Breaking News
Home / Uncategorized / ಸನ್ ‘ರೈಸಿಂಗ್’ ಆಗಲು ಮಾಡ್ಬೇಕಿದೆ ಮ್ಯಾಜಿಕ್; ಲಯಕ್ಕೆ ಮರಳುತ್ತಾ ಡೆಲ್ಲಿ ಕ್ಯಾಪಿಟಲ್ಸ್..?

ಸನ್ ‘ರೈಸಿಂಗ್’ ಆಗಲು ಮಾಡ್ಬೇಕಿದೆ ಮ್ಯಾಜಿಕ್; ಲಯಕ್ಕೆ ಮರಳುತ್ತಾ ಡೆಲ್ಲಿ ಕ್ಯಾಪಿಟಲ್ಸ್..?

Spread the love

ಮತ್ತೊಂದು ಮೋಸ್ಟ್​​​ ಎಕ್ಸೈಟೆಡ್​​ ಮ್ಯಾಚ್​​ಗೆ ಸಾಕ್ಷಿಯಾಗಲು ದುಬೈ ಮೈದಾನ ಸಜ್ಜಾಗಿದೆ. ಮೊದಲ ಹಂತದ ದರ್ಬಾರ್ ಮುಂದುವರೆಸಲು ಡೆಲ್ಲಿ ರೆಡಿಯಾಗಿದ್ರೆ, ಪಂತ್​ ಪಡೆಗೆ ಬ್ರೇಕ್​ ಹಾಕಲು ವಿಲಿಯಮ್​ಸನ್​ ನೇತೃತ್ವದ ಸನ್​​ ರೈಸರ್ಸ್ ಗೇಮ್​ಪ್ಲಾನ್ ಮಾಡಿಕೊಂಡಿದೆ.

ದಿನದಿಂದ ದಿನಕ್ಕೆ ಐಪಿಎಲ್ ಸೆಕೆಂಡ್​ ಹಾಫ್ ರಂಗೇರುತ್ತಿದೆ. ಇಂದು ಮತ್ತೊಂದು ಹೈವೋಲ್ಟೇಜ್​ ಮ್ಯಾಚ್​ಗೆ ದುಬೈ ಇಂಟರ್​ನ್ಯಾಷನಲ್​ ಸ್ಟೇಡಿಯಂ ಸಜ್ಜಾಗಿದೆ. ಇಂದಿನ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ & ಸನ್ ರೈಸರ್ಸ್ ಹೈದ್ರಾಬಾದ್ ಮುಖಾಮುಖಿಯಾಗ್ತಿದೆ. ಯಂಗ್ vs ಎಕ್ಸ್​​ಪೀರಿಯನ್ಸ್ ನಡುವಿನ ಸಮರ ಅಂತಾನೇ ಬಿಂಬಿತವಾಗಿರುವ ಇಂದಿನ ಪಂದ್ಯದಲ್ಲಿ ಯಾರ್​ ಗೆಲ್ತಾರೆ ಎಂಬ ಕುತೂಹಲ ಹೆಚ್ಚಿಸಿದೆ.

ಗೆಲುವಿನ ಲಯ ಮುಂದುವರಿಸುತ್ತಾ ಡೆಲ್ಲಿ ಕ್ಯಾಪಿಟಲ್ಸ್​..!
ಫಸ್ಟ್​ ಹಾಫ್​​ನಲ್ಲಿ ಸಾಲಿಡ್ ಪರ್ಫಾಮೆನ್ಸ್​ ನೀಡಿ ಪ್ಲೇ ಆಫ್​ ಸನಿಹದಲ್ಲಿರುವ ಡೆಲ್ಲಿ, ಸೆಕೆಂಡ್ ಹಾಫ್​​ನಲ್ಲೂ ಅಂಥದ್ದೇ ಪ್ರದರ್ಶನ ನೀಡೋ ಲೆಕ್ಕಚಾರದಲ್ಲಿದೆ. ಆದ್ರಲ್ಲೂ ಶ್ರೇಯಸ್ ಕಮ್​​ಬ್ಯಾಕ್ ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ. ಇದರ ಜೊತೆಗೆ ಶಿಖರ್ ಧವನ್, ಪೃಥ್ವಿ ಶಾರ ಅದ್ಬುತ ಫಾರ್ಮ್​, ಮಿಡಲ್ ಆರ್ಡರ್​​ನಲ್ಲಿ ಮಾರ್ಕಸ್ ಸ್ಟೋಯ್ನಿಸ್​​, ರಿಷಭ್ ಪಂತ್, ಶಿಮ್ರೋನ್​ ಹೆಟ್ಮೇಯರ್​ರ ಬ್ಯಾಟಿಂಗ್​ ತಂಡದ ಬಲವಾಗಿದೆ.
13ನೇ ಅವೃತ್ತಿಯಲ್ಲಿ ಯುಎಇ ಕಂಡೀಷನ್ಸ್​ನಲ್ಲಿ ಕಮಾಲ್ ಮಾಡಿದ್ದ ಕಗಿಸೋ ರಬಾಡ, ಎನ್ರಿಚ್​ ನೋಕಿಯಾ ಹೈದ್ರಾಬಾದ್​ಗೆ ಕಂಟಕವಾಗಬಲ್ಲರು. ಇದರೊಂದಿಗೆ ಸ್ಪಿನ್ನರ್‌ಗಳಾದ ಅಕ್ಷರ್ ಪಟೇಲ್, ಆರ್.ಅಶ್ವಿನ್, ಅಮಿತ್ ಮಿಶ್ರಾ ಮೋಡಿ ಮಾಡಿದ್ದೇ ಆದ್ರೆ, ಡೆಲ್ಲಿ ವಿಜಯಯಾತ್ರೆ ಮುಂದುವರೆಯುವುದರಲ್ಲಿ ಅನುಮಾನವೇ ಇಲ್ಲ.

ಸನ್ ರೈಸರ್ಸ್​ ಪಾಲಿಗೆ ಡು ಆರ್ ಡೈ ಮ್ಯಾಚ್​
ಮೊದಲ ಹಂತದಲ್ಲಿ ಹೀನಾಯ ಪ್ರದರ್ಶನ ನೀಡಿರುವ ಸನ್​ ರೈಸರ್ಸ್​ಗೆ ಪ್ರತಿಯೊಂದು ಪಂದ್ಯವೂ ಡು ಆರ್​ ಡೈ ಮ್ಯಾಚ್​ ಆಗಿದೆ. ಸೆಕೆಂಡ್ ಹಾಫ್​​ನಲ್ಲಿ ಒಂದೇ ಒಂದು ಪಂದ್ಯವನ್ನೂ ಸೋತರೂ ಪ್ಲೇ ಆಫ್​ ಹಾದಿ ಕಠಿಣವಾಗಲಿದೆ. ಹೀಗಾಗಿಯೇ ತಂಡದಲ್ಲಿನ ಪ್ರತಿಯೊಬ್ಬರು ಸಕೆಂಡ್​ ಹಾಫ್​​ನಲ್ಲಿ ಉತ್ತಮ ಪರ್ಫಾಮೆನ್ಸ್​ ನೀಡಬೇಕಿದೆ.

ಡೇವಿಡ್ ವಾರ್ನರ್, ಮನೀಶ್​ ಪಾಂಡೆ, ಕೇನ್ ವಿಲಿಯಮ್ಸನ್, ರಶೀದ್​ ಖಾನ್ ಮೇಲೆ ನಿರೀಕ್ಷೆಯ ಭಾರವೇ ಇದೆ. ಇನ್ನು ನಟರಾಜನ್, ಭುವನೇಶ್ವರ್​ ಕಮ್​ಬ್ಯಾಕ್ ಮಾಡಿರೋದು ಬೌಲಿಂಗ್​ ವಿಭಾಗಕ್ಕೆ ಬಲತಂದಿದೆ. ತಂಡದ ಸ್ಟಾರ್​ಗಳು ಸಾಮರ್ಥ್ಯಕ್ಕೆ ತಕ್ಕ ಆಟವಾಡಿದ್ರೆ, ಡೆಲ್ಲಿ ಕ್ಯಾಪಿಟಲ್ಸ್ ಸೋಲಿಸೋದು ಕಷ್ಟದ ಕೆಲಸವೇನಲ್ಲ.

 


Spread the love

About Laxminews 24x7

Check Also

ಹೊರಬಂದು ಮತ ಹಾಕಿ : ನಿರ್ಮಲಾ ಸೀತಾರಾಮನ್‌ ಮನವಿ

Spread the love ಬೆಂಗಳೂರು,ಏ.26- ಪ್ಲೀಸ್‌ ಮನೆಯಿಂದ ಹೊರಗೆ ಬಂದು ಮತ ಚಲಾಯಿಸಿ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ