Breaking News
Home / ಜಿಲ್ಲೆ / ನಡಿಗೆಯ ಮೂಲಕ ತಿರುಪತಿ ತಲುಪಿದ ಶಾಸಕಿ ನಿಂಬಾಳ್ಕರ್ ದಂಪತಿ

ನಡಿಗೆಯ ಮೂಲಕ ತಿರುಪತಿ ತಲುಪಿದ ಶಾಸಕಿ ನಿಂಬಾಳ್ಕರ್ ದಂಪತಿ

Spread the love

ಬೆಳಗಾವಿ, ಜ.20-ರಾಜ್ಯದ ಇತಿಹಾಸದಲ್ಲಿ ಹಿರಿಯ ಐಪಿಎಸ್ ಅಧಿಕಾರಿ ಮತ್ತು ಶಾಸಕರಾದ ಅವರ ಪತ್ನಿ 9 ದಿನಗಳ ಪಾದಯಾತ್ರೆ ಮೂಲಕ ತೀರ್ಥಯಾತ್ರೆ ಮುಗಿಸಿ ಗಮನ ಸೆಳೆದಿದ್ದಾರೆ. ಬೆಂಗಳೂರು ನಗರ ಹೆಚ್ಚುವರಿ ಪೊಲೀಸ್ ಆಯುಕ್ತರಾದ (ಆಡಳಿತ) ಹೇಮಂತ ನಿಂಬಾಳ್ಕರ್ ಮತ್ತು ಅವರ ಪತ್ನಿ ಖಾನಾಪುರ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್ ಕಳೆದ ಜ. 11ರಂದು ಬೆಂಗಳೂರಿಂದ ಪಾದಯಾತ್ರೆ ಹೊರಟು ಸುದೀರ್ಘ 263 ಕಿಮೀ ನಡಿಗೆಯ 9 ದಿನಗಳ ನಂತರ ಇಂದು ತಿರುಪತಿ ತಿರುಮಲ ದೇವಸ್ಥಾನಕ್ಕೆ ಬೆಳಿಗ್ಗೆ ತಲುಪಿದರು.

ಪ್ರಾರ್ಥನಾ ಪಾದಯಾತ್ರೆ ಮೂಲಕ ತಿರುಮಲ ಸನ್ನಿಧಿ ತಲುಪಿದ ನಿಂಬಾಳ್ಕರ್ ದಂಪತಿ ಶ್ರೀನಿವಾಸನ ದರ್ಶನಾಶೀರ್ವಾದ ಪಡೆದರು. ತಿರುಪತಿಯಿಂದ ತಿರುಮಲದವರೆಗಿನ 2500 ಮೇಲ್ಪಟ್ಟು ಮೇಲಗಪಂಕ್ತಿ ಹತ್ತುವುದು ಸಹ ಒಂದು ಸವಾಲಿನ ಭಕ್ತಿಯೇ ಸರಿ. ದೈವಿಯಾತ್ರೆ ದೈಹಿಕ ಮತ್ತು ಮಾನಸಿಕ ಆರೋಗ್ಯ ಹೆಚ್ಚಿಸಿದೆ ಎಂದು ಶಾಸಕಿ ಡಾ. ಅಂಜಲಿ ನಿಂಬಾಳ್ಕರ್ ಈ ಸಂದರ್ಭದಲ್ಲಿ ಹೇಳಿದರು.


Spread the love

About Laxminews 24x7

Check Also

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಜೋಶಿ

Spread the love ಹುಬ್ಬಳ್ಳಿ : ಮುಸ್ಲಿಂ ಮೀಸಲಾತಿ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುಳ್ಳು ಹೇಳುತ್ತಿದ್ದಾರೆ. ಸುಳ್ಳು ಹೇಳುವುದರಲ್ಲಿ ಅವರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ