ಕೋಲಾರ: ಗ್ರಾಮ ಪಂಚಾಯಿತಿ ಚುನಾವಣೆಗೆ ಮತದಾನ ನಡೆದು ಫಲಿತಾಂಶ ಪ್ರಕಟವಾದ ಅದರ ಎಫೆಕ್ಟ್ ಈ ಊರಿನವರಿಗೆ ಸಂಕಷ್ಟ ತಂದಿದೆ.
ಊರಿನ ಜನ ತನಗೆ ಮತ ಹಾಕಿಲ್ಲವೆಂದು ಕೋಪಗೊಂಡ ಪರಾಜಿತ ಅರ್ಥಿಯೊಬ್ಬ ರಸ್ತೆ ಬಂದ್ ಮಾಡಿ ದರ್ಪ ಮೆರೆದಿದ್ದಾನೆ. ಇಂತಹ ಘಟನೆ ಮಾಲೂರು ತಾಲೂಕಿನ ಅಗ್ರಹಾರ ಹೊಸಹಳ್ಳಿ ಗ್ರಾಮದಲ್ಲಿ ನಡೆದಿದ್ದು, ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ
ಚುನಾವಣೆಗೆ ಸ್ಪರ್ಧಿಸಿದ್ದ ಗಿರಿಗೌಡ ಎಂಬಾತ ಸೋಲು ಕಂಡಿದ್ದಾರೆ. ಫಲಿತಾಂಶ ಪ್ರಕಟಗೊಂಡ ಬೆನ್ನಲ್ಲೇ ಅಂದರೆ ನಿನ್ನೆ (ಬುಧವಾರ) ರಾತ್ರಿಯೇ ಅಗ್ರಹಾರ ಹೊಸಹಳ್ಳಿ ಗ್ರಾಮದಿಂದ ಹುಣಿಸೆದಿನ್ನೆಗೆ ಹೋಗುವ ರಸ್ತೆಯಲ್ಲಿ ಜೆಸಿಬಿ ಮೂಲಕ ಗುಂಡಿ ತೆಗೆದು ಗ್ರಾಮಸ್ಥರಿಗೆ ತೊಂದರೆ ಮಾಡಲಾಗಿದೆ.
Laxmi News 24×7