Breaking News

ಪುತ್ರಿ ಜೊತೆ ವಿಷ ಸೇವಿಸಿದ ರೈತಆತ್ನಹತ್ಯೆಗೆ ಮುಂದಾಗಿದ್ದಾರೆ.

Spread the love

ಹಾವೇರಿ: ಕೊರೋನಾ, ಅಕಾಲಿಕ ಮಳೆ, ಅತಿವೃಷ್ಟಿಯಂತಹ ಸಾಲು ಸಾಲು ಸಂಕಷ್ಟಗಳಿಂದ ಚೇತರಿಸಿಕೊಳ್ಳಲಾಗದೆ ಸಾಲ ಮಾಡಿಕೊಂಡು ಕಂಗಾಲಾಗಿದ್ದ ರೈತ ದಂಪತಿ ನೇಣಿಗೆ ಕೊರಳೊಡ್ಡಿದ ಘಟನೆ ಸಿಎಂ ತವರೂರು ಜಿಲ್ಲೆಯ ಆಲದಕಟ್ಟಿ ಗ್ರಾಮದಲ್ಲಿ ನಡೆದಿದೆ.

ಇತ್ತೀಚಿಗೆ ಜಿಲ್ಲೆಯಲ್ಲಿ ಸುರಿದ ಧಾರಕಾರ ಮಳೆಗೆ ಕೈಗೆ ಬಂದ ಬೆಳೆಯೆಲ್ಲವು ಜಲಾವೃತಗೊಂಡು ಹಾಳಾಗಿತ್ತು. ಇನ್ನು ಬಂಗಾರದ ಬೆಳೆ ಬೆಳೆಯಲು ಈ ದಂಪತಿ ಸಾಕಷ್ಟು ಸಾಲ ಸೂಲ ಮಾಡಿದ್ದು ಸಾಲಗಾರರ ಕಾಟ ತಾಳಲಾರದೇ ನೇಣಿಗೆ ಶರಣಾಗಿದ್ದಾರೆ.
ಸಾಲ ತೀರಿಸೋ ವಿಚಾರವಾಗಿ ಕುಟುಂಬದಲ್ಲಿ ಚಿಕ್ಕ ಮನಸ್ತಾಪ ಬಂದಿದೆ ಈ ವೇಳೆ ಪುತ್ರಿ ಜೊತೆ ವಿಷ ಸೇವಿಸಿದ ರೈತ ಮಹಿಳೆ ವಾಣಿಶ್ರೀ(50) ಸಾವನ್ನಪ್ಪಿದ್ದಾರೆ. ಇನ್ನು ಪುತ್ರಿ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿದ್ದಾರೆ. ಇತ್ತ ಪತ್ನಿಯ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಪತಿ ಶಂಕ್ರಪ್ಪ ಅಂಗಡಿ ಕೂಡ ಆತ್ನಹತ್ಯೆಗೆ ಮುಂದಾಗಿದ್ದಾರೆ.


Spread the love

About Laxminews 24x7

Check Also

ದೇವೇಗೌಡರ ಆರೋಗ್ಯ ಚೇತರಿಕೆಗಾಗಿ 108 ತೆಂಗಿನಕಾಯಿ ಒಡೆದು ಹರಕೆ ಹೊತ್ತ ಜೆಡಿಎಸ್ ಕಾರ್ಯಕರ್ತರು

Spread the love ಚಿಕ್ಕಬಳ್ಳಾಪುರ: ಅನಾರೋಗ್ಯದ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ