ಕಾಗವಾಡ ತಾಲೂಕಿನ ಉಗಾರ ಸಕ್ಕರೆ ಕಾರ್ಖಾನೆ ಕಾರ್ಮಿಕರು ತಮ್ಮ ವಿವಿಧ ಬೇಡಿಕೆಗಳಿಗಾಗಿ ಬುಧವಾರ ದಿನಾಂಕ 1 ರಂದು ಮುಷ್ಕರ ಪ್ರಾರಂಭಿಸಿದರು.
ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಹೈಕೋರ್ಟ್ ಕ್ಕೆ ಮುಷ್ಕರ ಬಗ್ಗೆ ಅರ್ಜಿ ಸಲ್ಲಿಸಿದ್ದರು ಇದನ್ನು ವಿಚಾರಿಸಿದ ನ್ಯಾಯಾಧೀಶರು ಮಧ್ಯಾಂತರ ತಡೆಂiÀiಜ್ಞ ನೀಡಿದ್ದಾರೆ.ಸಕ್ಕರೆ ಕಾರ್ಖಾನೆಯ ಕಾರ್ಮಿಕ ಸಂಘಟನೆಯ ಖಜಾಂಚಿಗಳಾದ ಅನಿಲ್ ನಾವಿಲಗೆರ ಮಾಹಿತಿ ನೀಡುವಾಗ ಕಾರ್ಮಿಕರು ತಮ್ಮ ಹಲವಾರು ಬೇಡಿಕೆಗಳಿಗಾಗಿ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಗಳಿಗೆ ತಮ್ಮ ಬೇಡಿಕೆ ಅರ್ಜಿಗಳು ಸಲ್ಲಿಸಿದ್ದೇವೆ. ಅದನ್ನು ವಿಚಾರಣೆ ಮಾಡಿ ನಮಗೆ ನ್ಯಾಯ ನೀಡಲು ಬಹಳಷ್ಟು ತಡವಾಗಿದೆ. ಕಾರಣ ನಮ್ಮ ಬೇಡಿಕೆಗಾಗಿ ಅನಿರ್ದಿಷ್ಟ ಮುಷ್ಕರ ಪ್ರಾರಂಭಿಸಿದ್ದೇವೆ. ಆಡಳಿತಮಂಡಳಿಯವರು ಹೈಕೋಟ್ರ್ಗೆ ಅರ್ಜಿ ಸಲ್ಲಿಸಿದಾಗ ನಮ್ಮ ಮುಷ್ಕರಕ್ಕೆ ತಡೆಂiÀiಜ್ಞ ನೀಡಿದರಿಂದ ನ್ಯಾಯಾಲಯದ ಆದೇಶಕ್ಕೆ ನಾವು ಎಲ್ಲರೂ ತಲೆಬಾಗಿ ಮತ್ತು ಕಾರ್ಖಾನೆ ಕರ್ತವ್ಯಕ್ಕೆ ಹಾಜರಾಗುತ್ತಿದೆವೆ ಎಂದು ಹೇಳಿ ಸಕ್ಕರೆ ಕಾರ್ಖಾನೆ ಶುಕ್ರವಾರ ಬೆಳಗ್ಗೆ ನಾಲ್ಕರಿಂದ ಮೊದಲೇ ಶಿಫ್ಟ್ ಮರು ಪ್ರಾರಂಭಿಸಲಿದೆ ಎಂದು ಸ್ಪಷ್ಪಪಡಿಸಿದರು.