Breaking News

ಪುಟ್ಟ ಅಭಿಮಾನಿಯಿಂದ ʼಅಪ್ಪುʼ ನಮನ

Spread the love

ಕರ್ನಾಟಕ ರತ್ನʼ ಡಾ. ಪುನೀತ್​ ರಾಜ್​ಕುಮಾರ್​ ಜನ್ಮದಿನದ ಸಂಭ್ರಮ ಇಡೀ ರಾಜ್ಯಾದ್ಯಂತ ಮನೆ ಮಾಡಿದೆ. ಅಪ್ಪು ಜನ್ಮ ದಿನದ ಪ್ರಯುಕ್ತ ʼಜೇಮ್ಸ್ʼ​​​​ ಸಿನಿಮಾ ಕೂಡ ರಿಲೀಸ್​ ಆಗಿದ್ದು ಪುನೀತ್​ ಅಭಿಮಾನಿಗಳು ಸಿನಿಮಾ ಮಂದಿರಗಳತ್ತ ಧಾವಿಸುತ್ತಿದ್ದಾರೆ.

ದೈಹಿಕವಾಗಿ ಪುನೀತ್​ ನಮ್ಮೊಂದಿಗೆ ಇಲ್ಲದೇ ಇದ್ದರೂ ಸಹ ತಾವು ಬದುಕಿದ ರೀತಿಯ ಮೂಲಕ, ತಮ್ಮ ಪ್ರತಿಭೆಯ ಮೂಲಕ ಇನ್ನೂ ಅಭಿಮಾನಿಗಳ ಹೃದಯದಲ್ಲಿ ಜೀವಂತವಾಗಿದ್ದಾರೆ.

ʼಕರ್ನಾಟಕ ರತ್ನʼನ ಜನ್ಮದಿನದ ಪ್ರಯುಕ್ತ ಇಂದು ಇಡೀ ರಾಜ್ಯವೇ ಸಂಭ್ರಮದಲ್ಲಿದೆ. ವಾಟ್ಸಾಪ್​ ಸ್ಟೇಟಸ್​, ಇನ್​ಸ್ಟಾಗ್ರಾಂ, ಟ್ವಿಟರ್​ ಹೀಗೆ ಎಲ್ಲಾ ಕಡೆಗಳಲ್ಲಿ ಇಂದು ಅಪ್ಪು ಜನ್ಮದಿನಕ್ಕೆ ಶುಭಾಶಯಗಳ ಮಹಾಪೂರವೇ ಹರಿದು ಬರ್ತಿದೆ.

ನೆಚ್ಚಿನ ನಟ ಪುನೀತ್​ ಜನ್ಮ ದಿನದ ಪ್ರಯುಕ್ತ ಪುಟ್ಟ ಬಾಲಕಿಯೊಬ್ಬಳು ವಿಶೇಷವಾಗಿ ಅಪ್ಪುವಿಗೆ ಶುಭಾಶಯ ಕೋರಿದ್ದಾಳೆ. ಬೆಂಗಳೂರಿನ ಗಿರಿನಗರ ನಿವಾಸಿ ಯತೀಶ್​ ಕುಮಾರ್​, ದಿಶಾ ಯತೀಶ್​ ಕುಮಾರ್​​ ದಂಪತಿಯ ಪುತ್ರಿ ಆರೋಹಿ ಚೌಹಾಣ್​ ತನ್ನ ಮುದ್ದು ಕಂಠದಲ್ಲಿ ʼಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದʼ ಎಂಬ ಹಾಡನ್ನು ಹಾಡುವ ಮೂಲಕ ಪುನೀತ್​ಗೆ ವಿಶೇಷ ನಮನ ಸಲ್ಲಿಸಿದ್ದಾಳೆ.


Spread the love

About Laxminews 24x7

Check Also

ಬಾಬಾನಗರದ ನೆಲದಲ್ಲಿ ಹೊಸ ಕೃಷಿ ಕ್ರಾಂತಿ; ರೆಡ್ ಡೈಮಂಡ್ ಪೇರಲ ಬೆಳೆದು ಸಚಿವರಿಗೆ ಉಡುಗೊರೆ ನೀಡಿದ ರೈತ*

Spread the love : ವಿಜಯಪುರ ಜಿಲ್ಲೆಯ ಬಬಲೇಶ್ವರ ಮತಕ್ಷೇತ್ರದಲ್ಲಿ ವ್ಯಾಪ್ತಿಯಲ್ಲಿ ಬರುವ ತಿಕೋಟಾ ತಾಲ್ಲೂಕಿನ ಬಾಬಾನಗರದ ನೆಲದಲ್ಲಿ ಹೊಸ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ