ಬೆಂಗಳೂರು ಡಿ.29 : ದೇಶದ ಕಾಣಿಸಿಕೊಂಡಿರುವ ರೂಪಾಂತರ ವೋರೋನಾ ವೈರಸ್ ನಿಯಂತ್ರಿಸಲು ಆಯಾ ರಾಜ್ಯ ಸರ್ಕಾರಗಳು ಕಠಿಣ ನಿಯಮಗಳನ್ನು ಕೈಗೊಳ್ಳಬಹುದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಕೇಂದ್ರ ಆರೋಗ್ಯ ಇಲಾಖೆಯ ಕಾರ್ಯದರ್ಶಿ ರಾಜೇಶ್ ಭೂಷಣ್ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕಳೆದ ಹಲವು ದಿನಗಳ ಹಿಂದೆ ದಿಂದ ಭಾರತಕ್ಕೆ ಬ್ರಿಟನ್ ನಿಂದ ಮೂವತ್ತು ಸಾವಿರ ಜನ ಬಂದಿದ್ದಾರೆ. ಅವರಿಗೆ ಕೋವಿಂದ್ ಪರೀಕ್ಷೆ ನಡೆಸಲಾಗಿದೆ ಕೆಲವರಲ್ಲಿ ಸೋಗು ಕಂಡಿದ್ದು ಅವರನ್ನು ತಕ್ಷಣ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.
ಕೆಲವರು ಇನ್ನೂ ಪತ್ತೆಯಾಗಬೇಕಾಗಿದ್ದು ಅದರ ಬಗ್ಗೆ ಆಯಾ ರಾಜ್ಯ ಸರ್ಕಾರಗಳು ಕ್ರಮ ಕೈಗೊಂಡಿದೆ ಎಂದು ಅವರು ತಿಳಿಸಿದ್ದಾರೆ. ಪ್ರಸ್ತುತ ಈ ಸೋಂಕನ್ನು ತಡೆಯುವ ನಿಟ್ಟಿನಲ್ಲಿ ಹಲವು ಮುನ್ನೆಚ್ಚರಿಕೆ ಕ್ರಮಗಳ ಜತೆಗೆ ಕಠಿಣ ನಿರ್ಧಾರ ಕೈಗೊಳ್ಳಬೇಕಾಗಿದೆ ಇದಕ್ಕಾಗಿ ಆಯಾ ರಾಜ್ಯ ಸರ್ಕಾರಗಳು ನೈಟ್ ಕರ್ಫ್ಯೂ ಅಂತಹ ನಿಯಮಗಳನ್ನು ಜಾರಿಗೆ ತರುವ ಅಧಿಕಾರ ನೀಡಲಾಗಿದೆ ಎಂದು ಹೇಳಿದರು.
ಮಧ್ಯವಯಸ್ಕರಲ್ಲಿ ಅಂದರೆ 30 ರಿಂದ 44 ವಯೋಮಾನದವರಿಗೆ ಕೊರೋನಾ ತಗಲುವುದು ಹೆಚ್ಚಾಗಿದೆ 18 ವರ್ಷದ ಒಳಗಿನ ಮಕ್ಕಳಲ್ಲಿ ಶೇಕಡಾ18 ರಷ್ಟಿದ್ದರೆ ಅರುವತ್ತು 60 ವರ್ಷ ಮೇಲ್ಪಟ್ಟವರಿಗೆ ಅದು ಇಪ್ಪತ್ತ 36 ಇರಬಹುದು ಎಂದು ಅವರು ತಿಳಿಸಿದ್ದಾರೆ
ದೇಶದಲ್ಲಿ ಈಗ ಕೊರೋನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗುತ್ತಿದೆ ವರದಿಯ ಪ್ರಕಾರ ಪುರುಷರಿಗೆ 63 % ಇದ್ದರೆ ಮಹಿಳೆಯರ ಪ್ರಮಾಣ 33%ಎಂದು ತಿಳಿದುಬಂದಿದೆ