Breaking News

ಇದು ನಮ್ಮ ಮನವಿಯಲ್ಲ ಎಚ್ಚರಿಕೆ” ಅಮೂಲ್ ಉತ್ಪನ್ನ ಮಾರಾಟ ಮಾಡಲು ಯತ್ನಿಸಿದರೆ ದಾಳಿ

Spread the love

ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ಅಮೂಲ್ ಉತ್ಪನ್ನ ಮಾರಾಟ ಮಾಡಲು ಯತ್ನಿಸಿದರೆ ದಾಳಿ ಮಾಡಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆ ಎಚ್ಚರಿಕೆ ನೀಡಿದೆ.

ಕರವೇ ಜಿಲ್ಲಾಧ್ಯಕ್ಷ ದೀಪಕ್ ಗುಡಗನಟ್ಟಿ ಈ ಕುರಿತು ಹೇಳಿಕೆ ನೀಡಿದ್ದಾರೆ. “ಆಡಳಿತದಲ್ಲಿರುವ ಸಕಾ೯ರಕ್ಕೆ ನನ್ನದೊಂದು ಎಚ್ಚರಿಕೆ, ಯಾವುದೇ ಕಾರಣಕ್ಕೂ ಅಮೂಲ್ ಪದಾರ್ಥಗಳನ್ನು ಬೆಳಗಾವಿ ಜಿಲ್ಲೆಯಲ್ಲಿ ಮಾರಾಟ ಮಾಡಕೂಡದು. ಯಾವುದೇ ಮೂಲೆಯಲ್ಲಿ ಮಾರಾಟ ಮಾಡಲು ಪ್ರಯತ್ನ ಮಾಡಿದರೆ ಕರವೇ ಬೆಳಗಾವಿ ಜಿಲ್ಲಾ ಘಟಕದಿಂದ ದಾಳಿ ಮಾಡುವುದು ನಿಶ್ಚಿತ. ಈಗಲಾದರೂ ಎಚ್ಛೆತ್ತುಕೊಳ್ಳಿ. ಇದು ನಮ್ಮ ಮನವಿಯಲ್ಲ ಎಚ್ಚರಿಕೆ” ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

About Laxminews 24x7

Check Also

ವಿದೇಶಿ ಪ್ರಜೆಗಳಿಂದ ಮಾದಕ ದ್ರವ್ಯಗಳನ್ನ ಜಪ್ತಿ

Spread the loveಬೆಂಗಳೂರು : ಮಿಂಚಿನ ಕಾರ್ಯಾಚರಣೆ ನಡೆಸಿರುವ ರಾಜಾನುಕುಂಟೆ ಪೊಲೀಸರು ಮೂವರು ವಿದೇಶಿ ಪ್ರಜೆಗಳನ್ನು ಬಂಧಿಸುವ ಮೂಲಕ ಡ್ರಗ್ಸ್ ಜಾಲವನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ