ಜೈಪುರ: ಹಿಟ್ಟಿನ ಗಿರಣಿಯ ಯಂತ್ರದೊಳಗೆ ಸಿಲುಕಿ ಬಾಲಕ ಸಾವನ್ನಪ್ಪಿರುವ ಭಯಾನಕ ಘಟನೆ ಜೈಪುರದ ನಾಹರಗಢ ರಸ್ತೆಯ ಖಂಡೇಲಾವಾಲ ಫ್ಲೋರ್ ಮಿಲ್ ನಲ್ಲಿ ನಡೆದಿದೆ.
16 ವರ್ಷದ ಅಮಿತ್ ಸಾವನ್ನಪ್ಪಿದ ಬಾಲಕ. ಅಮಿತ್ ಗಿರಣಿಯಲ್ಲಿ ಗೋಧಿಯನ್ನ ಯಂತ್ರಕ್ಕೆ ಹಾಕಿ ಹಿಟ್ಟು ಮಾಡುವ ಕೆಲಸ ಮಾಡುತ್ತಿದ್ದನು. ಈ ವೇಳೆ ಮೇಲಿನಿಂದ ಗೋಧಿ ಚೀಲ ಎಳೆಯುವಾಗ ಆಯತಪ್ಪಿ ಗಿರಣಿಯ ಯಂತ್ರದ ಮಧ್ಯೆ ಬಿದ್ದಿದ್ದಾನೆ. ಕೆಲವೇ ಕ್ಷಣಗಳಲ್ಲಿ ಅಮಿತ್ ದೇಹ ತುಂಡು ತುಂಡಾಗಿದೆ.
ಅಮಿತ್ ದೇಹಕ್ಕೆ ಯಂತ್ರಕ್ಕೆ ಸಿಲುಕಿದ ಪರಿಣಾಮ ಕೈ, ಕಾಲು, ದೇಹ, ತಲೆ ಮತ್ತು ಕಾಲುಗಳ ಪ್ರತ್ಯೇಕಗೊಂಡಿದ್ದವು. ಕೈಗಳು ಕಟ್ ಆಗಿ ಹೊರ ಬಂದಿದ್ರೆ ಅರ್ಧ ದೇಹ ಯಂತ್ರದಲ್ಲಿಯೇ ಸಿಲುಕಿಕೊಂಡಿತ್ತು. ಇಡೀ ಗಿರಣಿ ಅಮಿತ್ ರಕ್ತದಿಂದ ಕೆಂಪು ಕೆಂಪು ಆಗಿತ್ತು. ಕೊನೆಗೆ ಗ್ಯಾಸ್ ಕಟರ್ ಬಳಸಿ ಯಂತ್ರಗಳನ್ನ ತುಂಡರಿಸಿ ಅಮಿತ್ ದೇಹವನ್ನ ಹೊರ ತೆಗೆಯಲಾಗಿದೆ.
Check Also
ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ ಕೇಸು: ಇಂದು ಹಾಸನದಲ್ಲಿ SIT ಸ್ಥಳ ಮಹಜರು, ಮೇ.4ಕ್ಕೆ ರೇವಣ್ಣ ವಿಚಾರಣೆ
Spread the loveಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ದಾಖಲಾಗಿರುವ ಲೈಂಗಿಕ ಹಗರಣ ಕೇಸಿಗೆ ಸಂಬಂಧಪಟ್ಟಂತೆ ತನಿಖೆ ನಡೆಸುತ್ತಿರುವ ಎಸ್ …