ಮಂಡ್ಯ: ಯಾವುದೇ ವಸ್ತು ರಸ್ತೆಯಲ್ಲಿ ಬಿದ್ದಿದ್ದಾಗ ಎತ್ತಿಕೊಳ್ಳೋದಕ್ಕೆ ಹಿಂದೆ ಮುಂದೆ ನೋಡೋ ಜನರು ಮಾತ್ರ, ರಸ್ತೆ ಪಕ್ಕದಲ್ಲಿ ಬಿದ್ದಿದ್ದ ರಾಶಿ ರಾಶಿ ದ್ರಾಕ್ಷಿಯನ್ನು ನನಗೂ ಬೇಕು.. ನನಗೂ ಬೇಕು ಎಂಬುದಾಗಿ ನಾ ಮುಂದು, ತಾ ಮುಂದು ಎನ್ನುವಂತೆ ಮುಗಿಬಿದ್ದು ಬಾಚಿಕೊಂಡು ಹೋಗಿರೋ ಘಟನೆ, ಮಂಡ್ಯದಲ್ಲಿ ನಡೆದಿದೆ.
ಮಂಡ್ಯ ಜಿಲ್ಲೆಯ ವಿಸಿ ಫಾರ್ಮ್ ಗೇಟ್ ಬಳಿಯ ರಸ್ತೆಯ ಪಕ್ಕದಲ್ಲಿಯೇ ರಾಶಿ ರಾಶಿ ದ್ರಾಕ್ಷಿಯನ್ನು ಯಾರೋ ಸುರಿದು ಹೋಗಿದ್ದರು. ಹೀಗೆ ರಸ್ತೆಯ ಪಕ್ಕದಲ್ಲಿಯೇ ಬಿದ್ದಿದ್ದ ದ್ರಾಕ್ಷಿ ಗೊಂಚಲನ್ನು ಕಂಡಂತ ಜನರು ಮಾತ್ರ, ಹ್ಯಾಂಡ್ ಕವರ್, ಚೀಲ ಸೇರಿದಂತೆ ಹಲವು ರೀತಿಯಲ್ಲಿ ಬಾಚಿಕೊಂಡು ಹೊತ್ತೊಯ್ದಿದ್ದು ಕಂಡು ಬಂದಿತು.
Laxmi News 24×7