Breaking News

ಭ್ರಷ್ಟಾಚಾರ ವಿರುದ್ಧ ಫೈಟ್ ಮಾಡ್ತೇನೆ: ಜೈಲು ನನ್ನಲ್ಲಿ ಪರಿವರ್ತನೆ ತಂದಿದೆ: ವಕೀಲ ಜಗದೀಶ್

Spread the love

ಬೆಂಗಳೂರು, ಮಾ. 08: “ನನಗಾಗಿ ಕನ್ನಡಿಗರು ಮಿಡಿದಿದ್ದಾರೆ. ನಾನು ಭ್ರಷ್ಟಾಚಾರದ ವಿರುದ್ಧ ಹೋರಾಟ ಮುಂದುವರೆಸುತ್ತೇನೆ. ಸಣ್ಣ ವಿಚಾರಗಳಿಂದ ನನ್ನ ಹೋರಾಟ ಹಳಿ ತಪ್ಪಿತ್ತು. ಪಾಸಿಬಲಿ ಪರಿಸ್ಥಿತಿಯೋ ಗೊತ್ತಿಲ್ಲ. ಅದು ಜೈಲು ಇಲ್ಲ. ಪರಿವರ್ತನೆಯ ಜಾಗ.

ನನ್ನಲ್ಲಿ ಜೈಲು ಪರಿವರ್ತನೆ ತಂದಿದೆ”

ಕೋರ್ಟ್ ಆವರಣದಲ್ಲಿ ನಡೆದ ಗಲಾಟೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ 24 ದಿನ ಜೈಲಿನಲ್ಲಿದ್ದ ವಕೀಲ ಜಗದೀಶ್ ಮಹದೇವ್ ಅವರು ಮಂಗಳವಾರ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಎರಡೂ ಪ್ರಕರಣದಲ್ಲಿ ಜಾಮೀನು ಸಿಕ್ಕ ಬಳಿಕ ಜಗದೀಶ್ ಮಂಗಳವಾರ ಸಂಜೆ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾದರು. ಅವರ ಅಭಿಮಾನಿಗಳು ಜಗದೀಶ್‌ಗೆ ಹೂವಿನ ಹಾರ ಹಾಕಿ ಬರ ಮಾಡಿಕೊಂಡರು.

ಜೈಲಿನಿಂದ ಬಿಡುಗಡೆಯಾದ ಬಳಿಕ ಎಂದಿನಂತೆ ಫೇಸ್ ಬುಕ್ ಲೈವ್‌ನಲ್ಲಿ ಕಾಣಿಸಿಕೊಂಡ ಜಗದೀಶ್ ತನ್ನ ಜೈಲು ಜೀವನ ಹಾಗೂ ಭ್ರಷ್ಟಾಚಾರ ವಿರುದ್ಧದ ಹೋರಾಟ ಕುರಿತ ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಹಳೇ ದಾಟಿಯಲ್ಲಿಯೇ ತನ್ನ ಸ್ನೇಹಿತೆಯ ಫೇಸ್ ಬುಕ್ ಪೇಜ್‌ನಲ್ಲಿ ತನ್ನ ಅಭಿಪ್ರಾಯ ಹಂಚಿಕೊಂಡಿದ್ದಾರೆ.


Spread the love

About Laxminews 24x7

Check Also

ಭೂಮಿ‌ ಇರೋವರೆಗೂ ಬಸವಣ್ಣನವರ ವಿಚಾರಧಾರೆಗಳನ್ನ ಕಾಪಾಡಬೇಕು: ಬಸವ ಸಂಸ್ಕೃತಿ ಅಭಿಯಾನದಲ್ಲಿ ಸತೀಶ ಜಾರಕಿಹೊಳಿ

Spread the loveಬೆಳಗಾವಿ: “ಭೂಮಿ ಇರುವವರೆಗೆ ಬಸವಣ್ಣನವರ ವಿಚಾರಗಳನ್ನು ಕಾಪಾಡುವ ಪ್ರಯತ್ನ ಮಾಡಬೇಕಿದೆ. ದೇಶದಲ್ಲಿ ಮೂಲ ವಿಚಾರ ಮತ್ತು ಇತಿಹಾಸವನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ