್ನು ಉಳಿಸುವ ಕಾರ್ಯವನ್ನು ಮಾಡೋಣವೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಈಶ್ವರ ಯಕ್ಸಂಬಿ, ಉಪಾಧ್ಯಕ್ಷ ಮಲ್ಲಪ್ಪ ದಾಸಪ್ಪಗೋಳ, ಕಾರ್ಯದರ್ಶಿ ಜಯರಾಜ ದೇಶಪಾಂಡೆ, ಕಾರ್ಯಕ್ರಮ ಮೇಲ್ವಿಚಾರಕ ಸಂಜು ಚಿಪ್ಪಲಕಟ್ಟಿ, ರೋಟರಿ ಸೇವಾ ಸಂಘದ ಚೇರಮನ್ ಮಲ್ಲಿಕಾರ್ಜುನ ಕಲ್ಲೋಳಿ, ವಿದ್ಯಾರ್ಥಿ ಸಂಘದ ಸದಸ್ಯರಾದ ಸಂದೀಪ ಮಹಾಜನ, ಶಿವು ಕುರಬೇಟ, ಪವನ ದೇಸಾಯಿ, ದರೀಶ ಕಲಘಾನ, ಶಂಕರ ಧರೆನ್ನವರ, ರಾಜಶೇಖರ ಹೆರಲಗಿ, ವಿಠ್ಠಲ ಕುರಿ, ರಜಾಕ ತಲವಾರ, ಗಜಾನನ ವಾಗುಲೆ, ಮಾಯಪ್ಪ ತುಳಜನ್ನವರ, ಸಮೀರ ದೇಶಪಾಂಡೆ, ಮಹಾನಿಂಗ ಕುಂಬಾರ, ಸಮೀರ ದೇಶಪಾಂಡೆ, ವಿಜಯಶ್ರೀ ಬೆಂಬಳಗಿ ಸೇರಿದಂತೆ ಅನೇಕರು ಇದ್ದರು.