Breaking News
Home / ಜಿಲ್ಲೆ / ಬೆಳಗಾವಿ / ರಾಜ್ಯಸಭಾ ಟಿಕೆಟ್‌ಗಾಗಿ ಪ್ರಭಾಕರ್ ಕೋರೆ – ರಮೇಶ್ ಕತ್ತಿ ಪೈಪೋಟಿ….

ರಾಜ್ಯಸಭಾ ಟಿಕೆಟ್‌ಗಾಗಿ ಪ್ರಭಾಕರ್ ಕೋರೆ – ರಮೇಶ್ ಕತ್ತಿ ಪೈಪೋಟಿ….

Spread the love

ಬೆಳಗಾವಿ-ಬೆಳಗಾವಿ ಜಿಲ್ಲಾ ಪಾಲಿಟಿಕ್ಸ್ ನಲ್ಲಿ ಈಗ ಮತ್ತೆ ಕತ್ತಿ ವರಸೆ ಆರಂಭವಾಗಿದ್ದು,ರಾಜ್ಯ ಸಭಾ ಸ್ಥಾನಕ್ಕೆ ಕತ್ತಿ ಸಹೋದರರು ಪಟ್ಟು ಹಿಡಿದಿದ್ದು,ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆಗೆ,ತಳಮಳ ಶುರುವಾಗಿದೆ‌.

ರಾಜ್ಯಸಭಾ ಟಿಕೆಟ್‌ಗಾಗಿ ಪ್ರಭಾಕರ್ ಕೋರೆ – ರಮೇಶ್ ಕತ್ತಿ ಪೈಪೋಟಿ ನಡೆದಿದ್ದು. ರಾಜ್ಯಸಭೆ ಟಿಕೆಟ್‌ಗೆ ಮಾಜಿ ಸಂಸದ ರಮೇಶ್ ಕತ್ತಿ ಪಟ್ಟು ಹಿಡಿದಿದ್ದಾರೆ‌.

ಇಂದು ಬೆಳಗಿನ ಜಾವ
ರಾಜ್ಯಸಭಾ ಸದಸ್ಯ ಪ್ರಭಾಕರ್ ಕೋರೆ ಬೆಂಗಳೂರಿಗೆ ದೌಡಾಯಿಸಿದ್ದಾರೆ. ಬೆಳಗ್ಗೆ ಆರು ಗಂಟೆಗೆ ಬೆಳಗಾವಿಯಿಂದ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ.

ಸದ್ಯ ರಾಜ್ಯಸಭಾ ಸದಸ್ಯರಾಗಿರುವ ಪ್ರಭಾಕರ್ ಕೋರೆ ಅವರ ಅಧಿಕಾರದ ಅವಧಿ,ಜೂನ್‌ 25ಕ್ಕೆ ಮುಗಿಯುತ್ತದೆ. ಪ್ರಭಾಕರ್ ಕೋರೆಯವರ ರಾಜ್ಯಸಭಾ ಅವಧಿ ಅಂತ್ಯಗೊಳ್ಳಲಿದ್ದು ಈ ಸ್ಥಾನ ನಮಗೆ ಕೊಡಿ ಎಂದು ಕತ್ತಿ ಸಹೋದರರು ಪಟ್ಟು ಹಿಡಿದಿದ್ದಾರೆ.

ಜೂನ್ 2ನೇ ವಾರದಲ್ಲಿ ರಾಜ್ಯಸಭೆಯ 4 ಸ್ಥಾನಗಳಿಗೆ ಚುನಾವಣೆ ನಡೆಯುವ ಸಾಧ್ಯತೆಗಳಿವೆ‌. ರಾಜ್ಯಸಭಾ ಟಿಕೆಟ್‌ಗಾಗಿ ಪ್ರಭಾಕರ್ ಕೋರೆ – ರಮೇಶ್ ಕತ್ತಿ ಮಧ್ಯೆ ಪೈಪೋಟಿ ಶುರುವಾಗಿದ್ದು,ಈ ವಿಷಯದಲ್ಲಿ ಯಾರು ಕಮಾಲ್ವಮಾಡ್ತಾರೆ,ಯಾರು ಕಂಗಾಲ್ ಆಗ್ತಾರೆ ಅನ್ನೋದನ್ನು ಕಾದು ನೋಡಬೇಕಾಗಿದೆ


Spread the love

About Laxminews 24x7

Check Also

ಬತ್ತಿದ ಜೀವನದಿ; ಹೆಚ್ಚಿದ ದುಗುಡ

Spread the love ಚಿಕ್ಕೋಡಿ: ಉತ್ತರ ಕರ್ನಾಟಕದ ಜೀವನದಿ ಕೃಷ್ಣೆಯಲ್ಲಿ ನೀರಿನ ಪ್ರಮಾಣ ತೀವ್ರ ಕುಸಿತ ಕಂಡಿದೆ. ಇದರಿಂದ ಮನುಷ್ಯರು ಮಾತ್ರವಲ್ಲ; …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ