ಬೆಳಗಾವಿ : ಕನಾ೯ಟಕ ರಾಜ್ಯ ಬೀದಿ ನಾಟಕ ಕಲಾವಿದರ ಒಕ್ಕೂಟ ಬೆಳಗಾವಿ ಘಟಕದಿಂದ ಕಳೆದ ಆರು ತಿಂಗಳಿಂದ ಬೀದಿ ನಾಟಕ ಕಲಾವಿದರು ಯಾವುದೆ ಕಾಯ೯ಕ್ರಮಗಳು ಇಲ್ಲದೆ ಪರದಾಡುವ ಪರಿಸ್ಥಿತಿ ಎದುರಾಗಿದ್ದು .
ಬೀದಿ ನಾಟಕ ಕಲಾವಿದರು ಎಲ್ಲ ಇಲಾಖೆಗಳ ಯೋಜನೆಗಳನ್ನು ಜನಸಾಮಾನ್ಯರಿಗೆ ಬೀದಿ ನಾಟಕದ ಮೂಲಕ ತಿಳುವಳಿಕೆ ಕೊಟ್ಟು ಸಕಾ೯ರ ಮತ್ತು ಇಲಾಖೆಯ ನಡುವೀನ ಕೊಂಡಿಗಳಂತ್ತೆ ಕೆಲಸವನ್ನು ಕಳೆದ ಸುಮಾರು 40 ಕ್ಕೂ ಹೆಚ್ಚು ವಷ೯ಗಳಿಂದ ಕಾಯ೯ಕ್ರಮಗಳನ್ನು ಮಾಡಿಕೊಂಡು ಬಂದಿದ್ದು.
ಈಗ ರಾಜ್ಯ ಸಕಾ೯ರ ಬೀದಿ ನಾಟಕ ಕಾಯ೯ಕ್ರಮಗಳನ್ನು ಕಡಿಮೆ ಮಾಡಿದ್ದು. ಮತ್ತೆ ಇಲಾಖೆಗಳ ಕಾಯ೯ಕ್ರಮವನ್ನು ಹೆಚ್ಚಿಸಿ. ಬಡ ಕಲಾವಿದರ ಜೀವನಕ್ಕೆ ಆಶ್ರಯ ಮಾಡಿ ಕೊಡಬೇಕಾಗಿ ಮಾನ್ಯ ಮುಖ್ಯಮಂತ್ರಿಗಳು ಬೀದಿ ನಾಟಕ ಕಲಾವಿದರಿಗೆ ಕಾಯ೯ಕ್ರಮ ನೀಡುವಂತೆ ಎಲ್ಲ ಇಲಾಖೆಗಳಿಗೆ ನಿದೇ೯ಶನ ನೀಡಬೇಕು ಎಂದು ಬೀದಿ ನಾಟಕ ಕಲಾವಿದರು ಮಾನ್ಯ ಜಿಲ್ಲಾಧಿಕಾರಿಗಳಿಗಳಾದ ಶ್ರೀ ಎಮ್ ಜಿ ಹೀರೆಮಠ ಅವರ ಮೂಲಕ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಕಲಾವಿದರ ಪರಿಷತ್ ಜಿಲ್ಲಾ ಅಧ್ಯಕ್ಷರಾದ ರಾಮಚಂದ್ರ ಅ ಕಾಂಬಳೆ ಭರತ್ ಕಲಾ ಚಂದ್ರ ಮೀಲಿಂದ ಸಂಗಣ್ಣವರ ಪ್ರಶಾಂತ ಕಾಂಬಳೆ ಅಕ್ಕಮಾಹಾದೇವಿ ಜೋಕಾನಟ್ಟಿ ಸಂತೋಷ ಕಾಂಬಳೆ ಪರಶುರಾಮ ಸಂಗಣ್ಣವರ ಸುಜಾತಾ ಮಗದುಮ ಯಮನವ್ವ ಜೋಕಾನಟ್ಟಿ ಸುಪ್ರೀಯಾ ಕಲಾಚಂದ್ರ ಮಾರುತಿ ಹೀಗೆ ಹಲವಾರು ಬೀದಿ ನಾಟಕ ಕಲಾವಿದರು ಭಾಗವಹಿಸಿದ್ದರು.