Breaking News
Home / ಜಿಲ್ಲೆ / ಬೆಳಗಾವಿ / ಗೋಕಾಕ / ಸಪ್ತಾಹ ನಿಮಿತ್ಯ ಸಾಂಸ್ಕøತಿಕ ಕಾರ್ಯಕ್ರಮ

ಸಪ್ತಾಹ ನಿಮಿತ್ಯ ಸಾಂಸ್ಕøತಿಕ ಕಾರ್ಯಕ್ರಮ

Spread the love

ಸಪ್ತಾಹ ನಿಮಿತ್ಯ ಸಾಂಸ್ಕøತಿಕ ಕಾರ್ಯಕ್ರಮ
ಘಟಪ್ರಭಾ: ಸಮೀಪದ ಶಿಂದಿಕುರಬೇಟ ಗ್ರಾಮದ ಶ್ರೀ ಶಿವಶರಣ ಹರಳಯ್ಯನವರ ಹಾಗೂ ಬುದ್ಧ,ಬಸವ,ಅಂಬೇಡಕರರ 79 ನೇ ವಾರ್ಷಿಕೋತ್ಸವದ ಸಪ್ತಾಹ ಸಮಾರಂಭವು ದಿ.7 ಮತ್ತು 8 ರಂದು ನಡೆಯಲಿದೆ.
ದಿ.7ರಂದು ಅಭಿಷೇಕ ಕಾರ್ಯಕ್ರಮವು ಸಿದ್ದಯ್ಯಸ್ವಾಮಿ ಹಿರೇಮಠ ಇವರಿಂದ ಜರುಗಲಿದೆ.
ಸಂಜೆ 5 ಗಂಟೆಗೆ ಸಾಧಕರಿಗೆ ಮತ್ತು ಗ್ರಾಮ ಪಂಚಾಯತ ನೂತನ ಸದಸ್ಯರುಗಳಿಗೆ ಸನ್ಮಾನ ಕಾರ್ಯಕ್ರಮ ಹಾಗೂ ಶಿಂದಿಕುರಬೇಟ ಐಡಿಯಲ್ ಅರ್ಪಿಸುವ ಎಸ್.ಬಿ.ಇವೆಂಟ್ಸ್ ಮುರಗೋಡ ಇವರಿಂದ ಸಾಂಸ್ಕøತಿಕ ಕಾರ್ಯಕ್ರಮ ಜರುಗಲಿದ್ದು ಈ ಕಾರ್ಯಕ್ರಮದಲ್ಲಿ ಕಾಮಿಡಿ ಕಿಲಾಡಿ ಖ್ಯಾತಿಯ ಸಂಜು ಬಸಯ್ಯ, ಕನ್ನಡ ಕೋಗಿಲೆ ವಿನ್ನರ್ ಖಾಸಿಮ ಅಲಿ, ಮಹನ್ಯಾ ಪಾಟೀಲ, ಮಂಜುನಾಥ ಹುಡೇದ, ಮುತ್ತುರಾಜ ಭೋವಿ, ಕಾಶೀನಾಥ ಎಸ್.ಕೆ., ಸುನೀಲ ವಿಜಯಪೂರ, ಲಕ್ಷ್ಮೀ ಕಿತ್ತೂರ, ಎಲ್,ಎಲ್,ಶ್ರೀಕಾಂತ, ನಟ,ನಿರ್ದೇಶಕ ಪ್ರಕಾಶ ಶಿಂದಿಕುರಬೇಟ ಭಾಗವಹಿಸುವರು. ದಿ.8ರಂದು ಫಲ್ಲಕ್ಕಿ ಉತ್ಸವ ಹಾಗೂ ಪ್ರವಚನ ಕಾರ್ಯಕ್ರಮ ಜರುಗಲಿದ್ದು ಸಾನಿಧ್ಯವನ್ನು ಝಾಂಗಟಿಹಾಳ ಯಲ್ಲಾಲಿಂಗ ಮಠದ ಚಂದ್ರಶೇಖರ ಸ್ವಾಮಿಜಿ, ಕೃಪಾನಂದ ಸ್ವಾಮಿಜಿ ಕೌಜಲಗಿ, ಹುಣಶ್ಯಾಳ ಪಿಜಿ ಶ್ರೀ ನಿಜಗುಣ ದೇವರು, ರಾಯಪ್ಪ ಮಾಡಲಗಿ, ದಯಾನಂದ ಬೆಳಗಾವಿ ಆಗಮಿಸುವರು ನಂತರ ಮಹಾಪ್ರಸಾದ ಜರುಗಲಿದೆ ಎಂದು ಕಮೀಟಿ ಕಾರ್ಯದರ್ಶಿ ವಿಠ್ಠಲ ಕರೋಶಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.


Spread the love

About Laxminews 24x7

Check Also

ಪಾನಿಪುರಿ ಮಾರುವ ಜ್ಯೂನೀಯರ್ ಮೋದಿ; ಮೋದಿ ತರಾನೇ..ಆದ್ರೆ ಅಲ್ಲ!

Spread the loveನವದೆಹಲಿ: ಗುಜರಾತ್‌ನ ಪಾನಿ ಪುರಿ ಮಾರಾಟಗಾರ ಅನಿಲ್ ಭಾಯಿ ಠಕ್ಕರ್ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಹೋಲುವ ಹಾಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ