ಕಲಬುರಗಿ: ವೃದ್ದೆಯ ದೇಹವನ್ನು ಶನಿವಾರ ರಾತ್ರಿ ಬೀದಿ ನಾಯಿಗಳು ಎಳೆದಾಡಿ ತಿಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಪಡೆಯಲು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ಗಿರೀಶ್ ಡಿ. ಬದೋಲೆ ಮಂಗಳವಾರ ಮಧ್ಯಾಹ್ನ ಯಾತ್ರಾ ಸ್ಥಳವಾದ ದೇವಲ ಗಾಣಗಾಪುರಕ್ಕೆ ತೆರಳಿ ದತ್ತ ಮಂದಿರದ ಅರ್ಚಕರಿಂದ ಮಾಹಿತಿ ಪಡೆದರು.
ಗಿರೀಶ್ ಡಿ. ಬದೋಲೆ ಮಂಗಳವಾರ ಮಧ್ಯಾಹ್ನ ಯಾತ್ರಾ ಸ್ಥಳವಾದ ದೇವಲ ಗಾಣಗಾಪುರಕ್ಕೆ ತೆರಳಿ ದತ್ತ ಮಂದಿರದ ಅರ್ಚಕರಿಂದ ಮಾಹಿತಿ ಪಡೆದರು.
ಸುಮಾರು 68 ವರ್ಷದ ವೃದ್ದೆಯನ್ನು ಅವರ ಕುಟುಂಬದವರು ಬಿಟ್ಟು ಹೋಗಿದ್ದರು. ಗಾಣಗಾಪುರದಿಂದ ಸಂಗಮಕ್ಕೆ ಹೋಗುವ ಮಾರ್ಗದ ದ್ಯಾಮವ್ವ ಗುಡಿಯ ಹತ್ತಿರ ವೃದ್ದೆಯನ್ನು ಬಿಟ್ಟು ಹೋದ ಜಾಗದಲ್ಲಿ ಕತ್ತಲೆ ಆವರಿಸಿದ್ದರಿಂದ ಮೃತಪಟ್ಟಿದ್ದು ಗೊತ್ತಾಗಿಲ್ಲ. ಹೀಗಾಗಿ ರಾತ್ರಿ ಬೀದಿ ನಾಯಿಗಳು ಮೃತ ದೇಹ ತಿಂದಿರಬಹುದು ಎಂದು ದೇವಸ್ಥಾನದ ಅರ್ಚಕರು ಮಾಹಿತಿ ನೀಡಿದರು.