ಹುಬ್ಬಳ್ಳಿ : ನನ್ನ ಹೆಸರು ಮೊದಲ ಪಟ್ಟಿಯಲ್ಲಿ ಬರಬೇಕಿತ್ತು ಬಂದಿಲ್ಲ. ರಾಷ್ಟ್ರೀಯ ಅಧ್ಯಕ್ಷರು ಫೋನ್ ಮಾಡಿದ್ರು. ಹೀಗಾಗಿ ಇಂದು ದೆಹಲಿಗೆ ಹೋಗುತ್ತಿದ್ದೇನೆ . ಹೋಗಿ ಚರ್ಚೆ ಮಾಡುತ್ತೇನೆ ಎಂದು ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.
ನಗರದ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಸಂಜೆ ಫೋನ್ ಮಾಡಿ ರಾಷ್ಟ್ರೀಯ ಅಧ್ಯಕ್ಷರು ಬನ್ನಿ ಎಂದಿದ್ದಾರೆ. ಹೀಗಾಗಿ ನಾನು ಹೋಗುತ್ತೇನೆ. ಏನು ಆಗುತ್ತದೆ ಎನ್ನುವುದನ್ನು ಈಗ ಚರ್ಚೆ ಮಾಡೋದು ಬೇಡ. ನಾನು ದೆಹಲಿಗೆ ನಂತರ ನೋಡೋಣ ಎಂದರು.
ನನ್ನ ನಿಲುವು ನಾನು ಹೇಳಿದ್ದೇನೆ, ನನಗೆ ಟಿಕೆಟ್ ಸಿಗುವ ಭರವಸೆ ಇದೆ. ನಾನು ಸ್ಪರ್ಧೆ ಮಾಡೇ ಮಾಡ್ತೀನಿ. ನಾನು ದಿಲ್ಲಿ ಮಟ್ಟದಲ್ಲಿ ಯಾರನ್ನೂ ಸಂಪರ್ಕ ಮಾಡಿರಲಿಲ್ಲ. ಇದೀಗ ಅವರೇ ನನ್ನ ಬನ್ನಿ ಎಂದಿದ್ದಾರೆ. ಇಂದು ಹೋಗುತ್ತೇನೆ ಎಂದು ಮೊದಲ ಪಟ್ಟಿಯಲ್ಲಿ ಹೆಸರು ಬರದೆ ಇರೋದಕ್ಕೆ ಶೆಟ್ಟರ್ ಅಸಮಾಧಾನ ವ್ಯಕ್ತಪಡಿಸಿದರು.