Breaking News

ಉಗರಗೋಳದಲ್ಲಿ ಗಮನಸೆಳೆದ ಶಕ್ತಿ ಪ್ರದರ್ಶನ

Spread the love

ಉಗರಗೋಳ: ಗ್ರಾಮದಲ್ಲಿ ಆಗಿಹುಣ್ಣಮೆ ಹಾಗೂ ಗ್ರಾಮದೇವತೆಯರಾದ ದ್ಯಾಮವ್ವದೇವಿ, ದುರ್ಗವ್ವದೇವಿಯರಿಗೆ ಉಡಿ ತುಂಬುವ ಕಾರ್ಯಕ್ರಮದ ಅಂಗವಾಗಿ ಈಚೆಗೆ ಶಕ್ತಿಪ್ರದರ್ಶನ ಜರುಗಿತು.
20 ವರ್ಷದ ಪ್ರವೀಣ ದುಂಡಿ (ಗೋಸಲ್), ವಿಜಯ ಪಡಸುಣಗಿ, ಕಾರ್ತಿಕ ಕುದರಿ ಅವರು 1 ಕ್ವಿಂಟಾಲ್ ಜೋಳದ ಚೀಲ ಹೊತ್ತು ಯಾರ ಸಹಾಯವಿಲ್ಲದೆಯೇ ದೀಢ್ ನಮಸ್ಕಾರ ಹಾಕಿ ಭಕ್ತಿ ಸೇವೆ ಸಲ್ಲಿಸಿದರು. ಜೋಡೆತ್ತು ಸಾಥ್ ನೀಡಿದವು. ಗ್ರಾಮದ ರಾಯಣ್ಣ ವೃತ್ತದಿಂದ ಬಸವೇಶ್ವರ ವೃತ್ತದವರೆಗೆ ಅರ್ಧ ಕಿಮೀ ವರೆಗೆ ಸಾಗಿ ಗಮನಸೆಳೆದರು.
ಸ್ಥಳೀಯ ನಿರ್ವಾಣೇಶ್ವರಮಠದ ಗುರು ಮಹಾಂತ ಸ್ವಾಮೀಜಿ, ಹಿರೇಕುಂಬಿ ಅಮೋಮಠದ ಮುನಯ್ಯ ಸ್ವಾಮೀಜಿ, ಮಲ್ಲಪ್ಪ ಸಿದ್ದಕ್ಕನವರ, ವಿಠ್ಠಲ ಸಿದ್ದಕ್ಕನವರ, ಹನುಮಂತ ಸಿದ್ದಕ್ಕನವರ, ಮಂಜುನಾಥ ಗುಡೆನ್ನವರ, ಯಲ್ಲಪ್ಪ ದುಂಡಿ, ಮಾರುತಿ ಪಡಸುಣಗಿ, ಬಸಪ್ಪ ಅಳಗವಾಡಿ, ರಾಜನಗೌಡ ಟೋಪಣ್ಣವರ, ನೀಲಪ್ಪ ಸಿದ್ದಕ್ಕನವರ, ಭೀಮಶಿ ಕೂಮಟೋಜಿ, ನಿಂಗಪ್ಪ ಗೋವಪ್ಪನವರ ಇತರರಿದ್ದರು.

Spread the love

About Laxminews 24x7

Check Also

ತಿರಂಗ ಯಾತ್ರೆಯಲ್ಲಿ ಗಮನ ಸೆಳೆದ ಈಸೂರು ದಂಗೆಯ ಸ್ತಬ್ಧಚಿತ್ರ

Spread the loveಶಿವಮೊಗ್ಗ: ನಗರದ  ಶೀನಪ್ಪಶೆಟ್ಟಿ ವೃತ್ತದಲ್ಲಿ ಸ್ವಾತಂತ್ರ್ಯೋತ್ಸವ  ಅಂಗವಾಗಿ ಬಿಜೆಪಿ ವತಿಯಿಂದ ರಾಮಣ್ಣಶ್ರೇಷ್ಟಿ ಪಾರ್ಕ್‌ನಿಂದ ಗೋಪಿ ವೃತ್ತದವರೆಗೆ ತಿರಂಗ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ