ವಿಜಯಪುರ ನಗರದಲ್ಲಿ ಇತ್ತಿಚೆಗೆ ನಡೆಯತ್ತಿದ್ದ ಜಾನುವಾರು ಕಳ್ಳತನ ಪ್ರಕರಣಗಳನ್ನು ವಿಜಯಪುರ ಪೊಲೀಸರು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಒಟ್ಟು 3 ಪ್ರಕರಣಗಳಿಗೆ ಸಂಬಂಧಿಸಿದಂತೆ 6 ಜನ ಕಳ್ಳರನ್ನು ಬಂಧಿಸಿದ್ದಾರೆ. ಅವರಿಂದ ಒಟ್ಟು 7 ಲಕ್ಷ ಮೌಲ್ಯದ 11 ಎಮ್ಮೆ ಮತ್ತು ಕರುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್ ಡಿ ಆನಂದಕುಮಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ವಿಜಯಪುರ ನಗರದ ಜಲನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ 3 ಪ್ರಕರಣಗಳಲ್ಲಿ ಭಾಗಿಯಾಗಿದ್ದ ವಿಜಯಪುರ ನಗರದ ಹೊರವಲಯದ ಬೇಗಳ ತಲಾಬ್ ದೊಡ್ಡಿ ನಿವಾಸಿಗಳಾದ ಶ್ರೀಕಾಂತ ತಂದೆ ಲಕ್ಷ್ಮಣ @ ಅಂಕುಶ ಗೋಪಣೆ, ಮೈಲಾರಿ ತಂದೆ ಲಕ್ಷ್ಮಣ @ ಅಂಕುಶ ಗೋಪಣೆ, ರಾಮು ತಂದೆ ತಾಯಪ್ಪ ಗೋಪಣೆ, ಬೀಮು @ ಭೀಮಾ ತಂತೆ ಅಂಬು @ ಅಂಬಾಜಿ ಗೋಪನೆ, ಹಾಗೂ ಬೀಮಶಿ @ ಭೀಮಸೇನ ತಂದೆ ಶಂಕರ ಗೋಪಣೆ, ಮಾರುತಿ ತಂದೆ ಅಣ್ಣಪ್ಪ್ಪ ಗೋಪಣೆ ಇವರನ್ನು ಬಂಧಿಸಲಾಗಿದೆ ಎಂದು ಎಸ್ ಪಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.