Breaking News

ಬಿಎಸ್‌ವೈರಿಂದ ಬೊಮ್ಮಾಯಿವರೆಗೆ; 2023ರ ಚುನಾವಣೆ ಕತೆ ಏನು..?

Spread the love

ಬೆಂಗಳೂರು; ಇದೇ ತಿಂಗಳ ಆರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ರಾಜ್ಯ ಪ್ರವಾಸ ಕೈಗೊ೦ಡಿದ್ದರು. ಬೆಂಗಳೂರಿನಲ್ಲಿ ಹಲವು ಯೋಜನೆಗಳನ್ನು ಉದ್ಘಾಟನೆ ಮಾಡಿದರು. ನಂತರ ಅವರು ಮೈಸೂರು ಅರಮನೆಯ ಆವರಣದಲ್ಲಿ ನಡೆದ ವಿಶ್ವಯೋಗಾ ದಿನಾಚರಣೆಯಲ್ಲಿ ಪಾಲ್ಗೊಂಡರು.

ಮೋದಿಯವರು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ರಾಜ್ಯಪಾಲರು, ಸಿಎಂ ಬೊಮ್ಮಾಯಿ, ಯಡಿಯೂರಪ್ಪ ಸೇರಿ ಹಲವು ನಾಯಕರು ಮೋದಿಯವರನ್ನು ಬರಮಾಡಿಕೊಂಡರು. ಈ ವೇಲೆ ಪ್ರಧಾನಿ ಮೋದಿಯವರು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಅತ್ಯಂತ ಆತ್ಮೀಯತೆಯಿಂದ ಮಾತನಾಡಿಸಿದರು. ಈ ವೇಳೆ ನಡೆದ ಅವರ ನಡುವಿನ ಒಡನಾಟವು ಲಿಂಗಾಯತ ಸಮುದಾಯದ ಬಲಶಾಲಿ ನಾಯಕನನ್ನು ಮೋದಿ ಎಷ್ಟು ಇಷ್ಟಪಡುತ್ತಾರೆ ಎಂಬುದನ್ನು ಸಾಬೀತುಪಡಿಸಿತ್ತು.

ಅಂದಹಾಗೆ ಪ್ರಧಾನಿ ನರೇಂದ್ರ ಮೋದಿಯವರ ಆದೇಶದ ಮೇರೆಗೆ ಬಿಎಸ್‌ವೈ ಅವರು ರಾಜ್ಯದಲ್ಲಿ ಹೊಸ ನಾಯಕತ್ವಕ್ಕೆ ದಾರಿ ಮಾಡಿಕೊಟ್ಟರು. ಬಿಎಸ್‌ವೈ ಅಧಿಕಾರ ತ್ಯಾಗ ಮಾಡಿದರೂ, ಮೋದಿ ಹಾಗೂ ಬಿಎಸ್‌ವೈ ನಡುವಿನ ಪ್ರೀತಿ, ಅಪ್ಯಾಯಮಾನಕ್ಕೆ ಯಾವುದೇ ಧಕ್ಕೆಯಾಗಿಲ್ಲ. ಆದರೆ, ತಳಮಟ್ಟದಲ್ಲಿ ಯಡಿಯೂರಪ್ಪ ಬಗ್ಗೆ ಆಸಕ್ತಿ ಇದ್ದಂತೆ ಕಾಣುತ್ತಿಲ್ಲ. 2023ರ ಚುನಾವಣೆಯಲ್ಲಿ ಬಿಎಸ್‌ವೈ ಅವರನ್ನು ಬಳಸಿಕೊಳ್ಳಲು ಪಕ್ಷ ಹೆಚ್ಚು ಆಸಕ್ತಿ ತೋರುತ್ತಿಲ್ಲ. “ಬಿಎಸ್‌ವೈ ಅವರು ಉನ್ನತ ಹುದ್ದೆ ತ್ಯಜಿಸಿ 9 ತಿಂಗಳಾಗಿದೆ. ಈ ಒಂಬತ್ತು ತಿಂಗಳಲ್ಲಿ ಉಪಚುನಾವಣೆ ಹಾಗೂ ಎಂಎಲ್‌ಸಿ ಚುನಾವಣೆಗಳಲ್ಲಿ ಬಿಎಸ್‌ವೈ ಅವರನ್ನು ಬಳಸಿಕೊಂಡಿಲ್ಲ. ಈ ಚುನಾವಣೆಗಳಲ್ಲಿ ಬಿಜೆಪಿ ಹಿನ್ನಡೆ ಅನುಭವಿಸಿದೆ. ಇನ್ನು ಅಧಿಕಾರ ತ್ಯಾಗ ಮಾಡಿದ ಮೇಲೆ ಬಿಎಸ್‌ವೈ ಅವರು ರಾಜ್ಯ ಪ್ರವಾಸಕ್ಕೆ ಮುಂದಾಗಿದ್ದರು. ಆದರೆ ಅದನ್ನು ಕೂಡಾ ಮಾಡದಂತೆ ನಿಲ್ಲಿಸಲಾಯಿತು. ಹುಬ್ಬಳ್ಳಿ ಮತ್ತು ಮೈಸೂರಿನಲ್ಲಿ ನಡೆದ ಕೆಲವು ಪಕ್ಷದ ಕಾರ್ಯಕ್ರಮಗಳಿಗೂ ಬಿಎಸ್‌ವೈ ಅವರನ್ನು ಆಹ್ವಾನಿಸಿರಲಿಲ್ಲ. ಚುನಾವಣೆಗೆ ಕೇವಲ 9 ತಿಂಗಳು ಮಾತ್ರ ಉಳಿದಿದೆ ಮತ್ತು ಬಿಜೆಪಿ ಇನ್ನೂ ಮಿಷನ್ ಮೋಡ್‌ಗೆ ಬಂದಂತೆ ತೋರುತ್ತಿಲ್ಲ “ಎಂದು ಬಿಜೆಪಿಯ ಆಪ್ತ ಮೂಲಗಳು ತಿಳಿಸಿವೆ.

ಬಿಎಸ್‌ವೈ ಅವರನ್ನು ಬಳಸಿಕೊಳ್ಳುವ ಬಗ್ಗೆ ಬಿಜೆಪಿಗೆ ಸಂದಿಗ್ಧತೆ ಇದೆ. ಯಡಿಯೂರಪ್ಪ ಅವರು ಅಖಾಡಕ್ಕೆ ಬಂದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸ್ಥಾನವನ್ನು ದುರ್ಬಲಗೊಳಿಸುತ್ತದೆ ಎಂಬ ಅನಿಸಿಕೆ ಪಕ್ಷದಲ್ಲಿನ ಕೆಲವರದ್ದು. ಬಿಎಸ್‌ವೈ ರಣರಂಗಕ್ಕೆ ಬಂದರೆ ಪವರ್‌ ಫುಲ್ ಆಗಿ ಬರುತ್ತಾರೆ ಎಂಬುದು ಬಿಜೆಪಿಗೆ ಚೆನ್ನಾಗಿ ಗೊತ್ತಿದೆ. ಅನೇಕ ರಾಜಕೀಯ ಪಂಡಿತರು ಬಿಎಸ್‌ವೈ ಅವರನ್ನು ನಿಷ್ಪಕ್ಷಪಾತ ಶಕ್ತಿ ಎಂದು ನೋಡುತ್ತಿದ್ದಾರೆ. ಹೀಗಿರುವಾಗಲೇ ಬಿಜೆಪಿಯಲ್ಲಿ ಮುಂದಿನ ಲಿಂಗಾಯತ ನಾಯಕ ಯಾರು, ಯಡಿಯೂರಪ್ಪ ಪರಂಪರೆಯನ್ನು ಯಾರು ಮುನ್ನಡೆಸುತ್ತಾರೆ ಎಂಬ ಪ್ರಶ್ನೆ ಮೂಡುತ್ತದೆ. ಬೊಮ್ಮಾಯಿ ಅಥವಾ ಬಿಎಸ್‌ವೈ ಪುತ್ರ ವಿಯೇಂದ್ರ ಇವರಿಬ್ಬರಲ್ಲಿ ಯಾರು..? ಪಕ್ಷ ಏನೋ ಬಸವರಾಜ ಬೊಮ್ಮಾಯಿಯವರನ್ನು ಮುಂದಿಟ್ಟಿದೆ. ಆದ್ರೆ ಅದು ರಾಜವಂಶದ ರಾಜಕೀಯವನ್ನು ನಿರುತ್ಸಾಹಗೊಳಿಸುವುದರಿಂದ ವಿಯೇಂದ್ರ ಅವರನ್ನು ಮೀಸಲು ಬೆಂಚ್‌ಗಳಲ್ಲಿ ಇರಿಸಿದೆ.

“ವಿಜಯೇಂದ್ರರ ವಿಷಯಕ್ಕೆ ಬಂದರೆ ಅವರ ಜನಪ್ರಿಯತೆ ಬಿಜೆಪಿಗೆ ಎರಡು ಅಲುಗಿನ ಕತ್ತಿಯಂತಾಗಿದೆ. ಪಕ್ಷ ವಿಜಯೇಂದ್ರ ಅವರನ್ನು ಪ್ರೋತ್ಸಾಹಿಸಿದರೆ, ಶಾಸಕರ ಸಂಖ್ಯೆಯನ್ನು ಹೆಚ್ಚಿಸುವ ಶಕ್ತಿ ಹೆಚ್ಚಾಗುತ್ತದೆ. ಆದರೆ ಪಕ್ಷ ಅವರನ್ನು ಮೂಲೆಗುಂಪು ಮಾಡಲು ಹೋದರೆ, ಮುಂಬರುವ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿ ಸ್ಥಾನಗಳನ್ನು ಕಳೆದುಕೊಳ್ಳಲು ಕಾರಣವಾಗುತ್ತದೆ. ಬಿಜೆಪಿ ಬಲಗೊಳ್ಳಬೇಕಾದರೆ ಹಳೇ ಮೈಸೂರು ಭಾಗದಲ್ಲಿ ಲಾಭ ಗಳಿಸಬೇಕು. ಇಲ್ಲಿ ವಿಜಯೇಂದ್ರ ಈಗಾಗಲೇ ತಮ್ಮ ತಂತ್ರಗಾರಿಕೆ ಶುರು ಮಾಡಿದ್ದಾರೆ. ಅವರು ಈಗಾಗಲೇ ಸಿದ್ದರಾಮಯ್ಯ ಅಥವಾ ಅವರ ಮಗ ಯತೇಂದ್ರ ವಿರುದ್ಧ ವರುಣಾದಿಂದ ಸ್ಪರ್ಧಿಸುವ ಕುರಿತು ಸಂದೇಶಗಳನ್ನು ರವಾನಿಸಿದ್ದಾರೆ. ಹಳೇ ಮೈಸೂರು ಭಾಗದ ಚಾಮರಾಜನಗರ, ಗುಂಡ್ಲುಪೇಟೆ ಅಥವಾ ಹನೂರು ಕ್ಷೇತ್ರಗಳ ಬಗ್ಗೆಯೂ ವಿಜಯೇಂದ್ರ ಅವರು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಅವರು ಎಲ್ಲೇ ಸ್ಪರ್ಧಿಸಿದರೂ ಅಕ್ಕ ಪಕ್ಕದ ಕ್ಷೇತ್ರಗಳ ಮೇಲೆ ಅದು ಪರಿಣಾಮ ಬೀರಲಿದೆ. ಆದ್ರೆ ಪಕ್ಷ ಈ ಬಗ್ಗೆ ಇನ್ನೂ ಯಾವುದೇ ತೀರ್ಮಾನ ಮಾಡಿಲ್ಲ. ಮೈಸೂರು ಭಾಗದಲ್ಲಿ ವಿಜಯೇಂದ್ರ ಸ್ಪರ್ಧಿಸುವುದಾದರೆ ಅವರು ವರ್ಷ ಮೊದಲೇ ಅಲ್ಲಿ ಪಕ್ಷ ಸಂಘಟನೆಗೆ ಮುಂದಾಗಬೇಕು. ಆದರೆ ಚುನಾವಣೆ ಹತ್ತಿರಕ್ಕೆ ಬರುತ್ತಿದೆ. ಇನ್ನು ವಿಜಯೇಂದ್ರ ಅವರ ಕೊನೆಯ ಆಯ್ಕೆ ಯಡಿಯೂರಪ್ಪ ಅವರು ತವರು ಕ್ಷೇತ್ರ ಶಿಕಾರಿಪುರ. ಈ ಕ್ಷೇತ್ರದಲ್ಲಿ ಒಬ್ಬ ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸಿದರೂ ಗೆದ್ದು ಬರುತ್ತಾನೆ. ಹೀಗಾಗಿ ಇಲ್ಲಿ ವಿಜಯೇಂದ್ರ ಸ್ಪರ್ಧಿಸುವುದರಿಂದ ಪಕ್ಷಕ್ಕೆ ಯಾವುದೇ ಲಾಭವಿಲ್ಲ ಎಂದು ಬಿಎಸ್‌ವೈ ಆಪ್ತ ಮೂಲಗಳು ಹೇಳುತ್ತಿವೆ.

ಆದಾಗ್ಯೂ, ಕರ್ನಾಟಕದಲ್ಲಿ ವಿಶೇಷವಾಗಿ ದಕ್ಷಿಣ ಭಾರತದ ಹೆಬ್ಬಾಗಿಲು ಎಂಬ ಅಂಶವನ್ನು ಗಮನಿಸಿದರೆ ಬಿಜೆಪಿ ವ್ಯಕ್ತಿತ್ವ ಆಧಾರಿತ ಚುನಾವಣಾ ಪ್ರಚಾರವನ್ನು ಕೆಡವುತ್ತದೆಯೇ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಮಿಷನ್ ಸೌತ್‌ನ ಭಾಗವಾಗಿ ಹೈದರಾಬಾದ್‌ನಲ್ಲಿ ನಡೆದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯು ನಾಲ್ವರು ಅಸಾಧಾರಣ ವ್ಯಕ್ತಿಗಳಾದ ಪಿಟಿ ಉಷಾ, ಇಳಯರಾಜ, ಕೆವಿ ವಿಜಯೇಂದ್ರ ಪ್ರಸಾದ್ ಮತ್ತು ಧರ್ಮಸ್ಥಳದ ಡಾ.ವೀರೇಂದ್ರ ಹೆಗ್ಗಡೆ ಅವರನ್ನು‌ ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದ್ದು ಕೇಸರಿ ಪಕ್ಷದಿಂದ ಕೇವಲ ಹರಿಕಾರರಾಗಿದ್ದಾರೆ. ಆದರೆ ಕರ್ನಾಟಕದ ವಿಷಯಕ್ಕೆ ಬಂದರೆ ಮತ್ತೆ ಮತ್ತೆ ಪಕ್ಷದ ಲೆಕ್ಕಾಚಾರಗಳು ತಲೆಕೆಳಗಾಗಿ ಹೋಗಿವೆ. ಕಾಂಗ್ರೆಸ್‌ನಲ್ಲಿ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಮತ್ತು ಜೆಡಿಎಸ್‌ನಲ್ಲಿ ಎಚ್‌ಡಿ ಕುಮಾರಸ್ವಾಮಿ ಮತ್ತು ಮೂವರಿಗೂ ಅವರ ವರ್ಚಸ್ಸು ಮತ್ತು ವ್ಯಕ್ತಿತ್ವವಿದೆ.

2013ರಲ್ಲಿ ಬಿಎಸ್‌ವೈ ಪಕ್ಷದಿಂದ ಹೊರನಡೆದಾಗ ಬಿಜೆಪಿಗೆ ಕಹಿ ಸೋಲುಂಟಾಗಿತ್ತು. ಈಗ ಕಾಲ ಬದಲಾಗಿದೆ. ಬಿಎಸ್‌ವೈ ರಾಜಕೀಯ ನಿವೃತ್ತಿಯ ಹಾದಿಯಲ್ಲಿದ್ದಾರೆ. ಈ ಸಂದರ್ಭದಲ್ಲಿ ಅವರ ವಿಜಯೇಂದ್ರ ಅವರನ್ನು ಬಲಪಡಿಸಲು ಯಡಿಯೂರಪ್ಪ ಮುಂದಾಗಿದ್ದಾರೆ. ಇನ್ನು ವಿಜಯೇಂದ್ರ ಈಗಾಗಲೇ ಕೊಟ್ಟ ಕೆಲಸಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಕಳೆದ ಏಳು ವರ್ಷಗಳಲ್ಲಿ ವಿಜಯೇಂದ್ರ ಅವರು ಹಲವು ಚುನಾವಣೆಗಳನ್ನು ಗೆಲ್ಲಿಸಿಕೊಂಡು ಬಂದಿದ್ದಾರೆ. ಹೀಗಾಗಿ ಪಕ್ಷ ಯಡಿಯೂರಪ್ಪ ಅವರನ್ನು ದೂರ ಇಟ್ಟರೆ ಕಷ್ಟವಾಗುತ್ತದೆ. ಬಿಎಸ್‌ವೈ ಮುಂದಾಳತ್ವ ವಹಿಸದೇ ಇದ್ದಲ್ಲಿ ಪಕ್ಷ 60 ಸ್ಥಾನಕ್ಕೆ ಕುಸಿಯಬಹುದು ಎಂಬ ಆತಂಕ ಬಿಜೆಪಿಯಲ್ಲಿನ ಕೆಲವರದ್ದು. 2018ರಲ್ಲಿ ಮೋದಿ, ಷಾ ಮತ್ತು ಬಿಎಸ್‌ವೈ ಅವರ ಎಲ್ಲಾ ಆಕರ್ಷಣೆ, ಶಕ್ತಿ ಇದ್ದರೂ ಬಹುಮತ ಗಳಿಸಲು ಸಾಧ್ಯವಾಗಲಿಲ್ಲ. ಆಗ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ವರುಣಾದಿಂದ ಸ್ಪರ್ಧಿಸಲು ವಿಜಯೇಂದ್ರ ಟಿಕೆಟ್ ಕೇಳಿದ್ದರು. ಆದರೆ ಪಕ್ಷ ನಿರಾಕರಿಸಿತ್ತು. ಒಂದು ವೇಳೆ ಅವರಿಗೆ ಆಗ ಟಿಕೆಟ್‌ ನೀಡಿದ್ದಿದ್ದರೆ ಅವರೂ ಗೆಲ್ಲುವುದಲ್ಲದೆ, ಬಿಜೆಪಿ ಇನ್ನೂ 10ಕ್ಕೂ ಹೆಚ್ಚು ಸ್ಥಾನಗಳು ಸಿಗುತ್ತಿದ್ದವು. ಸದ್ಯ ಬಿಎಸ್‌ವೈ ಮತ್ತು ಬೊಮ್ಮಾಯಿ ನಡುವೆ ಉತ್ತಮ ಸಾಮರಸ್ಯ ಪಕ್ಷಕ್ಕೆ ಅಗತ್ಯವಾಗಿದೆ ಎಂದು ಬಿಜೆಪಿಯ ಒಳಗಿನವರೇ ಹೇಳುತ್ತಿದ್ದಾರೆ.

ಕೇಸರಿ ಪಕ್ಷಕ್ಕೆ ಮತ್ತೊಂದು ಆತಂಕಕಾರಿ ಅಂಶವೆಂದರೆ ಬೊಮ್ಮಾಯಿ ಸರ್ಕಾರದ ಕಾರ್ಯಕ್ಷಮತೆ ಕಳಪೆಯಾಗಿದೆ. ಶಾಸಕರು ಮತ್ತು ಸಚಿವ ಸಂಪುಟದ ಸಹೋದ್ಯೋಗಿಗಳಲ್ಲಿ ಅಸಮಾಧಾನದ ಮಾತುಗಳು ಕೇಳಿಬರುತ್ತಿವೆ. ಇದರಿಂದ ನಾಯಕತ್ವ ಬದಲಾವಣೆ ಕುರಿತು ಮಾಧ್ಯಮಗಳಲ್ಲಿ ನಿರಂತರವಾಗಿ ವರದಿಯಾಗುತ್ತಿದೆ. “ಇತ್ತೀಚಿನ ಕೆಲವು ವಿದ್ಯುನ್ಮಾನ ಮಾಧ್ಯಮಗಳು ನಡೆಸಿದ ಸಮೀಕ್ಷೆಗಳು ಇದನ್ನು ಸೂಚಿಸಿವೆ. ಹಳೇ ಮೈಸೂರು ಮತ್ತು ಬೆಂಗಳೂರು ಮಹಾನಗರದಲ್ಲಿ ಬಿಜೆಪಿ ತನ್ನ ನೆಲೆಯನ್ನು ಕಳೆದುಕೊಳ್ಳಲಿದೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದ್ದು, 2023ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಬಿಎಸ್‌ವೈ ಸಿಎಂ ಫೇವರಿಟ್ ಆಗಿದ್ದು, ನಂತರದ ಸ್ಥಾನದಲ್ಲಿ ಸಿಎಂ ಬೊಮ್ಮಾಯಿ ಮುಂಚೂಣಿ ನಾಯಕರಾಗಿ ಹೊರಹೊಮ್ಮಿದ್ದಾರೆ. ಕರ್ನಾಟಕದಲ್ಲಿ ಅಧಿಕಾರ ಉಳಿಸಿಕೊಳ್ಳಲು, ಬಿಎಸ್‌ವೈ ಅವರ ಜನಪ್ರಿಯತೆಯನ್ನು ಬಳಸಿಕೊಂಡು ಬಿಜೆಪಿ ಸಾಕಷ್ಟು ಕೆಲಸ ಮಾಡಬೇಕಾಗಿದೆ.


Spread the love

About Laxminews 24x7

Check Also

ರಾಜ್ಯದಲ್ಲಿ ವಿವಿಧ ಬೆಳೆಗಳ ಬಿತ್ತನೆ ನಡೆಯುತ್ತಿದ್ದು, ರಾಸಾಯನಿಕ ಗೊಬ್ಬರದ ಬೇಡಿಕೆ ಹೆಚ್ಚಿದೆ. ಈ ಬಗ್ಗೆ ಕೃಷಿ ಸಚಿವ ಚಲುವರಾಯಸ್ವಾಮಿ ಸ್ಪಷ್ಟನೆ

Spread the loveಮೈಸೂರು: ಪ್ರಸಕ್ತ ಸಾಲಿಗೆ ರಾಸಾಯನಿಕ ಗೊಬ್ಬರದ ಕೊರತೆಯಿಲ್ಲ. ಆದರೆ, ಕೇಂದ್ರ ಸರ್ಕಾರ ಮುಂದಿನ ವರ್ಷದಿಂದ ಯೂರಿಯಾ ಪೂರೈಕೆಯನ್ನು ಶೇ.50ರಷ್ಟು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ