ಕಬ್ಬೂರ – ತನ್ನ ಗೆಳೆಯವರೆಲ್ಲಾ ಮದುವೆ ಮಾಡಿಕೊಂಡರೂ ತನಗೆ ಹೆಣ್ಣು ಸಿಗಲಿಲ್ಲಾ ಎಂದು ಮನನೊಂದು ವ್ಯಕ್ತಿಯೋರ್ವ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡವ ಮಹೇಶ ಕೆಂಪಣ್ಣ ಮುತಾಲಿಕ(೨೪). ತನ್ನ ವಾರಿಗೆಯವರು ಮದುವೆ ಮಾಡಿಕೊಂಡರು ತನಗೆ ಮದುವೆ ಆಗಲಿಲ್ಲಾ ಎಂದು ಮನನೊಂದು ಮನೆಯಲ್ಲಿ ಯಾರಿಗೂ ಹೇಳದೆ ತಮ್ಮ ಜಮೀನಿನಲ್ಲಿ ಹೋಗಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಚಿಕ್ಕೋಡಿ ಪೋಲಿಸ್ ಠಾಣೆಯಲ್ಲಿ ಪ್ರಖರಣ ದಾಖಲಿಸಿರುತ್ತಾರೆ. ಘಟನಾ ಸ್ಥಳಕ್ಕೆ ಚಿಕ್ಕೋಡಿಯ ಪಿಎಸ್ಐ ಅಶೋಕ ಕುಳ್ಳೂರು ಭೇಟಿ ನೀಡಿ ಪ್ರಖರಣ ದಾಖಲಿಸಿಕೊಂಡಿರುತ್ತಾರೆ.
Laxmi News 24×7