Breaking News

ಫೋನೂ ಇಲ್ಲ, ಮೆಸೇಜ್​ ಇಲ್ಲ! ಎಲ್ಲಿರುವೆ?: S.I.T…

Spread the love

ಬೆಂಗಳೂರು: ಫೋನೂ ಇಲ್ಲ; ಮೆಸೇಜ್​ ಇಲ್ಲ! ಎಲ್ಲಿರುವೆ? ಎಂಬಂತಾಗಿದೆ ರಾಜ್ಯ ಪೊಲೀಸರ ಅಸಹಾಯಕತೆ. ಏಕೆಂದರೆ ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿರುವ ಮಾಜಿ ಸಚಿವರೊಬ್ಬರ ಲೈಂಗಿಕ ಸಿಡಿ ಪ್ರಕರಣದಲ್ಲಿ ಪ್ರಧಾನ ಪಾತ್ರಧಾರಿ ಎನ್ನಲಾಗಿರುವ ಯುವತಿಯ ಬೆನ್ನು ಹತ್ತಿದ ಎಸ್​ಐಟಿ ಹೈರಾಣಗೊಂಡಿದೆ.. ನೋಟಿಸ್ ಮೇಲೆ ನೋಟಿಸ್ ನೀಡುತ್ತಲೇ ಆ ಕಡೆಯಿಂದ ಮಾತ್ರ ಫೋನೂ ಇಲ್ಲ; ಮೆಸೇಜ್​ ಇಲ್ಲ- ಈ ಮೈಲ್​ ಸಹ ಇಲ್ಲ! ಹಾಗಾಗಿ ಎಸ್​ಐಟಿ ಪೊಲೀಸರು ಎಲ್ಲಿರುವೆ? ಎಂದು ಕುಂತ್ರೂ ನಿಂತ್ರೂ ಆ ಯುವತಿಯನ್ನೇ ಧ್ಯಾನಿಸುತ್ತಿದ್ದಾರೆ.

ಹೌದು ರಮೇಶ್​ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಸಿಡಿಯಲ್ಲಿದ್ದ ಯುವತಿಗೆ ಎಸ್​ಐಟಿ ಪೊಲೀಸರು ಮತ್ತೊಂದು ನೋಟಿಸ್​ ಜಾರಿ ಮಾಡಿದ್ದಾರೆ. ಬಹುಶಃ ಈಗಾಗಲೇ ಮೂರ್ನಾಲ್ಕು ಬಾರಿ ನೋಟಿಸ್ ಜಾರಿ ಮಾಡಿರಬಹುದು. ಶೀಘ್ರವಾಗಿ ಪೊಲೀಸರ ಮುಂದೆ ಹಾಜರಾಗಲು ಯುವತಿಯ ವಾಟ್ಸಾಪ್​, ಇ-ಮೇಲ್, ಮನೆಗೆ ನೋಟಿಸ್ ಅಂಟಿಸಿ ಸರಕಾರಿ ಸೂಚನೆ ನೀಡಲಾಗಿದೆ. ಆದರೆ ಆ ಕಡೆಯಿಂದ ಬಿಲ್ಕುಲ್ ಪ್ರತಿಕ್ರಿಯೆ ಇಲ್ಲವಾಗಿದೆ.

ಯುವತಿ ಸೇರಿದಂತೆ ಪ್ರಕರಣದ ಸಂಬಂಧ ನಾಪತ್ತೆ ಆಗಿರುವ ಇನ್ನೂ ಮೂವರಿಗೂ ನೋಟಿಸ್ ನೀಡಲಾಗಿದೆ. ಸಿಡಿಯಲ್ಲಿದ್ದ ಯುವತಿ ಅಲ್ಲದೆ ಕಿಂಗ್​ ಪಿನ್​ ಎನ್ನಲಾದ ಮಾಜಿ ಪತ್ರಕರ್ತ ನರೇಶ್ ಮತ್ತು ಶ್ರವಣ್​ಗೆ ನೋಟಿಸ್ ಜಾರಿ ಮಾಡಲಾಗಿದೆ. ಅವರಿಂದಲೂ ಉತ್ತರ ಇಲ್ಲವಾಗಿದೆ.


Spread the love

About Laxminews 24x7

Check Also

ಯರಗಟ್ಟಿ ತಾಲ್ಲೂಕಿನಿಂದ ಅವಿರೋಧವಾಗಿ ಆಯ್ಕೆ ನಿಮ್ಮ ನಂಬಿಕೆ ಉಳಿಸಿಕೊಂಡು, ತಾಲ್ಲೂಕಿನ ರೈತರು ಮತ್ತು ಸಹಕಾರಿ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ

Spread the loveಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ (BDCC) ಬ್ಯಾಂಕ್‌ನ ನಿರ್ದೇಶಕರ ಸ್ಥಾನಕ್ಕೆ ಯರಗಟ್ಟಿ ತಾಲ್ಲೂಕಿನಿಂದ ಅವಿರೋಧವಾಗಿ ಆಯ್ಕೆಯಾಗಲು ಕಾರಣರಾದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ