ಬೆಂಗಳೂರು: ಹಾನಗಲ್ ಬೈ ಎಲೆಕ್ಷನ್ ಘೋಷಣೆಯಾಗ್ತಿದ್ದಂತೆ ಕಾಂಗ್ರೆಸ್ ಗೊಂದಲದ ಗೂಡಾಗಿತ್ತು. ಇಬ್ಬರು ನಾಯಕರ ನಡುವೆ ಟಿಕೆಟ್ ವಿಚಾರವಾಗಿ ಬಹಿರಂಗ ಸಮರ ಶುರುವಾಗಿತ್ತು. ಇದು ಹಸ್ತ ಪಾಳಯಕ್ಕೂ ತಲೆನೋವಾಗಿ ಪರಿಣಮಿಸಿತ್ತು. ಕೊನೆಗೂ ಕದನಕ್ಕೆ ನಿಂತಿದ್ದವರನ್ನ ಸಮಾಧಾನ ಪಡಿಸಲು ಮುಖಂಡರು ಯಶಸ್ವಿಯಾಗಿದ್ದಾರೆ. ಸಂಧಾನ ಸೂತ್ರ ಜಾರಿಯಾಗಿದೆ.
ಮನೋಹರ್ ತಹಶೀಲ್ದಾರ್. ಶ್ರೀನಿವಾಸ್ ಮಾನೆ. ಈ ಇಬ್ಬರು ನಾಯಕರ ನಡುವೆ ಹಾನಗಲ್ ಕಾಂಗ್ರೆಸ್ಗೆ ಅಭ್ಯರ್ಥಿ ಆಗೋ ನಿಟ್ಟಿನಲ್ಲಿ ಭಿನ್ನಾಭಿಪ್ರಾಯ ಸೃಷ್ಟಿಯಾಗಿತ್ತು. ಬಹಿರಂಗ ಅಸಮಾಧಾನಕ್ಕೂ ಸಾಕ್ಷಿಯಾಗಿತ್ತು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಮೀಟಿಂಗ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ನೇತೃತ್ವದಲ್ಲಿ ಸಭೆ ಜೊತೆಗೆ ಇವತ್ತು ಸಿದ್ದರಾಮಯ್ಯ ನೇತೃತ್ವದಲ್ಲಿ ಸಂಧಾನ ಸಭೆ ನಡೆಯಲಿದೆ. ಹೀಗೆ ಸಾಲು ಸಾಲು ಮೀಟಿಂಗ್, ಮಾತುಕತೆ ಬಳಿಕ ಸಂಧಾನ ಸೂತ್ರ ಸಿದ್ಧವಾಗಿದೆ. ರಾಜಿಗೆ ಇಬ್ಬರು ನಾಯಕರು ಒಪ್ಪಿದ್ದಾರೆ ಅನ್ನೋ ಮಾಹಿತಿ ನ್ಯೂಸ್ಫಸ್ಟ್ಗೆ ಲಭ್ಯವಾಗಿದೆ.
ಸಂಧಾನ ಸಕ್ಸಸ್
ಮಾನೆ ಅಭ್ಯರ್ಥಿ ಆಗೋದನ್ನ ಒಪ್ಪೋದಿಲ್ಲ ಅಂತಿದ್ದ ತಹಶೀಲ್ದಾರ್
ಸಭೆಯ ಬಳಿಕ ಮನೋಹರ್ ತಹಶೀಲ್ದಾರ್ ಕಂಪ್ಲೀಟ್ ಯೂಟರ್ನ್
ಯಾವುದೇ ಕಾರಣಕ್ಕೂ ಶ್ರೀನಿವಾಸ್ ಮಾನೆ ಅಭ್ಯರ್ಥಿ ಆಗೋದನ್ನ ಒಪ್ಪೋದಿಲ್ಲ ಅಂತಿದ್ದ ಮನೋಹರ್ ತಹಶೀಲ್ದಾರ್ ಇದೀಗ ಕಂಪ್ಲೀಟ್ ಯೂಟರ್ನ್ ಹೊಡೆದಿದ್ದಾರೆ. ಸಂಧಾನ ಸಭೆಯಲ್ಲಿನ ಹಿರಿಯ ನಾಯಕರ ಮಾತುಗಳಿಗೆ ಅಸ್ತು ಎಂದಿರೋ ತಹಶೀಲ್ದಾರ್, ಶ್ರೀನಿವಾಸ್ ಮಾನೆ ಅಭ್ಯರ್ಥಿ ಆದರೂ ಕೆಲಸ ಮಾಡುವೆ ಎಂದಿದ್ದಾರೆ. ಒಬ್ಬರಿಗೆ ಹಾನಗಲ್ ಟಿಕೆಟ್, ಇನ್ನೊಬ್ಬರಿಗೆ ಪರ್ಯಾಯ ಸ್ಥಾನಮಾನ ಎಂದಿದ್ದಾರೆ. ಇದನ್ನು ಒಪ್ಪಿದ್ದೇನೆ. ಒಗ್ಗಟ್ಟಿನ ಸಂದೇಶಕ್ಕೆ ಸಮ್ಮತಿ ಸೂಚಿಸಿದ್ದೇನೆ ಅಂತಾ ಮನೋಹರ್ ಹೇಳಿದ್ದಾರೆ. ಈ ಮೂಲಕ ಮನೋಹರ್ ತಹಶೀಲ್ದಾರ್ ಮನವೊಲಿಕೆ ಯಶಸ್ವಿಯಾದಂತಾಗಿದೆ. ಇನ್ನು, ಈ ಬಗ್ಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಒಗ್ಗಟ್ಟಿನಲ್ಲಿ ಚುನಾವಣೆ ಎದುರಿಸಲಾಗುತ್ತೆ ಎಂದಿದ್ದಾರೆ.

ಒಟ್ಟಿನಲ್ಲಿ ಹಾನಗಲ್ ಚುನಾವಣೆ ಕಾಂಗ್ರೆಸ್ನೊಳಗೆ ಹಣಾಹಣಿ ಸೃಷ್ಟಿಸೋ ಆತಂಕ ದೂರವಾಗಿದೆ. ರಾಜ್ಯ ಮುಖಂಡರ ಸಂಧಾನ ಸೂತ್ರ ವರ್ಕ್ ಆಗಿದೆ. ಅಸಮಾಧಾನಗೊಂಡವರು. ಒಗ್ಗಟ್ಟಿನ ಮಾತಾಡುತ್ತಿದ್ದಾರೆ. ಇದು ಕಾಂಗ್ರೆಸ್ನ ಗೆಲವಿಗೆ ಕಾರಣವಾಗುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.