Breaking News

ಕನ್ನಡಿಗ ಶ್ರೀ ಸುಹಾಸ ಲಾಲಿನಕೆರೆ ಯತಿರಾಜ, ಹಾಗೂಅಶೋಕ ಚಂದರಗಿ ಅವರನ್ನು ಸನ್ಮಾನಿಸಿದ: ಸಭಾಪತಿ ಶ್ರೀ ಬಸವರಾಜ ಹೊರಟ್ಟಿ

Spread the love

ರಾಜ್ಯದ ಇತಿಹಾಸದಲ್ಲಿಯೇ ಮೊದಲ
ಬಾರಿಗೆ ರಾಜ್ಯ ವಿಧಾನ ಮಂಡಲದ
ವತಿಯಿಂದ ಆಚರಿಸಲಾದ ಕರ್ನಾಟಕ
ರಾಜ್ಯೋತ್ಸವದ ಸಂದರ್ಭದಲ್ಲಿ ಇಂದು
ಮುಂಜಾನೆ ಬೆಳಗಾವಿ ಜಿಲ್ಲಾ ಕನ್ನಡ
ಸಂಘಟನೆಗಳ ಕ್ರಿಯಾ ಸಮಿತಿ
ಅಧ್ಯಕ್ಷ ಶ್ರೀ ಅಶೋಕ ಚಂದರಗಿ
ಹಾಗೂ ಟೋಕಿಯೊ ಓಲಂಪಿಕ್ಸನ
ಕೋಚ್ ಹಾಗೂ ಉತ್ತರ ಪ್ರದೇಶದ
ನೊಯಿಡಾ ಜಿಲ್ಲಾಧಿಕಾರಿಯಾದ
ಕನ್ನಡಿಗ ಶ್ರೀ ಸುಹಾಸ ಲಾಲಿನಕೆರೆ ಯತಿರಾಜ ಅವರನ್ನು ವಿಧಾನ ಪರಿಷತ್
ಸಭಾಪತಿ ಶ್ರೀ ಬಸವರಾಜ ಹೊರಟ್ಟಿ
ಹಾಗೂ ವಿಧಾನ ಸಭಾಧ್ಯಕ್ಷ
ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು
ಸನ್ಮಾನಿಸಿದರು.ಙ್ಞಾನಪೀಠ
ಪ್ರಶಸ್ತಿ ವಿಜೇತರಾದ ಡಾ.ಚಂದ್ರಶೇಖರ ಕಂಬಾರ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.ಉಭಯ ಸದನಗಳ ಸಭಾಧ್ಯಕ್ಷರು ಹಾಗೂ ಸಭಾಪತಿಗಳ ಜಂಟೀ ಅಧ್ಯಕ್ಷತೆಯಲ್ಲಿ ಈ ಸಮಾರಂಭವನ್ನು ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಏರ್ಪಡಿಸಲಾಗಿತ್ತು.


Spread the love

About Laxminews 24x7

Check Also

ಅನಾರೋಗ್ಯದಿಂದ ತಾಯಮ್ಮ ಹುಲಿ ಸಾವು

Spread the loveಮೈಸೂರು: ಚಾಮರಾಜೇಂದ್ರ ಮೃಗಾಲಯದಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಹೆಣ್ಣು ಹುಲಿ ತಾಯಮ್ಮ ಚಿಕಿತ್ಸೆಗೆ ಸ್ಪಂದಿಸದೆ ಬುಧವಾರ ಮುಂಜಾನೆ 3.45ರ ಸಮಯದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ