ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆ ಅವರು
ಶನಿವಾರದಂದು ಜಿಲ್ಲಾ ಪಂಚಾಯತ, ಮಹಿಳಾ ಮತ್ತು ಮಕ್ಕಳ ಕಲ್ಯಾಣ
ಇಲಾಖೆ, ಶಿಶು ಅಭಿವೃಧ್ದಿ ಯೋಜನೆಯಡಿ ಬೆಳಗಾವಿ ನಗರದ ಬಡಕಲ
ಗಲ್ಲಿಯ ಬನಶಂಕರಿ ಕಾರ್ಯಾಲಯದಲ್ಲಿ ಮಾಜಿ ಮುಖ್ಯಮಂತ್ರಿಗಳಾದ
ಬಿ. ಎಸ್. ಯಡಿಯೂರಪ್ಪಾ ರವರ ಮಹತ್ವದ ಯೋಜನೆಯಾದ
ಭಾಗ್ಯಲಕ್ಷಿö್ಮÃ ಬಾಂಡಗಳನ್ನು ಫಲಾನುಭವಿಗಳಿಗೆ ವಿತರಣೆ ಮಾಡಿದರು.
ಹೆಣ್ಣು ಮಕ್ಕಳನ್ನು ಮುಖ್ಯವಾಹಿನಿಗೆ ಕರೆತರಲು, ಹೆಣ್ಣು ಮಕ್ಕಳ
ಭದ್ರತೆ ಹಾಗೂ ಹೆಣ್ಣು ಭ್ರೂಣ ಹತ್ಯೆಯನ್ನು ತಡೆಯುವ ಮುಖ್ಯ
ಉದ್ದೇಶದೊಂದಿಗೆ ಮಾಜಿ ಮುಖ್ಯಮಂತ್ರಿಗಳಾದ ಬಿ. ಎಸ್.
ಯಡಿಯೂರಪ್ಪ ರವರು ಭಾಗ್ಯಲಕ್ಷಿö್ಮÃ ಬಾಂಡ ಯೋಜನೆಯನ್ನು ಜಾರಿಗೆ
ತಂದಿರುವುದರಿAದ ಉತ್ತಮ ಯೋಜನೆಯಾಗಿದೆ.
ಕಳೆದ ಹಲವು ದಿನಗಳಿಂದ ಫಲಾನುಭವಿಗಳಿಗೆ ಭಾಗ್ಯಲಕ್ಷಿö್ಮ
ಬಾಂಡ್ ವಿತರಣೆಗೆ ಚಿಂತನೆ ನಡೆದಿತ್ತು ಅದರಂತೆ ಇಂದು ನಗರದ
ಬಡಕಲ ಗಲ್ಲಿ ಹಾಗೂ ಹನುಮಾನ ನಗರದಲ್ಲಿ ಭಾಗ್ಯಲಕ್ಷಿö್ಮÃ ಭಾಂಡ
ವಿತರಿಸಲಾಗುತ್ತಿದೆ. ನಂತರದಲ್ಲಿ ಬವಣಕುಡಚಿ ಹಾಗೂ ಮಹಾಂತೇಶ
ನಗರದಲ್ಲಿ ಬಾಂಡ್ಗಳ ವಿತರಣೆ ಕಾರ್ಯಕ್ರಮವನ್ನು
ನಡೆಸಲಾಗುವುದು ಎಂದು ತಿಳಿಸಿದರು. ಫಲಾನುಭವಿಗಳಿಗೆ ಯಾವುದೇ
ಗೊಂದಲಗಳು ಇಲ್ಲದೆ ಭಾಗ್ಯಲಕ್ಷಿö್ಮÃ ಬಾಂಡ್ ಗಳ ವಿತರಣೆ
ಮಾಡಬೇಕು.
ಒಟ್ಟು ಬೆಳಗಾವಿ ಉತ್ತರ ಮತಕ್ಷೇತ್ರದಲ್ಲಿ ಒಟ್ಟು ೫೩೦೦
ಭಾಗ್ಯಲಕ್ಷಿ ಭಾಂಡ್ ಗಳನ್ನು ವಿತರಣೆ ಮಾಡಲಾಗುತ್ತಿದೆ. ಹೆಣ್ಣು
ಮಗುವಿಗೆ ೧೮ ವರ್ಷ ತುಂಬಿದ ಬಳಿಕ ಅವರ ಖಾತೆಗೆ ೧ ಲಕ್ಷ ಜಮೆ
ಆಗುತ್ತದೆ, ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಉತ್ತೇಜನ ನೀಡುವ ಸಲುವಾಗಿ ಈ
ಯೊಜನೆಯಾಗಿದೆ ಎಂದು ಮಾಹಿತಿಯನ್ನು ನೀಡಿದರು.
೧೦-೧೨ ನೇ ತರಗತಿಯ ಫಲಿತಾಂಶ ನೋಡಿದಾಗ ೮೦ ಪ್ರತಿಶತ
ವಿದ್ಯಾರ್ಥಿನಿಯರು ೯೦ ಪ್ರತಿಶತ ಫಲಿತಾಂಸವನ್ನು ಮಾಡಿರುತ್ತಾರೆ.
ದೇಶದ ಉನ್ನತ ಹುದ್ದೆಗಳಾದ ಆಯ್.ಎ.ಎಸ್. ಆಯ್.ಪಿ.ಎಸ್
ನಂತಹ ಹುದ್ದೆಗಳಿಗೆ ಇಂದಿನ ವಿದ್ಯಾರ್ಥಿನಿಯರು ಮೇಲುಗೈ
ಸಾಧಿಸುತ್ತಿದ್ದಾರೆ ಎಂದು ಹರ್ಷವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಶಾಸಕರು, ಶಿಶು ಅಭಿವೃಧ್ದಿ
ಯೋಜನಾಧಿಕಾರಿಗಳಾದ ಲಕ್ಷö್ಮಣ ಭಜಂತ್ರಿ, ನಗರ ಸೇವಕರು,
ಫಲಾನುಭವಿಗಳ ಪಾಲಕರು ಪೋಷಕರು, ಕಾರ್ಯಕರ್ತರು ಹಾಗೂ
ಇತರರು ಉಪಸ್ಥಿತರಿದ್ದರು.