Breaking News
Home / ಜಿಲ್ಲೆ / ಬೆಂಗಳೂರು / ರಾಜ್ಯದಲ್ಲಿ ಅಕ್ಟೋಬರ್ 27 ರವರೆಗೆ ಭಾರೀ ಮಳೆ,ಬೆಂಗಳೂರಿನಲ್ಲಿ ಇನ್ನೆರಡು ದಿನ ಮಳೆ ಆರ್ಭಟ ಮುಂದುವರಿಯಲಿದೆ

ರಾಜ್ಯದಲ್ಲಿ ಅಕ್ಟೋಬರ್ 27 ರವರೆಗೆ ಭಾರೀ ಮಳೆ,ಬೆಂಗಳೂರಿನಲ್ಲಿ ಇನ್ನೆರಡು ದಿನ ಮಳೆ ಆರ್ಭಟ ಮುಂದುವರಿಯಲಿದೆ

Spread the love

ಬೆಂಗಳೂರು: ರಾಜ್ಯದಲ್ಲಿ ಅಕ್ಟೋಬರ್ 27ರವರೆಗೆ ಭಾರೀ ಮಳೆಯಾಗುತ್ತದೆ. ಬೆಂಗಳೂರಿನಲ್ಲಿ ಇನ್ನೆರಡು ದಿನ ಮಳೆ ಆರ್ಭಟ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆಯ ಎಚ್ಚರಿಕೆ ನೀಡಿದೆ.

ಈ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕ ಆಯ್ತು, ಈಗ ಬೆಂಗಳೂರು ಸರದಿ. ಮುಂಬೈ, ಹೈದರಾಬಾದ್ ರೀತಿ ಬೆಂಗಳೂರು ಕೂಡ ಮುಳುಗುತ್ತಾ ಎಂಬ ಆತಂಕ ಸದ್ಯ ಎದುರಾಗಿದೆ. ಅಕ್ಟೋಬರ್ ತಿಂಗಳ ಈ ಮಳೆ ಕಂಟಕ ಇನ್ನೆಷ್ಟು ದಿನ ಅನ್ನೋ ಪ್ರಶ್ನೆ ಮೂಡಿದೆ. ಈ ಮಧ್ಯೆ ಮಳೆ ಭವಿಷ್ಯದ ಮಾಹಿತಿ ಭಯ ಹುಟ್ಟಿಸಿದೆ. ಸಿಲಿಕಾನ್ ಸಿಟಿಯಲ್ಲಿ ಇನ್ನೆರೆಡು ದಿನ ಯಲ್ಲೋ ಆಲರ್ಟ್ ಘೋಷಿಸಲಾಗಿದೆ.

ನಿನ್ನೆ ಬಂದ ಅರ್ಧ ಗಂಟೆ ಮಳೆಗೆ ಹೊಸಕರೆಹಳ್ಳಿ ಜಲಾವೃತವಾಗಿದೆ. ಇದೇ ರೀತಿ ಸತತ 2ರಿಂದ 4 ಗಂಟೆ ಮಳೆಯಾದ್ರೆ ಬೆಂಗಳೂರು ಮುಳುಗೋದು ಫಿಕ್ಸ್ ಅನ್ನೊವಂತಾಗಿದೆ. ಹೊಸಕೆರೆಹಳ್ಳಿಯಲ್ಲಿ ಇಂದು ಶುಚಿತ್ವ ಕಾರ್ಯ ನಡೀತಿದೆ. ಬೆಳ್ಳಂಬೆಳಗ್ಗೆಯೇ ಪೌರಕಾರ್ಮಿಕರು ಫೀಲ್ಡ್ ಗೆ ಇಳಿದಿದ್ದಾರೆ. ನಿನ್ನೆ ನೀರು ನುಗ್ಗಿದ ರಸ್ತೆಗಳ ಕ್ಲೀನಿಂಗ್ ಕಾರ್ಯ ಭರದಿಂದ ಸಾಗಿದೆ.

ಹೊಸಕೆರೆ ಹಳ್ಳಿಯ ದತ್ತಾತ್ರೇಯ ದೇವಾಲಯ ಸಂಪೂರ್ಣ ಜಲಾವೃತಗೊಂಡಿದೆ. ದೇವಾಲಯ ಹಿಂಭಾಗದಲ್ಲಿರುವ ಕಲ್ಯಾಣ ಮಂಟಪವೂ ಸಂಪೂರ್ಣ ಜಲಾವೃತವಾಗಿದ್ದು, ಕಲ್ಯಾಣ ಮಂಟಪದ ಅಂಡರ್ ಗ್ರೌಂಡ್ ನಲ್ಲಿ ಕಾಲಿಡಲು ಆಗದಂತೆ ಕೆಸರಿನ ಗದ್ದೆಯಂತಾಗಿದೆ. ಸಂಪೂರ್ಣವಾಗಿ ನೀರು ಹೋಗಿ ಕೆಸರು ಉಳಿದಿದೆ. ಕಲ್ಯಾಣ ಮಂಟಪದ ಕೆಸರನ್ನ ತಗೆಯಲು ಕನಿಷ್ಠ ಒಂದು ದಿನ ಬೇಕಾಗುತ್ತೆ.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ