Breaking News

ಧಾರವಾಡ ರೈತರ ಜಮೀನಿಗೆ​ ಭೇಟಿ, ಹೊಲದಲ್ಲಿ ಕುಳಿತು ಸಮಸ್ಯೆ ಆಲಿಸಿದ ಡಿಕೆ ಶಿವಕುಮಾರ್​

Spread the love

ಧಾರವಾಡ: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ಧಾರವಾಡ ತಾಲೂಕಿನ ರಾಯಪುರ ಗ್ರಾಮದ ರೈತರ ಜಮೀನಿಗೆ ಭೇಟಿ ನೀಡಿದ್ದಾರೆ. ಈ ವೇಳೆ ಅವರು ರೈತರ ಸದ್ಯದ ಸ್ಥಿತಿಯ ಬಗ್ಗೆ ಚರ್ಚೆ ನಡೆಸಿದ್ರು. ಅನ್ನದಾತರ ಜೊತೆ ಹೊಲದಲ್ಲಿಯೇ ಕುಳಿತು ಅವರ ಸಮಸ್ಯೆಗಳನ್ನ ಆಲಿಸಿದರು.

ಸದ್ಯ ಬಿತ್ತನೆ ಕಾರ್ಯ ಆರಂಭವಾಗಿದೆ. ಆದ್ರೆ ನಮಗೆ ಬೇಕಾದ ಬೀಜ ಸಿಗುತ್ತಿಲ್ಲ ಎಂದು ರೈತರು ಹೇಳಿದರು. 5 ಎಕರೆ ಮೇಲೆ ಎಷ್ಟೇ ಜಮೀನು ಇದ್ದರೂ ಸಹ ಸರ್ಕಾರ ಕೇವಲ 5 ಪ್ಯಾಕೆಟ್ ಬೀಜಗಳನ್ನ ಕೊಡುತ್ತಿದೆ. ಗೊಬ್ಬರದ ಸಮಸ್ಯೆ ಜೊತೆ ಬೀಜದ ಸಮಸ್ಯೆ ಹೆಚ್ಚಾಗಿದೆ. ಮೆಣಸಿನಕಾಯಿ, ಟೊಮೇಟೊ ಬೆಳೆದ ರೈತರಿಗೆ ಲಾಭ ಇಲ್ಲ. ಬೆಳೆದಿದ್ದ ಬೆಳೆಯನ್ನ ಎಪಿಎಂಸಿ ಯಿಂದ ಮತ್ತೆ ತರುವ ಸ್ಥಿತಿ ಎದುರಾಗಿದೆ ಎಂದು ರೈತರು ವಿವರಿಸಿದರು.

ನಷ್ಟವಾದ ರೈತನಿಗೆ ಹೇಗೆ ಆನ್​​ಲೈನ್​ನಲ್ಲಿ ಅರ್ಜಿ ಹಾಕಬೇಕು ಅಂತ ಗೊತ್ತಿಲ್ಲ ಎಂದು ರೈತರು ಹೇಳಿದಾಗ, ನನಗೆ ಗೊತ್ತಿಲ್ಲ ಹೇಗೆ ಹಾಕಬೇಕು ಅಂತ ಎಂದು ಡಿಕೆ ಶಿವಕುಮಾರ್ ಹೇಳಿದ್ರು. ಕ್ಯಾರೆಟ್ ಕೆ.ಜಿಗೆ 5 ರೂಪಾಯಿಯಂತೆ ಹೋಗ್ತಿಲ್ಲ ಸರ್. ಮೊದಲು ಕೆ.ಜಿಗೆ 40 ರೂಪಾಯಿ ಇತ್ತು ಎಂದು ರೈತರು ಹೇಳಿದ್ರು. ಮೊನ್ನೆ ಆಗಿರುವ ಪ್ಯಾಕೇಜ್ ನಿಮಗೆ ಏನಾದ್ರು ಬಂದಿದ್ಯಾ ಎಂದು ರೌತರನ್ನ ಶಿವಕುಮಾರ್​ ಕೇಳಿದಾಗ, ಈವರೆಗೂ ಯಾವುದೇ ಹಣ ಸರ್ಕಾರದಿಂದ ಸಿಕ್ಕಿಲ್ಲ ಎಂದು ರೈತರು ಹೇಳಿದ್ರು.

 

Spread the love

About Laxminews 24x7

Check Also

ಶಾಸಕ ಕೆ.ಸಿ.ವೀರೇಂದ್ರ ಮತ್ತೆ 6 ದಿನ ಇ.ಡಿ ಕಸ್ಟಡಿಗೆ

Spread the love ಬೆಂಗಳೂರು: ಚಿತ್ರದುರ್ಗದ ಕಾಂಗ್ರೆಸ್ ಶಾಸಕ ಕೆ.ಸಿ.ವೀರೇಂದ್ರ (ಪಪ್ಪಿ) ಅವರ ಐದು ದಿನಗಳ ಪೊಲೀಸ್ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ