Breaking News

ತಂದೆ-ತಾಯಿಯನ್ನು ಭೇಟಿ ಮಾಡಲ್ಲ ಎಂದ ಸಿಡಿ ಯುವತಿ!

Spread the love

 ಸಿಡಿ ಪ್ರಕರಣದಲ್ಲಿ ಹೆತ್ತವರ ಬೇಡಿಕೆಯನ್ನು ತಿರಸ್ಕರಿಸಿರುವ ಸಿಡಿ ಯುವತಿ, ಹೆತ್ತವರನ್ನು ಸದ್ಯಕ್ಕೆ ಭೇಟಿ ಮಾಡಲ್ಲ ಎಂದು ಹೇಳಿದ್ದಾಳೆ.

ಬೆಂಗಳೂರಿನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಯುವತಿ ಪರ ವಕೀಲ ಜಗದೀಶ್, ಇವತ್ತು ಕೋರ್ಟ್ ಗೆ ರಜೆ ಇದೆ. ಆದ್ದರಿಂದ ತಂದೆ-ತಾಯಿಯನ್ನು ಭೇಟಿ ಮಾಡುವುದಾದರೆ ಮಾಡಿ ಎಂದು ಸಲಹೆ ನೀಡಿದೆ. ಆದರೆ ಪ್ರಸ್ತುತ ಸನ್ನಿವೇಶದಲ್ಲಿ ಭೇಟಿ ಮಾಡಲ್ಲ ಅಣ್ಣ ಎಂದು ಹೇಳಿದ್ದಾರೆ ಎಂದರು.

ಇವತ್ತು ಕೊರ್ಟ್ ಬೇರೆ ರಜೆ ಇದೆ. ಎಸ್ ಐಟಿಯವರು ಇವತ್ತು ಯುವತಿಗೆ ಬರಬೇಕೆಂದು ನೋಟಿಸ್ ಕೊಟ್ಟಿಲ್ಲ. ಮಹಿಳಾ ಪೊಲೀಸರು ಯುವತಿಗೆ ಭದ್ರತೆ ನೀಡಿದ್ದಾರೆ. ಯುವತಿ ತಂದೆ ತಾಯಿಯನ್ನ ಭೇಟಿ ಮಾಡೊದಾದ್ರೆ ಮಾಡಿ ಅಂತ ಸಲಹೆ ನೀಡಿದೆ. ಆದರೆ ಆಕೆಯ ವರ್ಷನ್ ಬೇರೆ ಇದೆ. ಜನ ಸಪೊರ್ಟ್ ಮಾಡ್ತಿದ್ದಾರೆ. ಎಫ್.ಐ.ಆರ್ ಆಗಿದೆ, ಈಗ ಸಾಕಷ್ಟು ಜವಾಬ್ದಾರಿ ಇದೆ. ಸದ್ಯಕ್ಕೆ ತಂದೆ ತಾಯಿಯನ್ನ ಭೇಟಿ ಮಾಡೋದು ಬೇಡ ಅಂತ ಹೇಳಿದ್ದಾರೆ ಎಂದು ಜಗದೀಶ್ ವಿವರಿಸಿದರು.


Spread the love

About Laxminews 24x7

Check Also

ಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ!

Spread the loveಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ! …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ