ಬೆಂಗಳೂರು: ನಾನು ನನ್ನ ಇಡೀ ಕುಟುಂಬ ಕೊರೊನಾ ಸೋಂಕಿನಿಂದ ಬಳಲಿದ್ದೇವೆ. ನನಗೆ 70 ವರ್ಷ ವಯಸ್ಸಾಗಿದೆ. ವಯಸ್ಸಾದ ಕಾರಣ 600-700 ಕಿ.ಮೀ ಹೋಗಲು ಅಸಹಾಯಕನಾಗಿದ್ದೇನೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಕಣ್ಣಿರು ಹಾಕಿದ್ದಾರೆ.
ಶಿರಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಸುವ ವೇಳೆ ಹಾಜರಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಕಾರಜೋಳ, ಪ್ರವಾಹ ಪೀಡಿತ ಜಿಲ್ಲೆಗೆ ಭೇಟಿ ನೀಡದೇ ಚುನಾವಣೆ ಪ್ರಚಾರಕ್ಕೆ ಹೋಗಿದ್ದಾರೆ ಎಂದು ಒಂದು ಘಟನೆಯನ್ನಿಟ್ಟುಕೊಂಡು ವ್ಯಕ್ತಿಯನ್ನು ಅಳೆಯಬೇಡಿ. ನನಗೆ ವಯಸ್ಸಾಗಿದೆ. ಅಸಹಾಯಕನಾಗಿ ನಾನು ಶಿರಾಗೆ ಹೋಗಿ ಬಂದಿದ್ದೇನೆ ಎಂದಿದ್ದಾರೆ.
ನಾನು ನನ್ನ ಇಡೀ ಕುಟುಂಬ ಕೊರೊನಾ ಸೋಂಕಿನಿಂದ ಬಳಲಿದ್ದೇವೆ. ನನಗೆ 70 ವರ್ಷ ವಯಸ್ಸಾಗಿದೆ. ನಾನು ಇಷ್ಟು ವರ್ಷ ಚೆನ್ನಾಗಿ ಕೆಲಸ ಮಾಡಿದ್ದೇನೆ. ಈಗ ಕೊವಿಡ್ ಹಾಗೂ ವಯಸ್ಸಿನ ಕಾರಣದಿಂದ 600-700 ಕಿ.ಮೀ ಹೋಗಲು ಅಸಹಾಯಕನಾಗಿದ್ದೇನೆ ಎಂದು ಭಾವುಕರಾದರು.
ನನ್ನ ಪರಿಸ್ಥಿತಿಯಿಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನವರು ಕಂದಾಯ ಸಚಿವ ಆರ್.ಅಶೋಕ ಅವರನ್ನು ಕಲಬುರಗಿ ಜಿಲ್ಲೆಯ ಭೇಟಿಗೆ ಕಳುಹಿಸಿದ್ದಾರೆ. ನನ್ನ ಕಷ್ಟ ನಿಮ್ಮ ಮುಂದೆ ಸೂಕ್ಷ್ಮವಾಗಿ ಹೇಳಿದ್ದೇನೆ ಎಂದು ಹೇಳಿದ್ದಾರೆ